“ಪೇಪರ್ ಪೇಪರ್ ಮೆಣಸಿನ ಪೇಪರ್..” ಅಷ್ಟಮಿ ಸಂಭ್ರಮದಲ್ಲಿ ಪೇಪರ್ ವೇಷಗಳ ಕಲರವ
Team Udayavani, Aug 23, 2019, 1:11 PM IST
ಉಡುಪಿ: ನಿಮಗೆ ರಕ್ಷಿತ್ ಶೆಟ್ಟಿ ನಿರ್ದೇಶನದ ʼಉಳಿದವರು ಕಂಡಂತೆʼ ಚಿತ್ರದ “ಪೇಪರ್ ಪೇಪರ್ ಮೆಣಸಿನ ಪೇಪರ್” ಹಾಡು ನೆನಪಿರಬಹುದು. ಆ ಹಾಡಿನ ದೃಶ್ಯದಲ್ಲಿ ಕೆಲವು ಹುಡುಗರು ಮುಖಕ್ಕೆ ಬಣ್ಣ ಬಳಿದು, ಕೈಯಲ್ಲಿ ಪೇಪರ್ ಹಿಡಿದು ಬೀದಿಯಲ್ಲಿ ಸುತ್ತುತ್ತಿರುತ್ತಾರೆ. ಇವರನ್ನು ಮತ್ತೆ ನೋಡುವ ಆಸೆಯಿದೆಯೇ? ಹಾಗಾದರೆ ಇಂದು ನಾಳೆ ಉಡುಪಿಗೆ ಬನ್ನಿ.
ಅಷ್ಟಮಿ ಅಂದ್ರೆ ಉಡುಪಿ ಜಿಲ್ಲೆಯವರಿಗಿಂತಲೂ ಬೇರೆ ಜಿಲ್ಲೆಯಿಂದ ಕೆಲಸಕ್ಕಾಗಿ ನಮ್ಮ ಜಿಲ್ಲೆಗೆ ಬಂದ ವಲಸೆ ಕಾರ್ಮಿಕರ ಮಕ್ಕಳಿಗೆ ಅದೇನೋ ಸಂತೋಷ. ಮನೆಯಲ್ಲೇ ಇರುವ ಬಟ್ಟೆಗಳನ್ನು ಹಾಕಿ, ಮುಖಕ್ಕೆ ಅಂಗಡಿಗಳಲ್ಲಿ ಸಿಗುವ ಒಂದಿಷ್ಟು ಬಣ್ಣಗಳನ್ನು ಹಚ್ಚಿ, ಕೈಯಲ್ಲೋಂದು ಪೇಪರ್ ಹಿಡಿದುಕೊಂಡು ಮನೆ ಮನೆಗೆ ಹೋಗುತ್ತಾರೆ ಈ ಮಕ್ಕಳು. ಇವರೇ ಪೇಪರ್ ವೇಷದ ಮಕ್ಕಳು.
ಮುಗ್ಧತೆ ಈ ಮಕ್ಕಳ ಮುಖದಲ್ಲಿ ಎದ್ದು ಕಾಣುತ್ತದೆ. ಊರಿನ ಮಕ್ಕಳು ಇಂಥಹ ವೇಷದಲ್ಲಿ ಸ್ವಲ್ಪ ದೂರನೇ ಉಳಿಯುತ್ತಾರೆ. ಆದರೆ ಈ ಮಕ್ಕಳು ಯಾವುದೇ ಅಂಜಿಕೆ ಇಲ್ಲದೆ ಪೇಪರ್ ಪೇಪರ್ ಅನ್ನುತ್ತಾ ಮನೆ ಮನೆಗೆ, ಅಂಗಡಿಗೆ ಹೋಗಿ ಹಣ ಕೇಳುತ್ತಾರೆ. ಅಷ್ಟಮಿಯ ಸಂಭ್ರಮದ ದಿನ ನೀವು ಉಡುಪಿಗೆ ಬಂದರೆ ನೀವು ಇಂತಹ ಪೇಪರ್ ವೇಷದ ಹುಡುಗರನ್ನು ಬೀದಿ ಬೀದಿಯಲ್ಲಿ ಕಾಣಬಹುದು.
ಹೀಗೆ ಸಂಗ್ರಹಿಸಿದ ಹಣದಿಂದ ತಮ್ಮ ಶಾಲೆಗೆ ಪುಸ್ತಕಗಳನ್ನು ಕೊಳ್ಳಲು, ಅಷ್ಟಮಿಯ ಜಾತ್ರೆಗೆ ಖರ್ಚು ಮಾಡುತ್ತಾರಂತೆ. ಒಟ್ಟಾರೆಯಾಗಿ ಉಡುಪಿ ಕೃಷ್ಣಾಷ್ಟಮಿ, ವಿಟ್ಲಪಿಂಡಿಯ ದೊಡ್ಡ ದೊಡ್ಡ ವೇಷಗಳ ನಡುವೆ ಇಂತಹ ಪುಟ್ಟ ಪೇಪರ್ ವೇಷದ ಹುಡುಗರು ನಿಮ್ಮ ಮನಸನ್ನು ಮುದಗೊಳಿಸುವುದಂತೂ ನಿಜ.
ಪೂರ್ಣಿಮಾ ಪೆರ್ಣಂಕಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ