ಎರಡಂಕೆಗಿಳಿದ ಜೆಡಿಎಸ್‌, ಮೂರಂಕೆಯಿಂದ ಇಳಿಯದ ಬಿಜೆಪಿ


Team Udayavani, May 29, 2019, 6:11 AM IST

bjp-jds

ಕುಂದಾಪುರ: ಚುನಾವಣೆ ಮುಗಿದು ಫ‌ಲಿತಾಂಶ ಬಂದರೂ ಜನರಿಗೆ ಇನ್ನೂ ಮತಗಳ ಲೆಕ್ಕಾಚಾರ ಮುಗಿದಿಲ್ಲ. ಎಲ್ಲಿ ಯಾವುದು ಹೆಚ್ಚು ಎಂದು ಚರ್ಚೆ ಇನ್ನೂ ಮುಂದುವರಿದಿದೆ. ರಾಜಕೀಯ ಪಕ್ಷಗಳು ಕೂಡಾ ಇದೇ ಲೆಕ್ಕಾಚಾರದಲ್ಲಿ ನಿರತವಾಗಿವೆ. ಯಾವ ಬೂತ್‌ನಲ್ಲಿ ಹೆಚ್ಚು ಯಾವ ಬೂತ್‌ನಲ್ಲಿ ಕಡಿಮೆ ಮತಗಳು, ಕಾರಣಗಳೇನು, ಸಾಧನೆಗಳೇನು, ವೈಫ‌ಲ್ಯಗಳೇನು ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿದೆ. ಈ ಕುರಿತು ಪಕ್ಷಗಳ ನಾಯಕರು ಕಾರ್ಯಕರ್ತರ ಜತೆ ಸಭೆಗಳನ್ನು ಕೂಡಾ ನಡೆಸಿದ್ದಾರೆ.

ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಾಗಾಲೋಟ ಯಾವ ಪರಿ ಮುಂದುವರಿದಿದೆ ಎಂದರೆ 222 ಬೂತ್‌ಗಳ ಪೈಕಿ 40 ಮತಗಟ್ಟೆಗಳಲ್ಲಿ ಜೆಡಿಎಸ್‌ ಎರಡಂಕೆ ದಾಟಿ ಮತಗಳನ್ನು ಪಡೆಯಲು ಯಶಸ್ವಿಯಾಗಲಿಲ್ಲ. ಅಂದ ಹಾಗೆ ಬಿಜೆಪಿ ಅಷ್ಟೂ ಬೂತ್‌ಗಳಲ್ಲಿ ಮೂರಂಕೆಯಿಂದ ಇಳಿಯಲಿಲ್ಲ.

ಕನಿಷ್ಠ ಮತಗಳಿಕೆ
ಬಿಜೆಪಿಗೆ ಕನಿಷ್ಠ ಮತ ಎಂದರೆ ಹಾಜಿ ಕೆ. ಮೊಯ್ದಿನ್‌ ಬ್ಯಾರಿ ಮೆಮೋರಿಯಲ್‌ ಹೈಸ್ಕೂಲ್‌ ಕೋಡಿ ಮತಗಟ್ಟೆಯಲ್ಲಿ 163 ಮತೆ, ಮೇರಿನೊಳೆ ಹಿ.ಪ್ರಾ. ಶಾಲೆ ಬಾಕೂìರು ಮತಗಟ್ಟೆಯಲ್ಲಿ 164 ಮತಗಳು ಲಭಿಸಿವೆ. ಜೆಡಿಎಸ್‌ಗೆ ಕನಿಷ್ಠ ಎಂದರೆ ಸರಕಾರಿ ಪ್ರಾಥಮಿಕ ಶಾಲೆ ಕಕ್ಕುಂಜೆಯಲ್ಲಿ 43 ಮತಗಳು, ಯಡಾಡಿ ಮತ್ಯಾಡಿ ಹಿ.ಪ್ರಾ. ಶಾಲೆ, ಸರಕಾರಿ ಹಿ.ಪ್ರಾ. ಶಾಲೆ ಬಿದ್ಕಲ್‌ಕಟ್ಟೆಯಲ್ಲಿ ತಲಾ 49 ಮತಗಳು ಲಭಿಸಿವೆ.

ಗರಿಷ್ಠ ಮತಗಳಿಕೆ
ಬಿಜೆಪಿಗೆ ಹೆಚ್ಚು ಮತಗಳು ಹುಣ್ಸೆ ಮಕ್ಕಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 858 ಮತಗಳು, ಜೂನಿಯರ್‌ ಕಾಲೇಜು ಕುಂದಾಪುರದಲ್ಲಿ 851 ಮತಗಳು ಲಭಿಸಿವೆ. ಜೆಡಿಎಸ್‌ಗೆ ಬಸೂÅರು ಶಾರದಾ ಕಾಲೇಜಿನ ಮತಗಟ್ಟೆಯಲ್ಲಿ 459, ಗುಂಡ್ಮಿ ಸ.ಹಿ.ಪ್ರಾ. ಶಾಲೆಯಲ್ಲಿ 432 ಮತಗಳು ದೊರೆತಿವೆ. ಇಲ್ಲಿ ಬಿಜೆಪಿಗೆ 528 ಮತಗಳು ದೊರೆತಿವೆ. ಈ ಮೂಲಕ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಅಭ್ಯರ್ಥಿಗೆ ಬೆಂಬಲ ದೊರೆತಿದೆ.

ಚಿಹ್ನೆ ಗೊಂದಲ ಇಲ್ಲ
ಕಾಂಗ್ರೆಸ್‌ ಅಭ್ಯರ್ಥಿ ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧಿಸಿದ ಕಾರಣ ಮತದಾರರಿಗೆ ಗೊಂದಲ ಆಗಲಿದೆ ಎನ್ನುವುದು ಆರಂಭದ ಲೆಕ್ಕಾಚಾರವಾಗಿತ್ತು. ಆದರೆ ಬುದ್ಧಿವಂತ ಮತದಾರರಿಗೆ ಅಂತಹ ಯಾವುದೇ ಗೊಂದಲ ಉಂಟಾಗಲಿಲ್ಲ. ನಿಲುವು ಸ್ಪಷ್ಟವಿದ್ದ ಕಾರಣ ಅವರ ಆಯ್ಕೆಯ ಅಭ್ಯರ್ಥಿಗಳಿಗೇ ಮತ ಚಲಾಯಿಸಿದ್ದಾರೆ. ಈ ಮೂಲಕ ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧಿಸಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಡೆದ ಮತಗಳ ಹತ್ತಿರಕ್ಕೆ ತಲುಪುವ ಯತ್ನ ನಡೆದಿದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.