19 ಅಂಗವಿಕಲರಿಗೆ ಟ್ರೈಸಿಕಲ್‌ ವಿತರಣೆ


Team Udayavani, Oct 15, 2021, 2:32 PM IST

ticical

ಸಾಂದರ್ಭಿಕ ಚಿತ್ರ

ಮಹಾನಗರ: ಅಂಗವಿಕಲರಿಗೆ ಸರಕಾರದಿಂದ ಎರಡೂವರೆ ತಿಂಗಳುಗಳ ಹಿಂದೆ ಪೂರೈಕೆಯಾಗಿದ್ದ ಟ್ರೈಸಿಕಲ್‌ಗ‌ಳನ್ನು ಫ‌ಲಾನುಭವಿಗಳಿಗೆ ತಲುಪಿಸುವ ಕಾರ್ಯ ಆರಂಭಗೊಂಡಿದೆ. ಒಟ್ಟು 58 ಟ್ರೈಸಿಕಲ್‌ಗ‌ಳು ಬಂದಿದ್ದು ಅದರಲ್ಲಿ 19 ಟ್ರೈಸಿಕಲ್‌ಗ‌ಳನ್ನು ಫ‌ಲಾನು ಭವಿಗಳಿಗೆ ತಲುಪಿಸಲಾಗಿದೆ. ಟ್ರೈಸಿಕಲ್‌ಗ‌ಳು ಪೂರೈಕೆಯಾಗಿ ಸಾಂಕೇತಿಕ ವಿತರಣೆ ನಡೆದು ಎರಡೂವರೆ ತಿಂಗಳಾಗಿದ್ದರೂ ಅವುಗಳು ಫ‌ಲಾನುಭವಿಗಳ ಕೈಗೆ ಸಿಗದೆ ಜಿ.ಪಂ. ಸಭಾ ಂಗಣ ಕಟ್ಟಡದ ಕೆಳಗಿನ ಪಾರ್ಕಿಂಗ್‌ ಸ್ಥಳದ ಬಳಿ ಧೂಳು ತಿನ್ನುತ್ತಿರುವ ಬಗ್ಗೆ “ಸುದಿನ’ ಅ. 4ರಂದು ವಿಶೇಷ ವರದಿ ಪ್ರಕಟಿಸಿತ್ತು. ಕಂಪೆನಿಯವರು ವಾಹನದ ಆರ್‌ಸಿ ಮತ್ತಿತರ ದಾಖಲೆ ನೀಡದೇ ಇರುವುದರ ಬಗ್ಗೆ ಗಮನ ಸೆಳೆಯಲಾಗಿತ್ತು.

ವರ ದಿಯ ಅನಂತರ ಜನಪ್ರತಿನಿಧಿ, ಟ್ರೈಸಿಕಲ್‌ ಪೂರೈಕೆದಾರ ಕಂಪೆನಿಯವರು ಎಚ್ಚೆತ್ತುಕೊಂಡಿದ್ದರು. ಅಧಿಕಾರಿಗಳು ಕಂಪೆನಿಯವರನ್ನು ಮತ್ತೂಮ್ಮೆ ಸಂಪರ್ಕಿಸಿ ಒತ್ತಡ ಹಾಕಿದ್ದರು. ಅದರ ಪರಿಣಾಮವಾಗಿ 31 ವಾಹನಗಳಿಗೆ ಆರ್‌ಸಿ ಬಂದಿದೆ.

ಆರ್‌ಸಿ ಬಂದಿರುವ ವಾಹನಗಳನ್ನು ಫ‌ಲಾನುಭವಿಗಳಿಗೆ ತಲುಪಿಸುವ ಕಾರ್ಯ ಪ್ರಗತಿಯಲ್ಲಿದೆ. ಒಟ್ಟು 58 ಟ್ರೈಸಿಕಲ್‌ಗ‌ಳು ಪೂರೈಕೆ ಯಾಗಿವೆ. ಇದರಲ್ಲಿ ಇಲಾಖೆ ಯಿಂದ ನೇರವಾಗಿ ಬಂದಿರುವುದು 31. ಉಳಿದದ್ದು ಶಾಸಕರ ಶಿಫಾರಸಿನಂತೆ ಹೆಚ್ಚುವರಿಯಾಗಿ ಬಂದಿವೆ. ಶಿಫಾರಸು ಮಾಡಿದ ವಾಹನಗಳನ್ನು ಹೊರತುಪಡಿಸಿ ಇತರ 31 ವಾಹನಗಳಿಗೆ ಆರ್‌ಸಿ ಇತ್ತೀಚೆಗೆ ಬಂದಿದ್ದು, ಅವುಗಳನ್ನು ಫ‌ಲಾನು ಭವಿಗಳಿಗೆ ತಲುಪಿಸಲಾಗುತ್ತಿದೆ. ಪುತ್ತೂರು, ಮಂಗಳೂರಿನ ಕ್ಷೇತ್ರದ ಶಾಸಕರು ವಿತರಿಸಿದ್ದಾರೆ. ಬಂಟ್ವಾಳದ ಶಾಸಕರಿಂದ ಶೀಘ್ರ ವಿತರಣೆ ನಡೆಯಲಿದೆ.

ಇನ್ನು ಕೆಲವು ಮಂದಿ ಶಾಸಕರು ಟ್ರೈಸಿಕಲ್‌ ವಿತರಣೆಗೆ ಸಮಯ ನಿಗದಿಗೊಳಿಸಿಲ್ಲ. ಮತ್ತೆ ಹೆಚ್ಚವರಿಯಾಗಿ 27 ವಾಹನಗಳಿಗೆ ಶಿಫಾರಸ್ಸು ಮಾಡಿರುವುದರಿಂದ ಅವುಗಳ ಆರ್‌ಸಿ ಇನ್ನಷ್ಟೇ ಬರಬೇಕಿದೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.