ಜಿಲ್ಲೆಯಲ್ಲೂ ಸಂಚಾರ ಆರಂಭಿಸಿದ ಪ್ರಕೃತಿ ಸ್ನೇಹಿ ಇ-ಆಟೋಗಳು

ಮಾಲಿನ್ಯ ತಡೆಗೆ ಸಹಕಾರಿ

Team Udayavani, Nov 14, 2019, 4:00 AM IST

vv-1

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಂದ ಇ-ಆಟೋ ವೀಕ್ಷಣೆ.

ಕಾಸರಗೋಡು: ರಾಜ್ಯದಲ್ಲಿ ಈಗಾಗಲೇ ಕಡಿಮೆ ದರದಲ್ಲಿ ಸಂಚಾರ ಸೇವೆ ಒದಗಿಸುವ ಇ-ಆಟೋ ಜಿಲ್ಲೆಯಲ್ಲೂ ತನ್ನ ಸಂಚಾರಿ ಸೌಲಭ್ಯ ಆರಂಭಿಸಿದೆ. ಜಿಲ್ಲೆಯಲ್ಲಿ ಇ-ಆಟೋದ ಸೇವೆ ಪ್ರಾರಂಭ ವಾಗಿದೆ. 55 ನಿಮಿಷಗಳಲ್ಲಿ ಬ್ಯಾಟರಿಯನ್ನು ಪೂರ್ಣಪ್ರಮಾದಲ್ಲಿ ರೀಚಾರ್ಜ್‌ ನಡೆಸ ಬಹುದಾದ, ಒಮ್ಮೆ ಚಾರ್ಜ್‌ ನಡೆಸಿದರೆ 100 ಕಿ.ಮೀ. ನಿರಾಳವಾಗಿ ಸಂಚಾರ ನಡೆಸಬಹುದು. ಒಂದು ಕಿ.ಮೀ. ಗೆ ಕೇವಲ 50 ಪೈಸೆ ವೆಚ್ಚ ತಗುಲುವುದು. ಪೆಟ್ರೋಲ್‌, ಡೀಸೆಲ್‌ ಇಂಧನ ಬಳಸಿ ಸಂಚಾರ ನಡೆಸುವ ವಾಹನಗಳಿಂದುಂಟಾಗುವ ಪರಿಸರ ಮಾಲಿನ್ಯದ ಭೀತಿಯಿಲ್ಲ ಇತ್ಯಾದಿಗಳು ಗಮನಾರ್ಹವಾಗಿದ್ದು, ಇ-ಆಟೋವನ್ನು ಜನಜನಿತಗೊಳಿಸಲಾಗುತ್ತಿದೆ.

ಅತಿ ವೇಗದಲ್ಲಿ ಬೆಳೆಯುತ್ತಿರುವ ಜಿಲ್ಲೆಯ ಎಲ್ಲ ಪೇಟೆಗಳಿಗೆ ಇ-ಆಟೋಗಳು ಅನುಯೋಜ್ಯ ವಾಗಿವೆ. ಶೀಘ್ರದಲ್ಲೇ ಈ ಕಡೆಗಳಲ್ಲಿ ಇ-ಆಟೋಗಳು ಆಗಮಿಸಿ, ಸಂಚಾರ ನಡೆಸಲಿವೆ. ಪ್ರತಿದಿನ ಇಂಧನ ಬಳಸುವ ವಾಹನಗಳು ನೀಡುವ ಪರಿಸರ ಮಾಲಿನ್ಯದ ಅಡ್ಡಪರಿಣಾಮದ ಪರಿಹಾರಕ್ಕೆ ಶಾಶ್ವತ ಪರಿಹಾರ ಎಂಬಂತೆ ಪ್ರಕೃತಿ ಸ್ನೇಹಿ ವಾಹನವಾಗಿರುವ ಇ-ಆಟೋವನ್ನು ಎಲ್ಲರೂ ಎರಡೂ ಕೈಗಳಿಂದ ಸ್ವಾಗತಿಸುತ್ತಿದ್ದಾರೆ.

ಪ್ರಕೃತಿ ಸ್ನೇಹಿ ವಾಹನ
ರಾಜ್ಯ ಸರಕಾರದ ಇ-ವಾಹನ ನೀತಿಯ ಹಿನ್ನೆಲೆಯಲ್ಲಿ ಇ-ಆಟೋದ ನಿರ್ಮಾಣ ನಡೆದಿದೆ. ರಾಜ್ಯ ಸಾರ್ವಜನಿಕ ಸಂಸ್ಥೆ ಕೇರಳ ಅಟೋಮೊಬೈಲ್ಸ್‌ ನಿಗಮ (ಕೆ.ಎ.ಎಲ್‌.)ಇ-ಆಟೋವನ್ನು ನಿರ್ಮಿಸುತ್ತಿದೆ. ದೇಶದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ ಸಂಸ್ಥೆಯೊಂದು ಇ-ಆಟೋದಂತಹ ವಾಹನ ನಿರ್ಮಾಣಕ್ಕೆ ಪರವಾನಗಿ ಪಡೆದಿದೆ ಎಂಬುದೂ ಗಮನಾರ್ಹ ವಿಚಾರ. ಈ ವಾಹನದ ಎಲ್ಲ ಬಿಡಿ ಭಾಗಗಳೂ ದೇಶದಲ್ಲೇ ನಿರ್ಮಾಣಗೊಳ್ಳುತ್ತಿವೆ. ನೇರನೋಟಕ್ಕೆ ಇತರ ಆಟೋರಿಕ್ಷಾಗಳಂತೆಯೇ ಕಾಣುವ ರೀತಿ ಇ-ಆಟೋಗಳನ್ನು ತಯಾರಿಸಲಾಗಿದೆ. ಶಬ್ದ ಕಡಿಮೆ ಮತ್ತು ಸುರಕ್ಷಿತ ಚಾಲನೆಯ ವ್ಯವಸ್ಥೆಯೂ ಈ ವಾಹನದ ವಿಶೇಷವಾಗಿದೆ. ಚಾಲಕನಲ್ಲದೆ, ಏಕಕಾಲಕ್ಕೆ ಮೂವರು ಪ್ರಯಾಣಿಕರು ಸಂಚರಿಸಬಹುದಾಗಿದೆ.

ಈ ವಾಹನದ ಬೆಲೆ 2.8 ಲಕ್ಷ ರೂ.ಇದೆ. ಆರಂಭದಲ್ಲಿ ನೀಂ ಜೀಂ ಆಟೋಗಳು ಕೆ.ಎ.ಎಲ್‌. ಸಂಸ್ಥೆಯ ಮೂಲಕ ನೇರವಾಗಿ ಮಾರಾಟಗೊಳ್ಳುತ್ತವೆ. ಮುಂದಿನ ಹಂತ ದಲ್ಲಿ ಉಳಿದ ಜಿಲ್ಲೆಗಳಲ್ಲಿ ಡೀಲರ್‌ ಶಿಪ್‌ ನೀಡಲಾಗುವುದು. ಇ-ಆಟೋಗೆ ರಾಜ್ಯ ಸರಕಾರದ ಸಬ್ಸಿಡಿ ಸೌಲಭ್ಯ ಲಭ್ಯ ವಾದರೆ ಬೆಲೆ ಯಲ್ಲಿ 30 ಸಾವಿರ ರೂ. ಕಡಿಮೆಯಾಗಲಿದೆ.

ಇ-ಆಟೋವನ್ನು ಬೆಂಬಲಿಸಿ : ಜಿಲ್ಲಾಧಿಕಾರಿ
ಇ-ಆಟೋವನ್ನು ನಾವೆಲ್ಲರೂ ಬೆಂಬಲಿಸ ಬೇಕು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಆಗ್ರಹಿಸಿದ್ದಾರೆ. ವಿದ್ಯುನ್ಮಾನ ವಾಹನಗಳ ಬಗ್ಗೆ ನಾವು ತೋರುವ ಆಸಕ್ತಿಯ ಬಲುದೊಡ್ಡ ಹೆಜ್ಜೆಗಾರಿಕೆ ಇ-ಆಟೋಗಳಾಗಿವೆ. ಜಿಲ್ಲೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿರುವಂತೆಯೇ ಪರಿಸರ ಮಾಲಿನ್ಯವೂ ನಿಯಂತ್ರಣಾತೀತವಾಗಿ ವರ್ಧಿಸುತ್ತಿದೆ. ಸೌರಶಕ್ತಿ ಮೂಲಕದ ವಿದ್ಯುತ್‌ ಬಳಕೆಗೆ ಆದ್ಯತೆ ನೀಡುತ್ತಿರುವ ನಮ್ಮ ಮಟ್ಟಿಗೆ ಇ-ಆಟೋ ಮಹತ್ವ ಪಡೆಯುತ್ತದೆ. ಹೆಚ್ಚುವರಿ ಆಟೋಚಾಲಕರು ಇ-ಆಟೋಗಳ ಕಡೆಗೆ ವರ್ಗಾವಣೆ ಗೊಳ್ಳಬೇಕು ಎಂದವರು ಆಗ್ರಹಿಸಿದರು.

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.