ವಾದ, ಜಗಳ, ತಮಾಷೆ; ಅಮ್ಮ ಜೀವನದ ಬೆಸ್ಟ್ ಗೆಳತಿ
ಅಮ್ಮನ ಹುಟ್ಟಿದ ದಿನಕ್ಕೆ ಒಂದು ಪ್ರಕೃತಿ ಚಿತ್ರವಿರುವ 70 ರೂಪಾಯಿಯ ವಾಲ್ಫ್ರೇಮ್ ಅನ್ನು ಉಡುಗೊರೆಯಾಗಿ ನೀಡಿದ್ದೆ.
Team Udayavani, May 10, 2020, 12:04 PM IST
Representative Image
ಅಮ್ಮ ಈ ಪದದಲ್ಲೇ ಒಂದು ಶಕ್ತಿಯಿದೆ. ಅದೇನೇ ದುಃಖ, ಬೇಸರವಿದ್ದರೂ ಅಮ್ಮ ಎಂಬ ಒಂದು ಶಬ್ದ ಅದೆಲ್ಲವನ್ನೂ ಮರೆಸಿಬಿಡುತ್ತದೆ. ಅವಳಿಂದ ಅದೆಷ್ಟೇ ದೂರವಿದ್ದರು ಅವಳ ಹತ್ತಿರವಿರಬೇಕು ಅನಿಸುತ್ತದೆ. ಅಮ್ಮನೂ ಸಹ ಹಾಗೇ ಅವಳ ಎಲ್ಲಾ ದುಃಖ, ಸಂತೋಷವನ್ನು ಮರೆತು ಮಕ್ಕಳ ಖುಷಿಯೊಂದಿಗೆ ಬೆರೆತುಬಿಡುತ್ತಾಳೆ. ಅಮ್ಮನಿಗೆ ಅಮ್ಮನೇ ಸಾಟಿ.
ಅಮ್ಮ ನನ್ನ ಜೀವನದ ಬೆಸ್ಟ್ ಗೆಳತಿ. ದಿನಾ ಅವಳೊಂದಿಗೆ ಒಂದಿಷ್ಟು ಹರಟೆ, ವಾದ, ಜಗಳ, ತಮಾಷೆ, ಕೋಪ ಮಾಡಿಕೊಳ್ಳದೇ ಇದ್ದರೆ ಸಮಾಧಾನವೇ ಇಲ್ಲ. ಮಗಳಿಗಿಂತ ನನ್ನನ್ನು ಅವಳ ಸ್ನೇಹಿತೆಯೆಂದು ಬೆಳೆಸಿದಳು. ಆಗ ನಾನು ಏಳನೇ ಕ್ಲಾಸು ಇರಬೇಕು. ನನಗೆ ಮನೆಯಲ್ಲಿ ಅವರಿವರು ನೀಡಿ ಕೂಡಿಟ್ಟಿದ್ದ ಹಣದಿಂದ ಅಮ್ಮನ ಹುಟ್ಟಿದ ದಿನಕ್ಕೆ ಒಂದು ಪ್ರಕೃತಿ ಚಿತ್ರವಿರುವ 70 ರೂಪಾಯಿಯ ವಾಲ್ಫ್ರೇಮ್ ಅನ್ನು ಉಡುಗೊರೆಯಾಗಿ ನೀಡಿದ್ದೆ. ಅದು ನಾನು ಅವಳಿಗೆ ಕೊಟ್ಟ ಮೊದಲ ಉಡುಗೊರೆ.
ಎಲ್ಲಾ ವಿಚಾರಗಳನ್ನು ಎಲ್ಲರೊಂದಿಗೆ ಹೇಳಿಕೊಳ್ಳಲಾಗುವುದಿಲ್ಲ, ಆದರೆ ಅಮ್ಮ ನನ್ನ ಬೇಕಾಗುವ, ಬೇಡವಾಗುವ ಎಲ್ಲಾ ಮಾತುಗಳಿಗೆ ಕಿವಿಯಾಗುತ್ತಾಳೆ. ನನ್ನ ಕನಸುಗಳಿಗೆ ಯಾವಾಗಲೂ ನನ್ನ ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಿದವಳು. ನಾನಿಡುವ ಸಣ್ಣ ಸಣ್ಣ ಆಸೆಗಳನ್ನು ಕಷ್ಟವಾದರೂ ಪೂರೈಸಿದವಳು. ಹೆಣ್ಣು ಮಗಳಾಗಿ ಧೈರ್ಯದಿಂದ ಹೇಗೆ ಬದುಕನ್ನು ಬದುಕಬೇಕೆಂದು ತಿಳಿಸಿದವಳು.
ಅಮ್ಮನೆಂದರೆ ಹಾಗೆ ಎಲ್ಲಿಲ್ಲದ ಪ್ರೀತಿ. ಯಾರೂ ಇಲ್ಲದಾಗ ಕೊನೆಗೆ ಮಕ್ಕಳೊಂದಿಗೆ ನಿಲ್ಲುವವಳು ತಾಯಿ. ಮಮತಾಮಯಿ ಎನ್ನುವ ಮಾತು ಅವಳಿಗೆ ಸೂಕ್ತವಾಗಿ ಹೊಂದುತ್ತದೆ. ಮಕ್ಕಳು ತಪ್ಪು ಮಾಡಿದಾಗ ಪ್ರೀತಿಯಿಂದ ಬುದ್ಧಿ ಹೇಳಿ ತಿಳಿ ಹೇಳುವ ತಾಳ್ಮೆ ತಾಯಿ ಎಂಬ ಮಮತಾಮಯಿಗೆ ಮಾತ್ರ ಸಾಧ್ಯ ಅನಿಸುತ್ತದೆ. ತನ್ನೆಲ್ಲಾ ದುಃಖಗಳನ್ನು ನುಂಗಿ ಸದಾ ತನ್ನ ಮಕ್ಕಳಿಗಾಗಿ ನಿಲ್ಲುವ, ದುಡಿಯುವ ಸಹೃದಯಿ ಅಮ್ಮಂದಿರಿಗೆ ಕೋಟಿಕೋಟಿ ನಮನ.
ವಿಧಾತ್ರಿ ಭಟ್, ಉಪ್ಪುಂದ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಎಸ್.ಡಿ.ಎಂ ಕಾಲೇಜು ಉಜಿರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು
‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….
ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು
ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ
ನವಮಾಸ ನಮ್ಮನ್ನು ಹೊತ್ತು, ಹೆರುವ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ