2021: ರಾಶಿ…ರಾಶಿ ಕನಸಿನ ಮೂಟೆ ಜತೆಗೆ ಹೊಸ ವರ್ಷದತ್ತ ಹೆಜ್ಜೆ

ಎಲ್ಲಾ ಯೋಜನೆ ಯೋಚನೆಗಳಿಗೆ ಕೋವಿಡ್ ವೈರಸ್ ಪೂರ್ಣವಿರಾಮ ಹಾಕಿತ್ತು.

Team Udayavani, Dec 30, 2020, 5:20 PM IST

2021: ರಾಶಿ…ರಾಶಿ ಕನಸಿನ ಮೂಟೆ ಜತೆಗೆ ಹೊಸ ವರ್ಷದತ್ತ ಹೆಜ್ಜೆ

Representative Image

ಅಂತೂ ಇಂತೂ 2020 ಮುಗೀತು. ಈ ವರ್ಷ ಒಂದು ರೀತಿ ಹೆಚ್ಚು ದುಃಖ ಕಡಿಮೆ ಸಂತೋಷ ಇತ್ತು ಅಂತಾನೇ ಹೇಳಬಹುದು. ಕೋವಿಡ್ ಎನ್ನುವ ಮಹಾಮಾರಿ ವೈರಸ್ ಇಡೀ ವಿಶ್ವವನ್ನೇ ತನ್ನ ತಾಳಕ್ಕೆ ತಕ್ಕಂತೆ ಕುಣಿಸಿ ಬಿಟ್ಟಿದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಅಲ್ಲೋಲ್ಲ ಕಲ್ಲೋಲ್ಲ ಸೃಷ್ಟಿಸಿತು. ಇದರಿಂದ ಎಷ್ಟೋ ಜನರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಬಂದಿತ್ತು. ಎಷ್ಟೋ ಮಂದಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಳಾದರು. ಊಹೆಗೂ ಮೀರಿದಷ್ಟು ಜನರು ತಮ್ಮ ಪ್ರಾಣ ಕಳೆದುಕೊಂಡರು. ಎಷ್ಟೋ ಕುಟುಂಬಗಳು ಅನಾಥವಾದವು. ಹೀಗೆ ನಾವೆಲ್ಲ ಈ ವರ್ಷ ಎದುರಿಸಿದ ಸಮಸ್ಯೆಗಳ ಪಟ್ಟಿ ತುಂಬಾ ದೊಡ್ಡದು.

2020 ರ ಪ್ರಾರಂಭದಲ್ಲಿ ವರ್ಷ ಪೂರ್ತಿ ಏನು ಮಾಡಬೇಕು ಅಂತ ಯೋಜನೆಗಳನ್ನು ಹಾಕಿಕೊಂಡಿದ್ದೆವು. ಮನೆ ಕಟ್ಟುವುದು, ಮದುವೆ, ಸ್ವಂತ ಉದ್ಯೋಗ, ಪ್ರವಾಸಗಳು ಹೀಗೆ ಹತ್ತು ಹಲವಾರು ಯೋಜನೆಗಳು. ಆದರೆ  ಎಲ್ಲಾ ಯೋಜನೆ ಯೋಚನೆಗಳಿಗೆ ಕೋವಿಡ್ ವೈರಸ್ ಪೂರ್ಣವಿರಾಮ ಹಾಕಿತ್ತು. ಹೀಗಾಗಿ ಈ ಎಲ್ಲಾ ಸಮಸ್ಯೆಗಳ ಮಧ್ಯೆ ಈ ವರ್ಷ ಹೇಗೆ ಕಳೆದು ಹೋಯಿತು ಎಂಬುದು ಗೊತ್ತಾಗಲಿಲ್ಲ. ಇದರ ಜೊತೆಗೆ ಒಂದು ಖುಷಿ ವಿಚಾರ ಅಂದ್ರೆ ಎಷ್ಟೋ ಕುಟುಂಬಗಳು ಹಲವು  ವರ್ಷಗಳ ನಂತರ ಒಟ್ಟುಗೂಡಿದ್ದು, ಹೆಚ್ಚು ಸಮಯಗಳನ್ನು ತಮ್ಮ ತಮ್ಮ ಕುಟುಂಬ, ಪ್ರೀತಿಪಾತ್ರರೊಂದಿಗೆ ಕಳೆಯುವ ಅವಕಾಶ ಪಡೆದದ್ದು. ಇದೊಂದು ವಿಷಯಕ್ಕೆ ನಾವು ಕೋವಿಡ್ ಗೆ ಧನ್ಯವಾದ ಹೇಳಲೇಬೇಕು.

ಈಗ ಮತ್ತೆ ಹೊಸ ವರ್ಷ ಬರುತ್ತಿದೆ. ಎಲ್ಲರೂ ಈ ಹೊಸ ವರ್ಷದ ಬರುವಿಕೆಯಲ್ಲಿ ಇದ್ದೇವೆ. 2021 ರಲ್ಲಿ ನಮ್ಮ ಯೋಜನೆಗಳು ಸಫಲವಾಗಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಈ ಬಾರಿ ಪ್ರತಿಯೊಬ್ಬರು ರಾಶಿ ರಾಶಿ ಕನಸುಗಳನ್ನು ಹೊತ್ತು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾತುರರಾಗಿದ್ದೆವೆ.

ಸದ್ಯಕ್ಕೆ 2020 ಕ್ಕೆ ವಿದಾಯ ಹೇಳಿ 2021 ನ್ನು  ಸ್ವಾಗತಿಸಬೇಕು. ಈ ಒಂದು ವರ್ಷದಲ್ಲಿ ಪಡೆದ ಅನುಭವಗಳನ್ನು ನಾವು ವಿಮರ್ಶೆಯ ತಕ್ಕಡಿಗೆ ಹಾಕಿ ಒಳ್ಳೆಯದು ಕೆಟ್ಟದ್ದು ಎರಡನ್ನೂ ತೂಗಬೇಕಾಗಿದೆ. ಕೆಟ್ಟದನ್ನು ಅಲ್ಲೇ ಬಿಟ್ಟು ಒಳ್ಳೆಯದನ್ನು ಬದುಕಿನಲ್ಲಿ ಅನುಸರಿಸಿಕೊಂಡು ಹೊಸ ವರುಷವನ್ನು ಹರುಷದಿಂದ ಕಳಯೋಣ. 2021 ಎಲ್ಲರ ಬದುಕಿನಲ್ಲಿ ಹೊಸ ಬದಲಾವಣೆ ತರಲಿ, ಹೊಸ ಉತ್ಸಾಹ ತುಂಬಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

*ರಮ್ಯ.ಬಿ ಉಡುಪಿ

ಟಾಪ್ ನ್ಯೂಸ್

Tomorrow ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ?

Tomorrow ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ?

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್‌

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್‌

ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ

Green revolution ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

roadNational Highways ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Mangaluru ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಗಿದ ವರ್ಷ; ಮುಗಿಯದ ಆತಂಕ

ಮುಗಿದ ವರ್ಷ; ಮುಗಿಯದ ಆತಂಕ

ಸದಾಶಯದ ನಲ್ನುಡಿ ಹೊಸತಿಗೆ ಮುನ್ನುಡಿ

ಸದಾಶಯದ ನಲ್ನುಡಿ ಹೊಸತಿಗೆ ಮುನ್ನುಡಿ

Untitled-1

ಹಿನ್ನೋಟ: 2021 ರಲ್ಲಿ ಓದುಗರ ಮನ ಗೆದ್ದ ಕನ್ನಡ ಕೃತಿಗಳು

2021ರ ಹಿನ್ನೋಟ: ದೇಶದ ಪ್ರಮುಖ ಘಟನಾವಳಿ-ಲಕ್ಷದ್ವೀಪ ವಿವಾದ, ರಾವತ್ ದುರಂತ, ಹಿಂಸಾಚಾರ

2021ರ ಹಿನ್ನೋಟ: ದೇಶದ ಪ್ರಮುಖ ಘಟನಾವಳಿ-ಲಕ್ಷದ್ವೀಪ ವಿವಾದ, ರಾವತ್ ದುರಂತ, ಹಿಂಸಾಚಾರ

sports in 2021

2021: ಕ್ರೀಡಾಲೋಕದ ಮಹತ್ವದ ಘಟನೆಗಳ ಹಿನ್ನೋಟ

MUST WATCH

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

ಹೊಸ ಸೇರ್ಪಡೆ

Tomorrow ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ?

Tomorrow ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ?

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್‌

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್‌

ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ

Green revolution ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

roadNational Highways ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್‌ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.