ಶಾಲಾ ಕಟ್ಟಡಗಳಿಗೆ ರೈಲು ಬೋಗಿಯ ಲುಕ್!
Team Udayavani, Jul 6, 2018, 6:00 AM IST
ಕುಂಬಳೆ: ವಿದ್ಯಾಲಯಗಳಲ್ಲಿ ಮಕ್ಕಳ ಕೊರತೆ ಕಾಡುತ್ತಿರುವ ಇಂದಿನ ದಿನಗಳಲ್ಲಿ ಸರಕಾರಿ ಮತ್ತು ಅನುದಾನಿತ ಖಾಸಗಿ ವಿದ್ಯಾಲಯಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲು ಸರಕಾರ ಮತ್ತು ಶಾಲೆಯ ಪ್ರಬಂಧಕರು, ಶಿಕ್ಷಕ ರಕ್ಷಕ ಸಂಘದ ವತಿಯಿಂದ ಉಚಿತ ಪಾಠ ಪುಸ್ತಕ, ಸಮವಸ್ತ್ರ, ಕಲಿಕೋಪಕರಣಗಳ ಸಹಿತ ಅನೇಕ ಕೊಡುಗೆಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಅಂತೆಯೇ ರಾಜ್ಯ ಸರಕಾರದ ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಯೋಜನೆಯಲ್ಲಿ ಸುಮಾರು ಒಂದೂವರೆ ಲಕ್ಷ ನಿಧಿಯ ಮೂಲಕ ರಾಜ್ಯದ ವಿವಿಧ ಸರಕಾರಿ ಮತ್ತು ಖಾಸಗಿ ಹೈಸ್ಕೂಲ್ಗಳಲ್ಲಿ 23 ಸಹಸ್ರ ತರಗತಿಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸ್ಮಾರ್ಟ್ ತರಗತಿಗಳಾಗಿ ಮಾಡಲಾಗಿದೆ.
ಸರಕಾರವು 2016-17 ರಲ್ಲಿ ಆರಂಭಿಸಿದ ಈ ಮಹತ್ವಾಕಾಂಕ್ಷಿ ಯೋಜನೆಗೆ ಮಕ್ಕಳು ಆಕರ್ಷಿತರಾಗಿ 2017-18ರ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಒಟ್ಟು ವಿದ್ಯಾಲಯಗಳಲ್ಲಿ 1.35 ಸಹಸ್ರದಷ್ಟು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಹಾಲಿ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸಂಖ್ಯೆ 1.85 ಸಹಸ್ರಕ್ಕೆ ಏರಿದೆ. ಹವಾ ನಿಯಂತ್ರಿತ ತರಗತಿ ಕೊಠಡಿಯೊಳಗೆ ಎಲ್.ಸಿ.ಡಿ.ಪ್ರೊಜೆಕ್ಟರ್ ಮತ್ತು ಪರದೆ, ಕಂಪ್ಯೂಟರ್ಗಳನ್ನು ಅಳವಡಿಸಲಾಗಿದೆ. ಸಿನೆಮಾ ಥಿಯೇಟರ್ ಮಾದರಿ ತರಗತಿಯನ್ನು ತಂತ್ರಜ್ಞಾನದ ಮೂಲಕ ಮಾಡಲಾಗಿದೆ.
ಕೆಲವು ಶಾಲೆಗಳಲ್ಲಿ ಎಲ್ಲ ತರಗತಿಯ ಚಟುವಟಿಕೆಯನ್ನು ಶಾಲೆಯ ಮುಖ್ಯಶಿಕ್ಷಕರಿಗೆ ವೀಕ್ಷಿಸಲು ತರಗತಿಯಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ.ಕೆಲವು ಶಾಲೆಗಳಲ್ಲಿ ತರಗತಿಗಳಲ್ಲಿ ಮಕ್ಕಳಿಗೆ ಇನ್ನಿತರ ಆಕರ್ಷಣೆಯನ್ನು ಅಳವಡಿಸಲಾಗಿದೆ.ಸರಕಾರವು ವಿದ್ಯಾಲಯಗಳ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞದಲ್ಲಿ ಶಾಲೆಗಳಿಗೆ ವಿಜ್ಞಾನ ಪಾರ್ಕ್, ಗಣಿತ ಪಾರ್ಕ್, ಹಸಿರು ವಲಯ ಯೋಜನೆಯಲ್ಲಿ ಜೈವಿಕ ಪಾರ್ಕ್ ನಿರ್ಮಿಸಲು ಆನುದಾನ ನೀಡುತ್ತಿದೆ.
ರೈಲು ಬೋಗಿಯಂತಾದ ಕಟ್ಟಡ
ಕಾಸರಗೋಡು ಜಿಲ್ಲೆಯ ಬೇಕಲ ವಿದ್ಯಾಭ್ಯಾಸ ಉಪಜಿಲ್ಲೆಯ ಬಾರ ಸರಕಾರಿ ವಿದ್ಯಾಲಯವೊಂದು ಕಳೆದ ಶೈಕ್ಷಣಿಕ ವರ್ಷದಲ್ಲಿ ಪ್ರಥಮವಾಗಿ ಶಾಲೆಯ ತರಗತಿ ಕೋಣೆಗಳನ್ನು ನೀಲಿ ಬಿಳಿ ಬಣ್ಣದ ಮೂಲಕ ರೈಲು ಬೋಗಿಯನ್ನಾಗಿ ಮಾರ್ಪಡಿಸಿ ರಾಜ್ಯದ ಗಮನ ಸೆಳೆದಿತ್ತು.
ಈಗ ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಕುಬಣೂರು ಶ್ರೀರಾಮ ಎ.ಯು.ಪಿ. ಅನುದಾನಿತ ಶಾಲೆಯ ತರಗತಿಗಳಿಗೂ ರೈಲು ಬೋಗಿಯ ಲುಕ್ ನೀಡಲಾಗಿದೆ. ವಿದ್ಯಾರ್ಥಿಗಳು ತರಗತಿಗೆ ಪ್ರವೇಶಿಸುವಾಗ ರೈಲು ಬಂಡಿ ಏರಿದಂತಾಗುವುದು. ಇದರಿಂದ ವಿದ್ಯಾರ್ಥಿಗಳು ಖುಷಿಪಡುವಂತಾಗಿದೆ.ಮಕ್ಕಳಿಗೆ ಶಾಲೆಗೆ ಆಗಮಿಸಿದಾಗ ರೈಲು ನಿಂತಿರುವಂತೆ ಕಾಣುವುದು.
ರೈಲು ಗಾಡಿಯ ಆಕರ್ಷಕ ಚಿತ್ರವನ್ನು ಮಂಗಲ್ಪಾಡಿ ಪ್ರತಾಪ ನಗರದ ಲೀಲಾಧರ ಆಚಾರ್ಯ ತಂಡ ರಚಿಸಿದೆ.ಸರಕಾರದ ಕೊಡುಗೆ, ಆಧುನಿಕ ತಂತ್ರಜ್ಞಾನ ಇತ್ಯಾದಿಗಳೆಲ್ಲವೂ ವಿದ್ಯಾಲಯಗಳಲ್ಲಿ ಅಳವಡಿಸಿದರೂ ಶಿಕ್ಷಣದ ಮಟ್ಟ ಕುಸಿಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ದೇವಾಲಯದಂತೆ ಪಾವಿತ್ರ್ಯವಿರುವ ವಿದ್ಯಾಲಯಗಳಲ್ಲಿ ಮಕ್ಕಳಿಗೆ ಸಂಸ್ಕಾರ ಮತ್ತು ದೇಶಪ್ರೇಮ ಸಹಿತ ಶಿಕ್ಷಣ ಬೇಕೆಂಬ ಆಗ್ರಹ ರಕ್ಷಕರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ
Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Kasaragod ಎನ್ಡಿಎ ಅಭ್ಯರ್ಥಿ ಅಶ್ವಿನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು
ಸಿಡಿದ ಗ್ಯಾಸ್ ಸಿಲಿಂಡರ್; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ
Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್