ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಿದ್ಧ

6 ಗ್ರಾಮಗಳ 51 ಜನವಸತಿ ಪ್ರದೇಶ ವ್ಯಾಪ್ತಿ; 19.18 ಕೋ. ರೂ. ಮೊತ್ತ ; ನಾಳೆ ಲೋಕಾರ್ಪಣೆ

Team Udayavani, Nov 7, 2019, 4:35 AM IST

qq-9

ಮಾಣಿ: ನೇತ್ರಾವತಿ ನದಿಯಿಂದ ಸರ್ವಋತು ಜಲ ಪೂರೈಕೆ ಮಾಣಿ ಬಹುಗ್ರಾಮ ಕುಡಿಯುವ ನೀರಿನ 19.18 ಕೋಟಿ ರೂ. ಮೊತ್ತದ ಯೋಜನೆ ನ. 8 ರಂದು ಲೋಕಾರ್ಪಣೆಗೊಳ್ಳಲಿದೆ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮದಡಿ 2014ರ ಫೆ. 26ರಂದು ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿತ್ತು. ಟೆಂಡರ್‌ ಪ್ರಕ್ರಿಯೆ ಬಳಿಕ ಮಂಗಳೂರು ಕಾವೂರಿನ ಅಮರ್‌ ಇನ್‌ಫ್ರಾ ಪ್ರೊಜೆಕ್ಟ್ ಗುತ್ತಿಗೆಯನ್ನು ವಹಿಸಿಕೊಂಡಿತ್ತು. 2017ರ ಮೇ 23ರಂದು ಯೋಜನೆಯ ಕಾಮಗಾರಿಗೆ ಚಾಲನೆ ದೊರೆತು ಇದೀಗ ಮುಕ್ತಾಯಕ್ಕೆ ಬಂದಿದ್ದು, ನೀರು ಸರಬರಾಜು ಪರೀಕ್ಷಾರ್ಥ ತಪಾಸಣೆ ಕೆಲಸಗಳು ಪ್ರಗತಿಯಲ್ಲಿದೆ.

6 ಗ್ರಾಮಗಳು
ಮಾಣಿ, ಪೆರಾಜೆ, ಅನಂ ತಾಡಿ, ನೆಟ್ಲಮುಟ್ನೂರು, ಕಡೇ ಶ್ವಾಲ್ಯ, ಬರಿಮಾರು ಗ್ರಾಮ ಗಳು, 51 ಜನವಸತಿ ಪ್ರದೇಶ, 25,215 ಜನಸಂಖ್ಯೆಗೆ ಪೂರಕ ವಾಗಿ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಕಡೇಶ್ವಾಲ್ಯ ಗ್ರಾಮದ ಕಾಗೆಕಾನ ಪ್ರದೇಶದ ನದಿ ಆಳದ ಅಂಚಿನಲ್ಲಿ ನೀರೆತ್ತುವ ಸ್ಥಾವರ ನಿರ್ಮಿಸಲಾಗಿದೆ.

175 ಅಶ್ವಶಕ್ತಿಯ ಪಂಪ್‌, 6 ಮೀ. ವ್ಯಾಸದ ಜ್ಯಾಕ್‌ವೆಲ್‌ ನಿರ್ಮಾಣ, ಪೆರಾಜೆ ಗ್ರಾಮದ ಗಡಿ ಯಾರ ದಲ್ಲಿ 36 ಲಕ್ಷ ಲೀ. ನೀರಿನ ಶುದ್ಧೀಕರಣ ಘಟಕ, ಜೋಗಿ ಬೆಟ್ಟಿನಲ್ಲಿ 4.50 ಲಕ್ಷ ಲೀ. ಜಲ ಸಂಗ್ರಹಣ ಟ್ಯಾಂಕ್‌, 70 ಸಾ. ಲೀ. ಮೇಲ್ಮ ಟ್ಟದ ವಾಶ್‌ ವಾಟರ್‌ ಟ್ಯಾಂಕ್‌ ನಿರ್ಮಾಣ, ಪರ್ಲೊಟ್ಟುನಲ್ಲಿ 50 ಸಾವಿರ ಲೀ. ನೆಲ ಮಟ್ಟದ ಜಲ ಸಂಗ್ರಹಗಾರ ಹೊಂದಿದೆ. ಯೋಜನೆ ಪೂರ್ವ ಅನುಷ್ಠಾನದಲ್ಲಿದ್ದ ಗ್ರಾಮ ಮಟ್ಟದ ನೀರು ಪೂರೈ ಕೆಯ 59 ಘಟಕಗಳು ಇದೇ ನೀರನ್ನು ಬಳಸಿಕೊಳ್ಳು ವಂತೆ ಯೋಜನೆ ರೂಪಿಸಲಾಗಿದೆ.

ಫ‌ಲಾನುಭವಿ ಪ್ರದೇಶಗಳು, ಜನಸಂಖ್ಯೆ
ಕಡೇಶ್ವಾಲ್ಯ ಗ್ರಾಮ ಖಂಡಿಗ ವಲಯದ 17 ಜನವಸತಿ ಪ್ರದೇಶದ ಜನಸಂಖ್ಯೆ -5,030
ಬರಿಮಾರು, ಮಾಣಿ, ಪೆರಾಜೆ ಗ್ರಾಮಗಳ ಬುರ್ದು ವಲಯದ 12 ಜನವಸತಿ ಪ್ರದೇಶದ ಜನಸಂಖ್ಯೆ-5,418 ಅನಂತಾಡಿ, ನೆಟ್ಲಮುಟ್ನೂರು, ಮಾಣಿ, ಪೆರಾಜೆ ಗ್ರಾಮಗಳ ಕೊಂಬಿಲಾ ವಲಯದ 22 ಜನವಸತಿ ಪ್ರದೇಶದ ಜನಸಂಖ್ಯೆ -10,326 ಹೆಚ್ಚುವರಿ ಸೇರ್ಪಡೆ ಜನಸಂಖ್ಯೆ-4,441

ನಿರೀಕ್ಷೆಯಂತೆ ಮುಕ್ತಾಯ ಹಂತಕ್ಕೆ
ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಿರೀಕ್ಷೆಯಂತೆ ಮುಕ್ತಾಯ ಹಂತಕ್ಕೆ ಬಂದಿದೆ. ಪರೀಕ್ಷಾರ್ಥ ನೀರು ಹರಿಸುವ ಕೆಲಸ ನಡೆದಿದೆ. ಕೆಲವು ಪೈಪ್‌ಲೈನ್‌ ಸಹಿತ ಸಣ್ಣಪುಟ್ಟ ನಿರ್ವಹಣೆ ಕೆಲಸಗಳನ್ನು ಪೂರ್ತಿ ಮಾಡಲಾಗುವುದು. ಒಟ್ಟು ಕೆಲಸದ ಮುಂದಿನ ಐದು ವರ್ಷಗಳ ನಿರ್ವಹಣೆಯನ್ನು ಇದೇ ಗುತ್ತಿಗೆದಾರರು ಮಾಡಲಿದ್ದಾರೆ.
 - ಮಹೇಶ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಬಂಟ್ವಾಳ

 ಮಂಜೂರಾತಿ ಸಂತೃಪ್ತಿ ತಂದಿದೆ
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಶಾಸಕತ್ವದ ಅವಧಿಯಲ್ಲಿ 2014-15ರ ಅವಧಿಯಲ್ಲಿ ಪ್ರಸ್ತಾವನೆಯಾಗಿ 2016-17ರ ಸಾಲಿನಲ್ಲಿ 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ. ಅದರಲ್ಲಿ ಸಂಗಬೆಟ್ಟು, ಕರೋಪಾಡಿ ಅನುಷ್ಠಾನ ಆಗಿದೆ. ಮಾಣಿ ಸಿದ್ಧವಾಗಿದೆ. ನರಿಕೊಂಬು, ಸರಪಾಡಿ ಪ್ರಗತಿಪಥದಲ್ಲಿದೆ. ರಾಜ್ಯದಲ್ಲಿಯೇ ಪ್ರಥಮ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ದೊರೆತಿರುವುದು ಸಂತೃಪ್ತಿ ತಂದಿದೆ.
 - ಬಿ. ರಮಾನಾಥ ರೈ, ಮಾಜಿ ಸಚಿವರು

ಟಾಪ್ ನ್ಯೂಸ್

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.