ಇಂದು ನವೀಕರಿಸಿದ ಆರ್ಟ್‌ ಗ್ಯಾಲರಿ ಉದ್ಘಾಟನೆ: ಕನ್ನಡದ ಅವಗಣನೆ


Team Udayavani, Feb 15, 2020, 6:31 AM IST

gallery

ಕಾಸರಗೋಡು: ನವೀಕರಿಸಿದ ಕಾಂಞಂಗಾಡ್‌ನ‌ ಆರ್ಟ್‌ ಗ್ಯಾಲರಿ ಮತ್ತು ಗೋಡೆ ಚಿತ್ರಗಳು ಫೆ. 15ರಂದು ಸಂಜೆ 4.30ಕ್ಕೆ ಉದ್ಘಾಟನೆಗೊಳ್ಳಲಿವೆ.
ನವೀಕರಿಸಿದ ಆರ್ಟ್‌ ಗ್ಯಾಲರಿಯಲ್ಲಿ ಎಲ್ಲೂ ಕನ್ನಡದ ನಾಮಫಲಕವಿಲ್ಲ. ಈ ಮೂಲಕ ಕಾಸರಗೋಡಿನ ಭಾಷಾ ಅಲ್ಪ ಸಂಖ್ಯಾತರನ್ನು ಮತ್ತೆ ಅವಗಣಿಸಿದೆ. ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ, ಅರೆ ಸರಕಾರಿ ಸಂಸ್ಥೆಗಳಲ್ಲಿ ಮತ್ತು ಸರಕಾರಿ ಸಂಬಂಧ ಕಚೇರಿಗಳಲ್ಲಿ ರಾಜ್ಯ ಭಾಷೆ ಮಲಯಾಳದ ಜತೆಯಲ್ಲಿ ಕನ್ನಡದಲ್ಲೂ ನಾಮಫಲಕವನ್ನು ಅಳವಡಿಸಬೇಕೆಂದು ಜಿಲ್ಲಾ ಆಡಳಿತದ ನಿರ್ದೇಶವಿದ್ದರೂ ಎಂದಿನಂತೆ ಇಲ್ಲೂ ಕನ್ನಡವನ್ನು ಅವಗಣಿ ಸಲಾಗಿದೆ.

ಶನಿವಾರ ಉದ್ಘಾಟನೆಗೊಳ್ಳಲಿರುವ ನವೀಕೃತ ಆರ್ಟ್‌ ಗ್ಯಾಲರಿಯಲ್ಲಿ ಮಲಯಾಳ ದಲ್ಲಿ ಮಾತ್ರವೇ ನಾಮಫಲಕವನ್ನು ಅಳವಡಿಸಲಾಗಿದೆ. ಗ್ಯಾಲರಿಯಲ್ಲಿ ಕನ್ನಡದ ನಾಮ ಫಲಕವನ್ನು ಹಾಕದಿರುವ ಮೂಲಕ ಕನ್ನಡವನ್ನು ಅವಗಣಿಸಿದೆ. ಕನ್ನಡದಲ್ಲಿ ನಾಮಫಲಕ ಹಾಕದಿರುವ ಬಗ್ಗೆ ಕಾಂಞಂಗಾಡ್‌ನ‌ ವಿವಿಧ ಕನ್ನಡ ಪರ ಸಂಘಟನೆಗಳು ಖಂಡಿಸಿವೆ.
ನವೀಕರಿಸಿದ ಕಾಂಞಂಗಾಡ್‌ನ‌ ಆರ್ಟ್‌ ಗ್ಯಾಲರಿ ಮತ್ತು ಗೋಡೆ ಚಿತ್ರ ಗಳನ್ನು ಕಾಂಞಂಗಾಡ್‌ ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್‌ ಉದ್ಘಾಟಿಸುವರು. ಲಲಿತಕಲಾ ಅಕಾಡೆಮಿ ಚೆಯರ್‌ಮನ್‌ ನೇಮಂ ಪುಷ್ಪರಾಜ್‌ ಅಧ್ಯಕ್ಷತೆ ವಹಿಸುವರು. ಕಾಂಞಂಗಾಡ್‌ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷೆ ಎಂ.ಗೌರಿ, ಕಾಂಞಂಗಾಡ್‌ ನಗರಸಭಾ ಸದಸ್ಯರಾದ ರಂಶೀದ್‌ ಹೊಸದುರ್ಗ ಶುಭಹಾರೈಸುವರು.

ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿ ಗಳಾದ ಕೆ. ರಾಜ್‌ಮೋಹನ್‌, ಡಿ.ವಿ. ಬಾಲಕೃಷ್ಣನ್‌, ಸಿ.ಕೆ. ಬಾಬುರಾಜ್‌, ನ್ಯಾಯ ವಾದಿ ಎನ್‌.ಎ. ಖಾಲೀದ್‌, ಎನ್‌. ಮಧು, ಎನ್‌. ಕುಂಞಿರಾಮನ್‌, ಕೈಪತ್ತ್ ಕೃಷ್ಣನ್‌ ನಂಬ್ಯಾರ್‌, ಪಿ.ವಿ.ರಾಜು, ವಿ.ಕೆ. ರಮೇಶನ್‌. ಸಿ.ವಿ. ದಾಮೋದರನ್‌, ಪಿ.ವಿ. ಬಾಲನ್‌, ಎಬಿ ಎನ್‌. ಜೋಸೆಫ್‌ ಮೊದಲಾದವರು ಉಪಸ್ಥಿತರಿರುವರು.

ಕಾಂಞಂಗಾಡ್‌ ಆರ್ಟ್‌ ಗ್ಯಾಲರಿಯಲ್ಲಿ ಎ.ಸಿ. ಸೌಕರ್ಯವೂ, ಅಂತಾರಾಷ್ಟ್ರೀಯ ಗುಣಮಟ್ಟದ ಲೈಟಿಂಗ್‌ ಸೌಕರ್ಯವೂ, 500 ರಷ್ಟು ಚಿತ್ರಗಳನ್ನು ಸಂಗ್ರಹಿಸುವಷ್ಟು ಸೌಕರ್ಯವನ್ನು ಕಲ್ಪಿಸಲಾಗಿದೆ. ದೊಡ್ಡ ಗಾತ್ರದ 30 ಚಿತ್ರಗಳನ್ನು ಸಜ್ಜುಗೊಳಿಸುವ ಸೌಕರ್ಯವನ್ನು ಆರ್ಟ್‌ ಗ್ಯಾಲರಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಚಿತ್ರಗಳು ಸಣ್ಣ ಗಾತ್ರದಲ್ಲಿದ್ದರೆ ಕನಿಷ್ಠ 45 ರಷ್ಟು ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲು ಸ್ಥಳಾವಕಾಶವಿದೆ.

ಗೋಡೆ ಚಿತ್ರಗಳು
ಗ್ಯಾಲರಿಗೆ ಸೇರಿದ ನಗರಸಭಾ ವ್ಯಾಪ್ತಿಯಲ್ಲಿ ಬರುವ ಕಟ್ಟಡದ ಗೋಡೆಯಲ್ಲಿ ಮೂರು ವಿಭಾಗಗಳಾಗಿ ವಿಂಗಡಿಸಿ ಏಳು ಮಂದಿ ಚಿತ್ರ ಕಲಾವಿದರು ಕೇರಳೀಯ ಶೈಲಿಯಲ್ಲಿ ಗೋಡೆ ಚಿತ್ರಗಳನ್ನು ರಚಿಸಿದ್ದು, ಅವುಗಳ ಉದ್ಘಾಟನೆಯೂ ನಡೆಯಲಿದೆ. ಕಾಂಞಂಗಾಡ್‌ನ‌ ಇತಿಹಾಸವನ್ನು ತಿಳಿಸುವ ಚಿತ್ರಗಳು ಹೊಸ ತಲೆಮಾರಿಗೆ ಕುತೂಹಲಕಾರಿಯಾಗಲಿದೆ.

6 ಲಕ್ಷ ರೂ. ವೆಚ್ಚ
ಕಾಂಞಂಗಾಡ್‌ನ‌ ಆರ್ಟ್‌ ಗ್ಯಾಲರಿಯನ್ನು ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗಿದ್ದು, ಆರ್ಟ್‌ ಗ್ಯಾಲರಿಗೆ ಸಂದರ್ಶಿಸಿ ಇತಿಹಾಸ ಪುಟಗಳನ್ನು ತಿಳಿದುಕೊಳ್ಳಲು ಸಾರ್ವಜನಿಕರಿಗೂ, ವಿದ್ಯಾರ್ಥಿಗಳಿಗೂ ಅವಕಾಶ ನೀಡಲು ಲಲಿತ ಕಲಾ ಅಕಾಡೆಮಿ ವ್ಯವಸ್ಥೆಗೊಳಿಸಿದೆ. ಈ ಆರ್ಟ್‌ ಗ್ಯಾಲರಿಯನ್ನು ಇನ್ನೂ ಅಭಿವೃದ್ಧಿ ಪಡಿಸಲಾಗುವುದೆಂದು ಲಲಿತ ಕಲಾ ಅಕಾಡೆಮಿ ವೈಸ್‌ ಚೆಯರ್‌ವೆುàನ್‌ ಎ.ಬಿ.ಎನ್‌.ಜೋಸೆಫ್‌ ತಿಳಿಸಿದ್ದಾರೆ.

ಕಲಾವಿದರು ಉಳಿಸಿಕೊಂಡ ಗ್ಯಾಲರಿ
ರಸ್ತೆ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಈ ಹಳೆಯ ಕಟ್ಟಡವನ್ನು ಮುರಿದು ತೆಗೆಯಲು ತೀರ್ಮಾನಿಸಲಾಗಿತ್ತು. ಈ ತೀರ್ಮಾನದ ವಿರುದ್ಧ ಕಲಾವಿದರು ಮತ್ತು ಸ್ಥಳೀಯರು ಹೋರಾಟ ನಡೆಸಿದ ಪರಿಣಾಮವಾಗಿ ಹಳೆಯ ಆರ್ಟ್‌ ಗ್ಯಾಲರಿಯನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಅತ್ಯಂತ ಶೋಚನೀಯಾವಸ್ಥೆಯಲ್ಲಿದ್ದ ಆರ್ಟ್‌ ಗ್ಯಾಲರಿಯ ಹಳೆಯ ಕಟ್ಟಡ ಇದೀಗ ನವೀಕರಣಗೊಂಡು ಉದ್ಘಾಟನೆಗೆ ಸಿದ್ಧಗೊಂಡಿದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.