ಮಾರುಕಟ್ಟೆಯಲ್ಲಿ ಮೀನು ತುಟ್ಟಿ
Team Udayavani, Jun 12, 2019, 11:45 AM IST
ಮಂಗಳೂರು: ಈ ಸಾಲಿನ ಮೀನುಗಾರಿಕೆ ಋತು ಮುಕ್ತಾಯಗೊಂಡಿದೆ. ಚಂಡ ಮಾರುತದ ಹಿನ್ನೆಲೆಯಲ್ಲಿ ನಾಡ ದೋಣಿಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಪರಿಣಾಮ ಮಾರು ಕಟ್ಟೆಯಲ್ಲಿ ಮೀನಿನ ಕೊರತೆ ಉಂಟಾಗಿದ್ದು, ದರ ಗಗನಕ್ಕೇರಿದೆ.
ಈಗ ತಮಿಳು ನಾಡಿನ ಕರಾವಳಿಯಲ್ಲಿ ಮೀನು ಗಾರಿಕೆ ಆರಂಭ ಗೊಂಡಿದೆ. ಅಲ್ಲಿಂದ ಕೆಲವು ಜಾತಿಯ ಮೀನುಗಳು ಮಂಗಳೂರಿಗೆ ಬರುತ್ತಿವೆ. ಆದ್ದರಿಂದ ದರ ಏರಿದೆ.
ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಇರುವ ಸಿಲ್ವರ್ ಫಿಶ್ ಸದ್ಯ 100 ರೂ.ಗೆ ಕೇವಲ 30 ಸಿಗುತ್ತಿವೆ. ಸದ್ಯ ತಮಿಳುನಾಡಿನಿಂದ ಬಂಗುಡೆ, ಬೂತಾಯಿ ಸೇರಿದಂತೆ ಕೆಲವೊಂದು ಮೀನುಗಳು ಮಾರುಕಟ್ಟೆಗೆ ಬರು ತ್ತಿದೆ. ಆದರೆ, ದರ ಹೆಚ್ಚಾಗಿದ್ದು ಒಂದು ಕೆ.ಜಿ. ಬಂಗುಡೆಗೆ ಸುಮಾರು 350 ರೂ. ಇದೆ. ಈ ಹಿಂದೆ ಒಂದು ಕೆ.ಜಿ. ಬಂಗುಡೆ ಸುಮಾರು 200 ರಿಂದ 250 ರೂ.ಗೆ ಸಿಗುತ್ತಿತ್ತು. ಸದ್ಯ ಒಂದು ಬೂತಾಯಿಗೆ 15 ರೂ. ಇದೆ. ಅಂಜಲ್ ಮೀನಿಗೆ ಬೇಡಿಕೆ ಇದ್ದರೂ, ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆ ಇದೆ.
ತಿಂಗಳ ಬಳಿಕ ದರ ಕಡಿಮೆ ಸಾಧ್ಯತೆ
ಮೀನುಗಾರಿಕೆ ಮುಖಂಡರ ಪ್ರಕಾರ ಈ ತಿಂಗಳಿಡೀ ದರ ಏರಿದ ಸ್ಥಿತಿಯಲ್ಲಿಯೇ ಇರಲಿದೆ. ರಾಜ್ಯ ಕರಾವಳಿಗೆ ಮುಂಗಾರು ಆಗಮಿಸಿದ ಕೆಲವು ದಿನಗಳ ಬಳಿಕ ನಾಡದೋಣಿ ಮೀನು ಗಾರರು ಸಮುದ್ರಕ್ಕೆ ತೆರಳುತ್ತಾರೆ. ಬಳಿಕ ಮೀನಿನ ದರದಲ್ಲಿ ಕೊಂಚ ಕಡಿಮೆಯಾಗ ಬಹುದು.
ಮೀನುಗಾರಿಕೆ ಋತು ಪೂರ್ಣಗೊಂಡಿದ್ದು, ಬೋಟ್ಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಚಂಡಮಾರುತ ಹಿನ್ನೆಲೆಯಲ್ಲಿ ನಾಡದೋಣಿಗಳು ಕೂಡ ಹೋಗುತ್ತಿಲ್ಲ. ಇದರಿಂದಾಗಿ ಮೀನಿನ ದರ ಹೆಚ್ಚಾಗಿದೆ.
– ನಿತಿನ್ ಕುಮಾರ್, ಟ್ರಾಲ್ಬೋಟ್ ಮೀನುಗಾರರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್