ಕರಾವಳಿ ಅಪರಾಧ ಸುದ್ದಿಗಳು
Team Udayavani, Jul 22, 2019, 10:19 AM IST
ದೇರಳಕಟ್ಟೆ: ಸಹಾಯಕ ಪ್ರೊಫೆಸರ್ ನಿಗೂಢ ಸಾವು
ಉಳ್ಳಾಲ: ದೇರಳಕಟ್ಟೆಯ ಖಾಸಗಿ ದಂತ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕರೊಬ್ಬರು ದೇರಳಕಟ್ಟೆಯ ಕ್ವಾಟ್ರಸ್ನಲ್ಲಿ ಅಸ್ವಾಭಾವಿಕವಾಗಿ ಸಾವನ್ನಪ್ಪಿರುವ ಘಟನೆ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಶಿರಸಿ ಮೂಲದ ಲಕ್ಷ್ಮಣ ಮಂಜುನಾಥ ಅವರ ಪುತ್ರ ಡಾ| ವಾಗೇಶ್ ಕುಮಾರ್(35) ಸಾವನ್ನಪ್ಪಿದವರು. ಓರಲ್ ರೇಡಿಯೋಲಾಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದ ಅವರು ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದು, ಸಂಜೆ ವೇಳೆ ಕ್ವಾಟ್ರಸ್ಗೆ ವಾಪಸಾಗಿದ್ದರು. ಶನಿವಾರ ಕಾಲೇಜಿಗೆ ರಜೆ ಇದ್ದು, ಬೆಳಗ್ಗೆ ಆಸ್ಪತ್ರೆಯ ಸಿಬಂದಿ ಶುಚಿಗೊಳಿಸಲು ಬಂದಾಗಲು ಕ್ವಾಟ್ರಸ್ ಬಾಗಿಲು ತೆರೆದಿರಲಿಲ್ಲ. ಡಾ| ವಾಗೇಶ್ ಹೊರಗಡೆ ಹೋಗಿರಬೇಕು ಎಂದು ಸಂಶಯಿಸಿ ಅವರು ವಾಪಸಾಗಿದ್ದರು.
ಶನಿವಾರ ಸಂಜೆ ವಾಗೇಶ್ ಅವರ ತಂದೆ ಮಂಜುನಾಥ್ ಅವರು ಪುತ್ರ ಶುಕ್ರವಾರ ರಾತ್ರಿಯಿಂದ ಮೊಬೈಲ್ ಫೋನ್ ಕರೆ ಸ್ವೀಕರಿಸದಿರುವುದನ್ನು ಗಮನಿಸಿ ಆ ಬಗ್ಗೆ ಮಾಹಿತಿ ಸಹೋದ್ಯೋಗಿಗೆ ಕರೆ ಮಾಡಿ ತಿಳಿ ಸಿದ್ದರು. ಅದರಂತೆ ಸಹೋದ್ಯೋಗಿ ರವಿವಾರ ಬೆಳಗ್ಗೆ ಕ್ವಾಟ್ರಸ್ಗೆ ಬಂದಾಗ ಬಾಗಿಲು ಒಳಗಡೆ ಚಿಲಕ ಹಾಕಲಾಗಿತ್ತು. ತತ್ಕ್ಷಣವೇ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆ ಬಳಿಕ ಸೆಕ್ಯುರಿಟಿ ಸಿಬಂದಿ ಹಾಗೂ ಉಳ್ಳಾಲ ಪೊಲೀಸರು ಬಾಗಿಲು ಒಡೆದು ನೋಡಿದಾಗ ವಾಗೇಶ್ ಮೃತದೇಹ ಬಾಯಿಯಲ್ಲಿ ನೊರೆ ಕಾರಿದ ಸ್ಥಿತಿಯಲ್ಲಿ ಮಂಚದ ಮೇಲೆ ಕಂಡು ಬಂತು. ಸಾವಿನ ಕಾರಣ ಮರಣೋತ್ತರ ಪರೀಕ್ಷೆಯ ವರದಿಯಿಂದಷ್ಟೆ ಸ್ಪಷ್ಟವಾಗಬೇಕಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*
ಸರಕಾರಿ ಬಸ್ಸಿನಲ್ಲಿ ದನದ ಮಾಂಸ ಸಾಗಾಟ ಯತ್ನ: ನಿರ್ವಾಹಕ ಸೆರೆ
ಪುತ್ತೂರು: ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲೇ ದನದ ಮಾಂಸ ಸಾಗಾಟದ ಪ್ರಕರಣ ಪುತ್ತೂರಿನಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಹರಿಹರ ಬಾಳುಗೋಡು ಬಸ್ಸಿನಲ್ಲಿ ಮಾಂಸ ಪತ್ತೆಯಾಗಿದ್ದು, ನಿರ್ವಾಹಕ ಬೆಳಗಾವಿಯ ಪಶುವಾಪುರ ನಿವಾಸಿ ಸುನಿಲ್ (44) ಬಂಧಿತ ಆರೋಪಿ. ಬಸ್ಸಿನ ಹಿಂಬದಿಯ ಸೀಟಿನ ಅಡಿಯಲ್ಲಿಟ್ಟಿದ್ದ 9 ಕೆ.ಜಿ. ದನದ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರಿನಿಂದ ಹರಿಹರ ಬಾಳುಗೋಡಿಗೆ ಬೆಳಗ್ಗೆ 6.30ಕ್ಕೆ ಹೊರಟ ಬಸ್ಸಿನ ಲ್ಲಿ ದನದ ಮಾಂಸ ಇರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ಗಡಿಪಿಲ ಸಮೀಪ ಸುಮಾರು 7 ಗಂಟೆಗೆ ತಪಾಸಣೆಗೆ ನಡೆಸಿದರು. ಈ ವೇಳೆ ಬಸ್ಸಿನ ಹಿಂಬದಿಯ ನಿರ್ವಾಹಕನ ಸೀಟ್ ಬಳಿ ಇದ್ದ ಗೋಣಿ ಚೀಲದಲ್ಲಿ ದನದ ಮಾಂಸ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ