ಕರಾವಳಿ ಅಪರಾಧ ಸುದ್ದಿಗಳು
Team Udayavani, Apr 4, 2019, 10:31 AM IST
ಬೈಕಿಗೆ ಕೆಎಸ್ಆರ್ಟಿಸಿ ಬಸ್ ಢಿಕ್ಕಿ: ಯುವಕ ಸಾವು; ಇನ್ನೋರ್ವ ಗಂಭೀರ
ತಲಪಾಡಿ ಸಮೀಪದ ತೂಮಿನಾಡಿನಲ್ಲಿ ಅಪಘಾತ
ಕುಂಬಳೆ: ಮಂಜೇಶ್ವರದ ತೂಮಿನಾಡಿನಲ್ಲಿ ಮಂಗಳವಾರ ಸಂಜೆ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸೊಂದು ಬೈಕಿಗೆ ಢಿಕ್ಕಿ ಹೊಡೆದು ಕಯ್ನಾರು ಪೊನ್ನೆತ್ತೋಡು ನಿವಾಸಿ ವಿನೋದ್ ಶೆಟ್ಟಿ (35) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಿಂಬದಿ ಸವಾರ ಜೋಡುಕಲ್ಲು ನಿವಾಸಿ, ಖ್ಯಾತ ರಂಗ ಕಲಾವಿದ ಸುರೇಶ್ ಶೆಟ್ಟಿ (38) ಅವರು ಗಂಭೀರ ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಕೃಷಿಕ ಕಯ್ನಾರು ಪೊನ್ನೆತ್ತೋಡು ಅಂತಪ್ಪ ಶೆಟ್ಟಿ ಅವರ ತೃತೀಯ ಪುತ್ರರಾಗಿದ್ದ ವಿನೋದ್ ಶೆಟ್ಟಿ ಅವರು ಕೊಲ್ಲಿಯಲ್ಲಿ ಎಸಿ ಮೆಕ್ಯಾನಿಕ್ ಆಗಿದ್ದರು. ತಿಂಗಳ ಹಿಂದೆ ರಜೆಯಲ್ಲಿ ಊರಿಗೆ ಬಂದಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಓರ್ವರನ್ನು ನೋಡಲು ತೆರಳಿ ವಾಪಸಾಗುತ್ತಿದ್ದಾಗ ಘಟನೆ ಸಂಭವಿಸಿದೆ.
ಕಲಾವಿದರು
ವಿನೋದ್ ಶೆಟ್ಟಿ ಅವರು ತುಳುವೆರೆ ಉಡಲ್ ಜೋಡುಕಲ್ಲು, ಕಯ್ನಾರು ಮುಂಡಲ್ತಾಯ ಮತ್ತು ಫ್ರೆಂಡ್ಸ್ ಕಯ್ನಾರು ಸಂಘಟನೆಗಳ ಸದಸ್ಯರಾಗಿದ್ದು, ಸಂಘ ಪರಿವಾರದಲ್ಲಿ ಸಕ್ರಿಯ ರಾಗಿದ್ದರು. ಅವಿವಾಹಿತರಾಗಿದ್ದ ಇವರು ಎ. 8ರಂದು ವಿದೇಶಕ್ಕೆ ತೆರಳುವರಿದ್ದರು.ಸುರೇಶ್ ಶೆಟ್ಟಿ ಮೇರು ರಂಗ ನಟರಾಗಿದ್ದು, ತುಳುವೆರೆ ಉಡಲ್ ಜೋಡುಕಲ್ಲು ತಂಡದ ಪ್ರಮುಖ ಕಲಾವಿದರಾಗಿದ್ದರು. “ಗಡಿನಾಡ ಕೇಸರಿ’ ಬಿರುದಾಂಕಿತ ಸ್ತ್ರೀ ಪಾತ್ರಧಾರಿಯಾಗಿರುವ ಇವರು ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.
ಮರದ ರೆಂಬೆ ಬಡಿದು ವ್ಯಕ್ತಿ ಸಾವು
ಕಡಬ: ಗಾಳಿಗೆ ಬಿದ್ದಿದ್ದ ಮರದ ಗೆಲ್ಲೊಂ ದನ್ನು ತೆರವು ಮಾಡುವಾಗ ವ್ಯಕ್ತಿಯೊಬ್ಬರು ಮೃತ ಪಟ್ಟ ಘಟನೆ ಬುಧವಾರ ಕಡಬ ತಾಲೂಕಿನ ಎಡ ಮಂಗಲ ಗ್ರಾಮದ ಪೊಟ್ರೆಯಲ್ಲಿ ಸಂಭವಿಸಿದೆ. ಮೂಲತಃ ಕಡಬ ಗ್ರಾಮದ ಪಣೆಮಜಲು ನಿವಾಸಿ ದಿನೇಶ ಯಾನೆ ನಿತ್ಯಾನಂದ ಗೌಡ (35) ಮೃತ ರು.
ಪೊಟ್ರೆಯಲ್ಲಿರುವ ಪತ್ನಿ ಮನೆಯ ತೋಟದಲ್ಲಿ ಮರವೊಂದು ಬಿದ್ದಿತ್ತು. ಬುಧ ವಾರ ಪತ್ನಿ ಜತೆ ಸೇರಿ ಗೆಲ್ಲಿಗೆ ಹಗ್ಗ ಕಟ್ಟಿ ಎಳೆಯುತ್ತಿದ್ದಾಗ ದುರಂತ ಸಂಭವಿಸಿದೆ. ಅಪಾಯ ಸಾಧ್ಯತೆ ಅರಿತು ಪತ್ನಿಗೆ ದೂರ ಸರಿಯುವಂತೆ ಸೂಚನೆ ನೀಡಿ ದ್ದರು. ನಿತ್ಯಾನಂದರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಗೆಲ್ಲು ಅವರ ತಲೆ ಮೇಲೆ ಬಿದ್ದಿದೆ. ಅವರು ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರಳೆದರು. ನಿತ್ಯಾನಂದ ಕಾಣಿಯೂರಿನ ಪುಣತ್ತಾರಿನಲ್ಲಿ ಗ್ಯಾರೇಜ್ ನಡೆಸುತ್ತಿದ್ದು, ಪತ್ನಿ ಮನೆಯಲ್ಲೇ ಇದ್ದರು. ಮೃತರಿಗೆ ಪುತ್ರಿ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
MUST WATCH
ಹೊಸ ಸೇರ್ಪಡೆ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..