ಕಡೇಶಿವಾಲಯ ಕುಶಲಕರ್ಮಿ ಕೈಗಾರಿಕಾ ತರಬೇತಿ ಕೇಂದ್ರ ಪುನರಾರಂಭ ಸಾಧ್ಯವೇ?

ಒಂದು ದಶಕದ ಸೇವೆ-ಮುಚ್ಚುಗಡೆಯಾಗಿ ಎರಡು ದಶಕಗಳು

Team Udayavani, Aug 22, 2019, 5:00 AM IST

g-17

ಬಿ.ಸಿ. ರೋಡ್‌: ಗ್ರಾಮೀಣ ಯುವಕರಿಗೆ ಕೈಗಾರಿಕಾ ಉದ್ಯೋಗ ಒದಗಿಸುವ ಚಿಂತನೆಯೊಂದಿಗೆ 1989ರಲ್ಲಿ ಜಿ.ಪಂ. ಕೈಗಾರಿಕಾ ವಿಭಾಗವು ಕಡೇಶಿವಾಲಯ ಗ್ರಾಮದಲ್ಲಿ ತೆರೆದಿದ್ದ ಕುಶಲಕರ್ಮಿ ತರಬೇತಿ ಕೇಂದ್ರ (Artisam Training Center)ವು ಮುಚ್ಚುಗಡೆಯಾಗಿ 2 ದಶಕಗಳು ಸಂದಿವೆ. ಹೊಸ ಸರಕಾರವಾ ದರೂ ಇತ್ತ ಗಮನಹರಿಸಿ ಕೇಂದ್ರವನ್ನು ಪುನರಾರಂಭಿಸುವುದೇ ಎಂಬ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.

ತರಬೇತಿ ಕೇಂದ್ರ ಉಪಯೋಗ ಶೂನ್ಯ ವಾಗಿ ಸುತ್ತಲೂ ಮರ-ಗಿಡ- ಬಳ್ಳಿ- ಪೊದೆಗಳು ತುಂಬಿಕೊಂಡಿವೆ. ಸರಕಾರಿ ಸೊತ್ತಿಗೆ ಹೇಳುವವರು ಕೇಳುವವರು ಇಲ್ಲ ಎಂಬಂತಾಗಿದೆ. ದ.ಕ. ಜಿ.ಪಂ. ಆಡಳಿತಕ್ಕೆ ಇದೊಂದು ಕಪ್ಪುಚುಕ್ಕೆಯಂತೆ ಕಾಣುತ್ತಿದೆ. ಗ್ರಾಮಾಂತರ ಮಟ್ಟದಲ್ಲಿ ಯುವಕರಿಗೆ ಕೈಗಾರಿಕೆ ತರಬೇತಿ ಕೇಂದ್ರ ಉದ್ಯೋಗ ಸೃಷ್ಟಿಯ ತಾಣವಾಗಿದ್ದರೂ ವ್ಯವಸ್ಥೆಯ ಲೋಪದಿಂದ ಮಣ್ಣಾಗಿ ಹೋಗುತ್ತಿದೆ.

1989ರಲ್ಲಿ ಉದ್ಘಾಟನೆ
1989ರಲ್ಲಿ ಜಿ.ಪಂ. ಅಧ್ಯಕ್ಷ ಸಂಕಪ್ಪ ರೈ ಅವರ ಸೇವಾ ಅವಧಿಯಲ್ಲಿ ಈ ತರಬೇತಿ ಕೇಂದ್ರ ಉದ್ಘಾಟನೆಯಾಗಿತ್ತು. ತರಬೇತಿಯನ್ನು ಅತ್ಯಂತ ಉತ್ತಮವಾಗಿ ನೀಡುತ್ತಿತ್ತು. ಹಲವಾರು ಬ್ಯಾಚ್‌ಗಳ ವಿದ್ಯಾರ್ಥಿಗಳು ತರಬೇತಿ ಪಡೆದು ಉದ್ಯೋಗಕ್ಕೂ ಸೇರ್ಪಡೆ ಆಗಿದ್ದರು.

ತಾ.ಪಂ. ಕೈಗಾರಿಕಾ ಇಲಾಖೆಯ ಅಧಿಕಾರಿ ಸುಬ್ರಹ್ಮಣ್ಯ ತಂತ್ರಿ, ಸಹಾಯಕ ಬಾಲಕೃಷ್ಣ ರಾವ್‌ ಅವರ ಮುತುವರ್ಜಿಯಿಂದ ವೇಣೂರು ಮಂಜುನಾಥೇಶ್ವರ ಐಟಿಐಯ ಶಿಕ್ಷಕ ಜಾಕೋಬ್‌ ಮತ್ತು ವಿನ್ಸಿ ಡಿ’ಸೋಜಾ ಅವರ ತಂಡ ಪ್ರಥಮ ಬ್ಯಾಚ್‌ನ 30 ವಿದ್ಯಾರ್ಥಿಗಳಿಗೆ ತರಬೇತಿ ನೀಡಿತ್ತು.
ಈ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಇಲ್ಲೇ ಉಚಿತ ವಾಗಿ ಹಾಸ್ಟೆಲ್‌ ಕೂಡ ನಿರ್ಮಿಸಿದ್ದರು.

ಅದು ಕೂಡ ನಿರ್ವಹಣೆ ಇಲ್ಲದೆ ಬಿದ್ದು ಹೋಗಿದೆ. ತರಬೇತಿ ಕೇಂದ್ರ ಕಾರ್ಯ ಚಟುವಟಿಕೆ ನಿಲ್ಲುತ್ತಿದ್ದಂತೆ ಈ ಕೇಂದ್ರದಲ್ಲಿ ಇದ್ದಂತಹ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ. ವರ್ಕ್‌ಶಾಪ್‌ನಲ್ಲಿ ಅರಣ್ಯ ಇಲಾಖೆಯವರು ದುರಸ್ತಿಗಾಗಿ ನೀಡಿರುವ ಜೀಪ್‌ ತುಕ್ಕು ಹಿಡಿದಿದೆ. ಅದರ ಬಿಡಿಭಾಗಗಳು ಕಳವಾಗಿವೆ.

ಕಟ್ಟಡವು ಗುಜರಿ ಸಾಮಗ್ರಿ ಸಂಗ್ರಹಕ್ಕೆ, ಭಿಕ್ಷುಕರ, ನಿರ್ಗತಿಕರ, ಕುಡುಕರ ವಸತಿಯಾಗಿ ಬೇಕಾಬಿಟ್ಟಿ ಎಂಬಂತಾಗಿದೆ. ರಾತ್ರಿ ಹೊತ್ತಿಗೆ ಅಕ್ರಮ ಕೂಟಕ್ಕೆ, ಜುಗಾರಿ ಅಡ್ಡೆಯಾಗಿಯೂ ಬಳಕೆ ಆಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಭಾವಚಿತ್ರ ವಿವಾದ
ಈ ಸಂಸ್ಥೆಯಲ್ಲಿ ವಾಹನ ದುರಸ್ತಿ, ಜನರಲ್‌ ಎಂಜಿನಿಯರಿಂಗ್‌ ಹಾಗೂ ಪಂಪ್‌ ದುರಸ್ತಿ ವಿಭಾಗದಲ್ಲಿ ತರಬೇತಿ ನೀಡಲಾಗುತ್ತಿತ್ತು. 5 ಬ್ಯಾಚ್‌ಗಳು ಹೊರ ಬಂದಿದ್ದವು. ತರಬೇತಿ ಕೇಂದ್ರದ ಗೋಡೆಯಲ್ಲಿ ಶಿಕ್ಷಕರೋರ್ವರು ಭಾವಚಿತ್ರವನ್ನು ಹಾಕಿದ್ದಾರೆ ಎಂಬ ವಿವಾದ ಉಂಟಾಗಿ ಸ್ಥಳೀಯರ ಹಾಗೂ ತರಬೇತಿ ಕೇಂದ್ರದ ನಡುವೆ ಗಲಾಟೆಗಳು ನಡೆದು ಈ ಕೇಂದ್ರ ಸ್ಥಗಿತಗೊಂಡಿತ್ತು.

 ಸ್ಥಳೀಯರಲ್ಲಿ ಸಮಾಲೋಚನೆ
ಕಡೇಶಿವಾಲಯ ಕುಶಲಕರ್ಮಿ ಕೈಗಾರಿಕಾ ತರಬೇತಿ ಕೇಂದ್ರ
ಪುನಃ ಆರಂಭಿಸಲು ಸ್ಥಳೀಯವಾಗಿ ಸಾಕಷ್ಟು ವಿದ್ಯಾರ್ಥಿಗಳು ಸಿಗುವುದು ಕಷ್ಟ. ರೈತರಿಗೆ ಪೂರಕ ನಿರ್ದಿಷ್ಟ ಉದ್ಯಮ ಯೋಜನೆ ರೂಪಿಸಿ ಅದಕ್ಕೆ ಸದ್ರಿ ಕೇಂದ್ರವನ್ನು ಬಳಸಬಹುದು. ಈ ಹಿಂದೆ ಸದ್ರಿ ಕೇಂದ್ರದ ಪರಿಶೀಲನೆ ಮಾಡಿದ್ದೆ. ಸ್ಥಳೀಯರಲ್ಲಿ ಸಮಾಲೋಚನೆ ಮಾಡಿ ಅರ್ಹ ಕ್ರಮವನ್ನು ಕೈಗೊಳ್ಳಬೇಕಿದೆ.
– ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು
ಶಾಸಕರು

 ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ತೆರೆಯಬಹುದು
ಮುಚ್ಚಿರುವ ತರಬೇತಿ ಕೇಂದ್ರವನ್ನು ತೆರೆಯಲು ಸಾಕಷ್ಟು ಸಿಬಂದಿ ನಮ್ಮಲ್ಲಿಲ್ಲ. ಸರಕಾರ ಯಾವುದೇ ಹೊಸ ಆಯ್ಕೆಗೆ ಅನುಮತಿ ನೀಡುವುದಿಲ್ಲ. ಸ್ಥಳೀಯ ಶಾಸಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸೂಕ್ತ ಕ್ರಮಕ್ಕೆ ಮುಂದಾದಲ್ಲಿ ಕೇಂದ್ರ ತೆರೆಯಬಹುದು. ಸದ್ಯದ ಸ್ಥಿತಿಯಲ್ಲಿ ಸಂಪನ್ಮೂಲ, ಅರ್ಹ ತರಬೇತಿದಾರರನ್ನು ವಿಭಾಗ ಹೊಂದಿಲ್ಲ. ಅಲ್ಲಿದ್ದ ಸರಕಾರಿ ಸೊತ್ತುಗಳನ್ನು ಬನ್ನಡ್ಕ ಕೇಂದ್ರಕ್ಕೆ ಸ್ಥಳಾಂತರಿಸಿ ದಶಕಗಳು ಕಳೆದಿವೆ. ಜಮೀನು ಇಲಾಖೆಯ ಹೆಸರಲ್ಲಿದೆ.
 - ಮಂಜುನಾಥ ಹೆಗ್ಡೆ, ಉಪ ನಿರ್ದೇಶಕರು
ಖಾದಿ ಮತ್ತು ಗ್ರಾಮೋದ್ಯೋಗ, ಜಿ.ಪಂ. ಕೈಗಾರಿಕಾ ವಿಭಾಗ

 ಮರು ಸ್ಥಾಪನೆಯಾಗಲಿ
ಈ ತರಬೇತಿ ಕೇಂದ್ರವನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡಿ ಮರು ಸ್ಥಾಪಿಸಲಿ. ಜಿ.ಪಂ. ಕೈಗಾರಿಕಾ ಎಂಜಿನಿಯರಿಂಗ್‌ ವಿಭಾಗದಿಂದ ಯಾವುದಾದರೂ ಒಂದು ಕ್ರಮ ಆದರೆ ಗ್ರಾಮಕ್ಕೆ ಒಂದು ವರವಾಗುವುದು. ಸರಕಾರ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು. ಸುಮಾರು 1 ಎಕ್ರೆಗಳಿಗಿಂತಲೂ ಹೆಚ್ಚು ಜಮೀನು ಈ ಕೇಂದ್ರಕ್ಕೆ ಇದೆ. ಸರಕಾರ ಮನಸ್ಸು ಮಾಡಿ ತರಬೇತಿ ಕೇಂದ್ರವನ್ನು ನಡೆಸಬೇಕು.
 - ವೀರಪ್ಪ ನಾಯ್ಕ, ಗಂಡಿಬಾಗಿಲು (ಸ್ಥಳೀಯರು)

-  ರಾಜಾ ಬಂಟ್ವಾಳ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.