2021: ಜಗತ್ತನ್ನೇ ಕಾಡಿದ ಕೋವಿಡ್ ಆತಂಕದ ನಡುವೆ ಎಲ್ಲವನ್ನೂ ಮೀರಿ ಬದುಕು ಕಟ್ಟಿಕೊಳ್ಳಬೇಕು…

ಇನ್ನಾದರು ಹಿಂದಿನ ಪಾಠ ನಮಗೆ ಹೊಸ ವರ್ಷಕ್ಕೆ ದಾರಿ ದೀಪವಾಗಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

Team Udayavani, Dec 31, 2020, 7:20 PM IST

2021: ಜಗತ್ತನ್ನೇ ಕಾಡಿದ ಕೋವಿಡ್ ಆತಂಕದ ನಡುವೆ ಎಲ್ಲವನ್ನೂ ಮೀರಿ ಬದುಕು ಕಟ್ಟಿಕೊಳ್ಳಬೇಕು

ಮತ್ತೆ ಇಡೀ ಜಗತ್ತು ಹೊಸ ವರ್ಷದ ಸಂಭ್ರಮದಲ್ಲಿದೆ. ಹೊಸ ವರ್ಷ ಎಲ್ಲರಿಗೂ ಸುಖ, ಶಾಂತಿ ತರಲಿ. ಆದರೆ 2020ರ ಕೋವಿಡ್ ಕಾಲ ನಮಗೊಂದು ಪಾಠವಾಗಿದೆ. 2020ನೇ ಇಸವಿ ಹಿಂದೆಂದೂ ಕಾಣದ ರೀತಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳಿಗೆ ಸಾಕ್ಷಿಯಾಗಿದೆ. ಅದಕ್ಕೆ ಕಾರಣ ಜಗತ್ತನ್ನೇ ಕಾಡಿದ “ಕೋವಿಡ್”!

ಕೋವಿಡ್ ರೋಗಾಣು ಜಗತ್ತಿನಲ್ಲಿ ಕಾಣಿಸಿಕೊಂಡಾಗ ಜಗತ್ತಿನ ಹೆಚ್ಚಿನೆಲ್ಲಾ ದೇಶಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಲ್ಲಿ ಮಾಡಿದ ವಿಳಂಬಕ್ಕೆ ಭಾರೀ ಬೆಲೆ ತೆರಬೇಕಾಯಿತು. ಇದಕ್ಕೆ ಕಾರಣ ಜಗತ್ತಿನ ಹಾವ ದೇಶವೂ 1919ರ ನಂತರ ಈ ರೀತಿಯ ಸಾಂಕ್ರಾಮಿಕ ರೋಗವನ್ನು ಎದುರಿಸಿದ ಅನುಭವ ಇಲ್ಲದಿರುವುದೇ ಆಗಿದೆ. ಮತ್ತೊಂದು ಕಾರನ ಪ್ರಜಾಪ್ರಭುತ್ವ ದೇಶಗಳು ತಕ್ಷಣಕ್ಕೆ ತೀವ್ರವಾದ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಂಡರೆ ಅಪಾಯದ ತೀವ್ರತೆಯ ಅರಿವಲ್ಲದ ಪ್ರಜೆಗಳು ಅಂತಹ ತೀವ್ರವಾದ ಪ್ರತಿಬಂಧಕ ಕ್ರಮಗಳಿಂದ ಸರ್ಕಾರದ ವಿರುದ್ಧ ತಿರುಗಿ ಬೀಳಬಹುದು ಎನ್ನುವ ಆತಂಕದಿಂದ ಪರಿಸ್ಥಿತಿ ಉಲ್ಬಣಗೊಳ್ಳುವವರೆಗೆ ತೀವ್ರ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಲಿಲ್ಲ.

ಒಂದೊಮ್ಮೆ ಕೋವಿಡ್ ರೋಗಾಣು ಬೇರೆ, ಬೇರೆ ದೇಶಗಳಲ್ಲಿ ಕಾಣಿಸಿಕೊಂಡ ತಕ್ಷಣ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ನಿರ್ಬಂಧ ಹೇರಿದ್ದರೆ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ವಿಮಾನ ನಿಲ್ದಾಣದ ಸುತ್ತಮುತ್ತ ಕ್ವಾರಂಟೈನ್ ಮಾಡಿದ್ದರೆ ಜಗತ್ತು ಈ ರೀತಿಯಲ್ಲಿ ಭಾರೀ ಆರ್ಥಿಕ ನಷ್ಟ ಅನುಭವಿಸುವುದರಿಂದ ಬಚಾವ್ ಆಗುತ್ತಿತ್ತು. ಈ ವಿಷಯವನ್ನು ಮತ್ತಷ್ಟು ಚರ್ಚೆ ಮಾಡುವ ಕಾಲ ಈಗ ಮೀರಿ ಹೋಗಿದೆ.

ಆದರೆ ಕೋವಿಡ್ ನಿಂದ ಜಗತ್ತಿಗೆ ಆದ ನಷ್ಟ ಊಹಿಸಲೂ ಸಾಧ್ಯವಿಲ್ಲದಷ್ಟು, ಅನೇಕ ದೇಶಗಳು ಇನ್ನೂ ಲಾಕ್ ಡೌನ್ ನಿರ್ಬಂಧದಲ್ಲಿಯೇ ಇದೆ. ಭಾರತದ ದೃಷ್ಟಿಯಲ್ಲಿ ಹೇಳುವುದಿದ್ದರೆ, ಶ್ರೀಮಂತರಿಂದ ಹಿಡಿದು ಬಡಕುಟುಂಬದವರೆಗೂ ಕಷ್ಟ ಅನುಭವಿಸುವಂತಾಯಿತು. ಶ್ರೀಮಂತರು ಕೂಡಾ ಬ್ಯಾಂಕಿನಿಂದ ಸಾಲ ಪಡೆದೇ ತಮ್ಮ ವ್ಯವಹಾರ ಮಾಡುವವರೇ ಸುಮಾರು ಐದಾರು ತಿಂಗಳ ಕಾಲ ಉತ್ಪಾದನೆಯೇ ನಿಂತು ಹೋಗಿದ್ದು, ಆ ಸಮಯದಲ್ಲಿ ಬ್ಯಾಂಕಿನ ಸಾಲದ ಕಂತು ಕಟ್ಟುವುದಕ್ಕೆ ವಿನಾಯಿತಿ ನೀಡಿದರೂ ಹಾಗೆ ವಿನಾಯಿತಿ ನೀಡಿದ ಸಾಲದ ಕಂತುಗಳನ್ನು ಮುಂದೆ ಹೊಂದಾಣಿಕೆ ಮಾಡಿಕೊಂಡು ಕಟ್ಟಬೇಕಾಗಿರುವುದರಿಂದ ಈಗ ಅದರ ಸಮಸ್ಯೆ ಎದುರಿಸುವುದು ಪ್ರಾರಂಭವಾಗುತ್ತದೆ. ಬಡವರು ಕೂಲಿ ಮಾಡಿಕೊಂಡು ಬದುಕುವವರಿಗೂ ಸುಮಾರು ನಾಲ್ಕೈದು ತಿಂಗಳು ಕೆಲಸವೇ ಇಲ್ಲದೇ ಸಮಸ್ಯೆ ಎದುರಿಸಬೇಕಾಯಿತು. ಮಧ್ಯಮ ವರ್ಗದ ವ್ಯಾಪಾರಸ್ಥರು ಅತೀ ಹೆಚ್ಚು ತೊಂದರೆಗೀಡಾದವರು, ಹೋಟೆಲ್ ಉದ್ಯಮದಲ್ಲಿ ಕೆಲವರು ವ್ಯವಹಾರವನ್ನೇ ಕೈ ಬಿಟ್ಟ ನಿದರ್ಶನಗಳಿವೆ. ವ್ಯವಹಾರ ಪ್ರಾರಂಭವಾದರೂ ಸಹಜ ಸ್ಥಿತಿಗೆ ಬರಲು ಇನ್ನೂ ಕೆಲವು ಸಮಯ ಹಿಡಿಯಬಹುದು.

ನ್ಯಾಯಾಲಯಗಳು ಒಂದು ರೀತಿಯಲ್ಲಿ ಬಾಗಿಲು ಮುಚ್ಚೊಕೊಂಡು ಕುಳಿತಂತೆ ಭಾಸವಾಗುತ್ತಿದೆ. ಊರೆಲ್ಲ ಸಹಜ ಸ್ಥಿತಿಗೆ ಬಂದರೂ ನ್ಯಾಯಾಲಯಗಳು ಇನ್ನೂ ಪೂರ್ಣ ಬಾಗಿಲು ತೆರೆಯಲಿಲ್ಲ. ಏತನ್ಮಧ್ಯೆ ಈ ರೀತಿಯ ವಿಷಯ ಸ್ಥಿತಿಯನ್ನು ಕೂಡ ಸರಕಾರದಲ್ಲಿರುವವರು ತಮ್ಮ ಲಾಭಕ್ಕೆ ಉಪಯೋಗಿಸಿಕೊಂಡಿದ್ದಾರೆನ್ನುವ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು. ಸ್ಯಾನಿಟೈಸರ್, ರಕ್ಷಣಾ ಕಿಟ್ ಮತ್ತು ಇತರ ಸಲಕರಣೆಗಳನ್ನು ಖರೀದಿಯಲ್ಲಿಯೂ ಆರೋಪ ಹರಡಿತ್ತು. ಆ್ಯಂಬುಲೆನ್ಸ್ ಹಾಗೂ ಸೀಲ್ ಡೌನ್ ನಲ್ಲಿಯೂ ಇದೇ ಆರೋಪ ಸುಳಿದಾಡಿತ್ತು. ಇದು ಸತ್ಯ ಎಂದಾದರೆ ಇದನ್ನು ದೇವರೂ ಕೂಡಾ ಮೆಚ್ಚಲಾರ.

ಇನ್ನು ಸಮಾಜದಲ್ಲಿ ಒಂದು ಹಂತದಲ್ಲಿ ಜೀವನವೇ ಒಂದು ರೀತಿಯಲ್ಲಿ ಅತಂತ್ರ ಯಾವಾಗ ಏನಾಗಬಹುದೆಂದು ಊಹಿಸಲೂ ಸಾಧ್ಯವಿಲ್ಲವೆಂದು ನಾವು ಜಾತಿ, ಧರ್ಮ ಇತ್ಯಾದಿ ಕಾರಣದಿಂದ ಹೊಡೆದಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎನ್ನುವ ಭಾವನೆ ವ್ಯಾಪಕವಾಗಿ ಬಂದಿತ್ತು. ಆದರೆ ಇದು ತಾತ್ಕಾಲಿಕ ಮತ್ತು ನಾವು ಇದನ್ನು ಮೀರಿ ಬದುಕುವ ಹಂತದಿಂದ ದೂರ ಬಂದಿದ್ದೇವೆ ಎನ್ನುವುದು ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸಾಬೀತಾಗಿದೆ. ಮನುಷ್ಯರಾದ ನಾವು ನಮ್ಮ ಕ್ರೋಧ, ಮದ, ಮತ್ಸರಗಳನ್ನು ತೊರೆಯುವ ಕಾಲ ಯಾವತ್ತೂ ಬರುವಂತೆ ಕಾಣುತ್ತಿಲ್ಲ. ಇನ್ನಾದರು ಹಿಂದಿನ ಪಾಠ ನಮಗೆ ಹೊಸ ವರ್ಷಕ್ಕೆ ದಾರಿ ದೀಪವಾಗಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

ಟಿಬಿ ಶೆಟ್ಟಿ ವಕೀಲರು

ಕುಂದಾಪುರ

ಟಾಪ್ ನ್ಯೂಸ್

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

New Year: ನಗರದಲ್ಲಿ ಹೊಸ ವರ್ಷದ ಮೋಜು-ಮಸ್ತಿ

New Year: ನಗರದಲ್ಲಿ ಹೊಸ ವರ್ಷದ ಮೋಜು-ಮಸ್ತಿ

2024:ನವ ವರುಷ  ಹೊಸ ಹರುಷ;ಹೊಸ ವರುಷದ ಹೂಡಿಕೆಗಳು-ಹೂಡಿಕೆಯ ಬಗ್ಗೆ ಸ್ಪಷ್ಟ ನಿರ್ಧಾರವಿರಲಿ…

2024:ನವ ವರುಷ ಹೊಸ ಹರುಷ;ಹೊಸ ವರುಷದ ಹೂಡಿಕೆಗಳು-ಹೂಡಿಕೆಯ ಬಗ್ಗೆ ಸ್ಪಷ್ಟ ನಿರ್ಧಾರವಿರಲಿ…

2024 ಹೊಸ ದಿನಚರಿಗೆ ಹಸುರು ಅಧ್ಯಾಯಗಳು

2024 ಹೊಸ ದಿನಚರಿಗೆ ಹಸುರು ಅಧ್ಯಾಯಗಳು

New Year 2024; ಹೊಸ ಭರವಸೆಗಳ ಜತೆ ಮೊದಲ ಹೆಜ್ಜೆ…

New Year 2024; ಹೊಸ ಭರವಸೆಗಳ ಜತೆ ಮೊದಲ ಹೆಜ್ಜೆ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.