ನೂತನ ಆವಿಷ್ಕಾರದ ಮೂಲಕ ಇ-ಆರೋಗ್ಯ ಯೋಜನೆ


Team Udayavani, Jun 19, 2019, 6:10 AM IST

e-avishkara

ಕುಂಬಳೆ: ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಜಾರಿಗೊಳ್ಳುತ್ತಿರುವ ಇ-ಆರೋಗ್ಯ ಯೋಜನೆ ನೂತನ ಆವಿಷ್ಕಾರದ ಮೂಲಕ ಜನಾಕರ್ಷಣೆ ಪಡೆಯಲಿದೆ.

ಈ ನೂತನ ಸೌಲಭ್ಯ ಮೂಲಕ ಚಿಕಿತ್ಸೆ ಆನ್‌ಲೆ„ನ್‌ ಮುಖಾಂತರ ಲಭ್ಯವಾಗಲಿದ್ದು, ಉಳಿದ ವಿಚಾರಗಳನ್ನು ಹೆಲ್ತ್‌ ಕಾರ್ಡ್‌ ಮೂಲಕ ಪಡೆಯಬಹುದಾಗಿದೆ.

ಆರೋಗ್ಯ ಕೇಂದ್ರಗಳಿಗೆ ಆಗಮಿಸುವ ರೋಗಿಗಳು ಆಧಾರ್‌ ನಂಬ್ರವನ್ನು ಸ್ವಾಗತ ಕೊಠಡಿ (ರಿಸೆಪ್ಶನ್‌ ಕೌಂಟರ್‌) ಯಲ್ಲಿ ನೀಡಿದರೆ ಅಲ್ಲಿಂದ ಐಡಿ ಕಾರ್ಡ್‌ ಲಭಿಸುವುದು. ಇದರೊಂದಿಗೆ ಆಧಾರ್‌ ಲಿಂಕ್‌ ನಡೆಸುವ ವ್ಯಕ್ತಿಯ ಆರೋಗ್ಯ ಸಂಬಂಧಿ‌ ವಿಚಾರಗಳು ದಾಖಲಾಗುವುದು.

ಎಲ್ಲ ವಿಚಾರ ದಾಖಲು
ಧೂಮಪಾನ, ಕುಡಿತ ಇತ್ಯಾದಿ ದುಶ್ಚಟಗಳು, ಬದುಕಿನ ರೀತಿ, ವಾಸಿಸುತ್ತಿರುವ ಪ್ರದೇಶದ ಪರಿಸ್ಥಿತಿ ಇತ್ಯಾದಿ ಸಮಗ್ರ ವಿಚಾರಗಳೂ ಇದರಲ್ಲಿ ನಮೂದನೆಗೊಳ್ಳುವುವು. ಚಿಕಿತ್ಸೆಗೆ ಸಂಬಂಧಿಸಿದ ತಪಾಸಣೆಯ ವರದಿಗಳೆಲ್ಲವೂ ಕಾರ್ಡಿಗೆ ಆನ್‌ ಲೆ„ನ್‌ ಮೂಲಕ ಅಪ್‌ ಲೋಡ್‌ ಆಗುವುದು.

ಈ ಕಾರ್ಡ್‌ ಬಳಸಿ ವೈದ್ಯರು ರೋಗಿಯ ಎಲ್ಲ ವಿಚಾರಗಳನ್ನೂ ತಿಳಿದುಕೊಳ್ಳಲು ಸಾಧ್ಯವಾಗುವುದು. ಮನೆಯಲ್ಲಿದ್ದುಕೊಂಡೇ ರೋಗಿಗಳು ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿರುವುದು ಇದರ ಇನ್ನೊಂದು ವಿಶೇಷವಾಗಿದೆ. ಜತೆಗೆ ಪ್ರಯೋಗಾಲಯ, ಔಷಧಿ ಅಂಗಡಿ ಇತ್ಯಾದಿಗಳ ಟೋಕನ್‌ ಪಡೆಯಲೂ ಸಾಧ್ಯವಾಗಲಿದೆ. ಯಾವುದೇ ಸರಕಾರಿ ಮೆಡಿಕಲ್‌ ಕಾಲೇಜಿನ ವೈದ್ಯರ ಟೋಕನ್‌ ಬೇಕಿದ್ದರೂ ಈ ಕಾರ್ಡ್‌ನ ಸಹಾಯದಿಂದ ಪಡೆದುಕೊಳ್ಳಬಹುದು.ರೆಫರ್‌ ನಡೆಸುವ ರೋಗಿಗಳು ಎಲ್ಲ ದಾಖಲೆ ಪತ್ರಗಳನ್ನೂ ಒಯ್ಯಬೇಕಿಲ್ಲ. ಒಂದು ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ವಿಚಾರಗಳೂ ಆಧಾರ್‌ ಮೂಲಕ ಲಭಿಸುವ ಹಿನ್ನೆಲೆಯಲ್ಲಿ ಹರಡುವ ರೋಗಗಳು ಇತ್ಯಾದಿಗಳನ್ನು ಶೀಘ್ರದಲ್ಲೇ ಪತ್ತೆಹಚ್ಚಿ ಅಗತ್ಯದ ಪ್ರತಿರೋಧ ಚಟುವಟಿಕೆಗಳನ್ನು ನಡೆಸಲು ಇ-ಹೆಲ್ತ್‌ ಯೋಜನೆ ಮೂಲಕ ಸುಲಭವಾಗಲಿದೆ. ಜತೆಗೆ ಕೇಂದ್ರ-ರಾಜ್ಯ ಸರಕಾರಗಳ ಆರೋಗ್ಯ ವಿಮೆ ಜಾರಿಗೊಳಿಸಲು ಹೆಲ್ತ್‌ ಕಾರ್ಡ್‌ ಸೌಲಭ್ಯ ಪೂರಕವಾಗಲಿದೆ.

ಇದರಂಗವಾಗಿ ಮೊಗ್ರಾಲ್‌ ಪುತ್ತೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಇ-ಹೆಲ್ತ್‌ ಯೋಜನೆ ಜಾರಿಗೊಂಡಿದೆ. ಮೊಗ್ರಾಲ್‌ ಪುತ್ತೂರು ಗ್ರಾ. ಪಂ.ನಲ್ಲಿ ಶೇ. 70 ಮನೆಗಳು ಈಗ ಇ-ಹೆಲ್ತ್‌ ಯೋಜನೆಯಲ್ಲಿ ಅಳವಡಿಸಲಾಗಿದೆ. ಇದನ್ನು ಶೇ. 100ಕ್ಕೊಯ್ಯುವ ಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಐ.ಎಸ್‌.ಒ. ಸರ್ಟಿಫಿಕೆಟ್‌ ಪಡೆದ ಪ್ರಥಮ ಎಫ್‌.ಎಚ್‌.ಸಿ. ಎಂಬ ಹೆಗ್ಗಳಿಕೆಗೆ ಮೊಗ್ರಾಲ್‌ ಪುತ್ತೂರಿನ ಕುಟುಂಬ ಆರೋಗ್ಯ ಕೇಂದ್ರ ಪಾತ್ರವಾಗಿದೆ. ಇ-ಹೆಲ್ತ್‌ ಯೋಜನೆ ಜಾರಿಗೊಳ್ಳುವ ಜಿಲ್ಲೆಯ ಎರಡನೇ ಕೇಂದ್ರವೂ ಇದಾಗಿದೆ. ಕಯ್ಯೂರು-ಚೀಮೇನಿ ಕುಟುಂಬ ಆರೋಗ್ಯ ಕೇಂದ್ರ ಮೊದಲ ಕೇಂದ್ರವಾಗಿದೆ ಮೊಗ್ರಾಲ್‌ ಪುತ್ತೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಇ-ಹೆಲ್ತ್‌ ಯೋಜನೆಯ ಜಾರಿ ಸಮಾರಂಭ ಜರಗಿತು. ಮೊಗ್ರಾಲ್‌ ಪುತ್ತೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಎ.ಎ. ಜಲೀಲ್‌ ಯೋಜನೆಯನ್ನು ಉದ್ಘಾಟಿಸಿದರು. ಗ್ರಾ.ಪಂ.ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್‌ ಬೆಳ್ಳೂರು ಅಧ್ಯಕ್ಷತೆ ವಹಿಸಿದ್ದರು.

ವೈದ್ಯಾಧಿಕಾರಿ ಡಾ| ನಾಸ್ಮಿನ್‌ ಜೆ. ನಝೀರ್‌ ವರದಿ ವಾಚಿಸಿದರು. ಆರೋಗ್ಯ ಇನ್ಸ್‌ ಪೆಕ್ಟರ್‌ ಬಿ. ಅಶ್ರಫ್‌, ಪಂಚಾಯತ್‌ ಸದಸ್ಯೆ ಇ.ಪ್ರಮೀಳಾ, ಇ-ಹೆಲ್ತ್‌ ಸಂಚಾಲಕಿ ಸಜಿತಾ, ಆಸ್ಪತ್ರೆ ಅಭಿವೃದ್ಧಿ ಸಮಿತಿ ಸದಸ್ಯ ನಾಂ ಹನೀಫ, ಫಾರ್ಮಾಸಿಸ್ಟ್‌ ರತೀಶ್‌, ಆಸ್ಪತ್ರೆ ಸಿಬಂದಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.