ಸಮರೋಪಾದಿ ಕಾರ್ಯಾಚರಣೆಗಿಳಿದ ಜಿಲ್ಲಾಡಳಿತ
ಕೋವಿಡ್-19 ರೋಗಬಾಧಿತರ ಸಂಖ್ಯೆ ದುಪ್ಪಟ್ಟು
Team Udayavani, Mar 25, 2020, 4:23 AM IST
ಮಂಜೇಶ್ವರ: ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ವೈರಸ್ ರೋಗಬಾಧಿತರ ಸಂಖ್ಯೆ ದಿನೇ ದಿನೇ ದುಪ್ಪಟ್ಟಾಗುವುದರೊಂದಿಗೆ ಎಲ್ಲ ಇಲಾಖೆಗಳು ಹೈ ಅಲರ್ಟ್ ಆಗಿ ಕಾರ್ಯ ನಿರ್ವಹಿಸತೊಡಗಿವೆ. ಮಂಗಳ ವಾರದಂದು ಜಿಲ್ಲೆಯಲ್ಲಿ ಲಾಕ್ ಡೌನ್ ಬಿಗಿಗೊಳಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ತಂಡವನ್ನು ಆಯೋಜಿಸ ಲಾಗಿದೆ. ಆರೋಗ್ಯ ಇಲಾಖೆ, ಸ್ಥಳಿಯಾ ಡಳಿತ ಸಂಸ್ಥೆ, ವಿದ್ಯಾಭ್ಯಾಸ ಇಲಾಖೆ, ನಾಗರಿಕ ಪೂರೈಕೆ ಇಲಾಖೆ ಜಂಟಿಯಾಗಿ ಸಮರೋಪಾದಿಯ ಕಾರ್ಯಾ ಚರಣೆಗಿಳಿದಿದ್ದು. ರೋಗ ಹರಡದಂತೆ ವ್ಯಾಪಕ ಜಾಗ್ರತೆ ಏರ್ಪಡಿಸಲಾಗಿದೆ.
ಪಂಚಾಯತ್ ಮಟ್ಟದಲ್ಲಿ ತುರ್ತು ಕೊಠಡಿಗಳು
ಆಸ್ಪತ್ರೆಗಳಲ್ಲಿ ಹೆಚ್ಚುವರಿ ವಾರ್ಡ್ಗಳನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದರೂ ಇದೀಗ ಪ್ರತಿಯೊಂದು ಪಂಚಾಯತನ್ನು ಕೇಂದ್ರೀಕರಿಸಿ ವಿಶೇಷ ತುರ್ತು ಚಿಕಿತ್ಸೆ ವ್ಯವಸ್ಥೆ ಘಟಕವನ್ನು ಸ್ಥಾಪಿಸಲಾಗಿದೆ. ಸ್ಥಳಿಯಾಡಳಿತ ಹಾಗೂ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ವಿವಿಧ ಯುವಜನ ಸಂಘಟನೆಯ ಕಾರ್ಯಕರ್ತರ ನೆರವಿನೊಂದಿಗೆ ಶಾಲಾ ಕಟ್ಟಡದಲ್ಲಿ ತುರ್ತು ಚಿಕಿತ್ಸಾ ಕೊಠಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಕೊರೊನಾ ಪೀಡಿತರಿಗೆ ಕ್ವಾರಂಟೈನ್ ಕೊಠಡಿ ಹಾಗೂ ಶಂಕಿತರಿಗೆ ಐಸೋ ಲೇಶನ್ ಕೊಠಡಿಗಳನ್ನು ಈಗಾಗಲೇ ಸಜ್ಜುಗೊಳಿಸಲಾಗಿದೆ.
ಮನೆ ಬಿಟ್ಟು ಹೊರಬರಬೇಡಿ: ಮನವಿ
ವಿದೇಶಗಳಿಂದ ಆಗಮಿಸಿದವರು, ಅನ್ಯರಾಜ್ಯಗಳಿಂದ ಆಗಮಿಸಿದವರು ತತ್ಕ್ಷಣವೇ ಆಯಾ ಪ್ರಾಥಾಮಿಕ ಕೇಂದ್ರಗಳಿಗೆ ತೆರಳಿ ಆರೋಗ್ಯ ತಪಾಸಣೆ ನಡೆಸುವಂತೆ ಜಿಲ್ಲಾಡಳಿತ ಆದೇಶ ನೀಡಿದೆ. ತಪಾಸಣೆಯ ಬಳಿಕ ರೋಗಬಾಧಿತರನ್ನು ತತ್ಕ್ಷಣವೇ ಚಿಕಿತ್ಸಾ ಕೊಠಡಿಗೆ ಸ್ಥಳಾಂತರಿಸಲಾಗುವುದು ಮಾತ್ರವಲ್ಲ ಅವರ ವಿವರವನ್ನು ಗೌಪ್ಯವಾಗಿಡಲಾಗುವುದು. ರೋಗ ಬಾಧಿತರಲ್ಲದವರು 14 ದಿವಸಗಳ ಕಾಲ ಮನೆ ಯಲ್ಲಿಯೇ ಐಸೋಲೇಶನ್ ನಲ್ಲಿರಬೇಕಾಗಿದ್ದು, ಯಾವುದೇ ಕಾರಣಕ್ಕೂ ಸಾರ್ವಜಿನಿಕವಾಗಿ ಬೆರೆಯ ಬಾರದು. ವೈದ್ಯರ ನಿರ್ದೇಶಗಳನ್ನು ಉಲ್ಲಂಘಿಸಿ ಮನೆಬಿಟ್ಟು ಹೊರಬರು ವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.
ಸ್ವಯಂ ಸೇವಕರೂ ಎಚ್ಚರವಾಗಿರಿ
ಇದೀಗ ಎಲ್ಲೆಡೆ ಆತಂಕದ ಕರಿಛಾಯೆ ಮೂಡಿದ್ದು, ಕಾಸರಗೋಡು ಜಿಲ್ಲೆಯ ಜನತೆಯ ಪರಿಸ್ಥಿತಿ ಊಹಿಸಲಾಸಾಧ್ಯವಾಗಿದೆ. ಕೊರೊನ ವೈರಸ್ ರೋಗ ಹರಡದಂತೆ ಹಲವಾರು ಸಂಘಟನೆಗಳು ಮುಂಚೂಣಿಗೆ ಬಂದಿವೆ. ಪಂಚಾಯತ್ ಮಟ್ಟದ ಐಸೋಲೇಶನ್ ಕೊಠಡಿ ಸ್ಥಾಪನೆಗೆ ಕಾಯಾವಾಚಾಮನಸಾ ದುಡಿದಿದ್ದಾರೆ. ಈ ನಡುವೆ ಇವರ ಆರೋಗ್ಯ ಸುರಕ್ಷತೆಯ ಬಗ್ಗೆಯೂ ಎಚ್ಚರ ಅತ್ಯಗತ್ಯ. ಆರೋಗ್ಯ ಇಲಾಖೆಯು ಈ ಕುರಿತು ಮಾಹಿತಿಯನ್ನು ನೀಡಿದ್ದು, ಸ್ವಯಂ ಸೇವಕರೂ ಸ್ವಯಂ ಸುರಕ್ಷರಾಗಿರಬೇಕೆಂದು ಎಚ್ಚರಿಕೆ ನೀಡಿದೆ.
ಆಹಾರ ಸಾಮಗ್ರಿಗಳ ಬೆಲೆ ದುಪ್ಪಟ್ಟು
ಎಲ್ಲೆಡೆ ಲಾಕ್ ಡೌನ್ ಹಾಗೂ ಗಡಿ ಪ್ರದೇಶಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸರಕು ಸಾಗಾಟದ ಮೇಲೂ ಪರಿಣಾಮ ಬೀರಿದೆ. ಇದರಿಂದಾಗಿ ದಿನಸಿ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದೆ. ತರಕಾರಿ ಸಾಮಾಗ್ರಿಗಳ ಅಲಭ್ಯತೆ ಸಮಸ್ಯೆ ತಲೆದೋರಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಸರಕಾರದ ಸಾರ್ವಜಿನಕ ವಿತರಣಾ ವ್ಯವಸ್ಥೆಯಲ್ಲಿ ವಿಶೆಷ ಬದಲಾವಣೆ ತರದಿದ್ದಲ್ಲಿ ಜನಸಾಮಾನ್ಯರು ಆಹಾರಕ್ಕಾಗಿ ಪರದಾಡಬೇಕಾದ ಸಮಯ ಖಂಡಿತಾ ದೂರವಿಲ್ಲ
ಲಾಕ್ಡೌನ್ ಮುಂದುವರಿಕೆ ಸಾಧ್ಯತೆ
ಕೊರೋನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ಒಂದು ಹಂತದ ಮಟ್ಟಿಗೆ ನಿಯಂತ್ರಿಸಲು ಲಾಕ್ ಡೌನ್ ಏರ್ಪಡಿಸಲಾಗಿದ್ದು, ಕೋವಿಡ್ 19 ನಿಯಂತ್ರಣಕ್ಕೆ ಬರದಿದ್ದರೆ ಲಾಕ್ ಡೌನ್ ಮುಂದುವರಿಯಲಿರುವ ಸೂಚನೆಯನ್ನು ಸರಕಾರ ನೀಡಿದೆ, ಮಾತ್ರವಲ್ಲ ಕಾಸರಗೋಡಿನಲ್ಲಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸರಕಾರ ಶತಾಗತಾಯ ಪ್ರಯತ್ನಿಸುತ್ತಿದೆ.
ಜಿಲ್ಲೆಯಲ್ಲಿ ಸರ್ವವೂ ನಿಶ್ಚಲವಾಗಿದ್ದು, ಕೊರೋನಾ ವೈರಾಣು ದಾಳಿಗೆ ಹೆದರಿ ಸಾರ್ವಜನಿಕರು ಭಯಾಂತಕಕ್ಕೊಳಗಾಗಿದ್ದಾರೆ. ರೋಗ ಹರಡದಂತೆ ಸ್ವಯಂಪ್ರೇರಿತರಾಗಿ ಎಲ್ಲರೂ ಮನೆಯಲ್ಲಿ ಕುಳಿತುಕೊಳ್ಳುವುದೇ ಏಕಮಾರ್ಗವಾಗಿದೆಯೆಂದು ಕಾಸರಗೋಡು ಜಿಲ್ಲಾಧಿಕಾರಿ ಡಾ| ಸಜಿತ್ ಬಾಬು ಜಿಲ್ಲೆಯ ಜನತೆಗೆ ಭಿನ್ನವಿಸಿದ್ದು, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು, ಶುಚಿತ್ವಕ್ಕೆ ಗಮನಕೊಡುವಂತೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ