GST ಆದಾಯ ನಷ್ಟ ಭರ್ತಿಗೆ ರಾಜ್ಯಗಳಿಗೆ ಎರಡು ಆಯ್ಕೆ ; ನಿರ್ಧಾರ ತಿಳಿಸಲು ಒಂದು ವಾರ ಕಾಲಾವಕಾಶ
Team Udayavani, Aug 27, 2020, 7:03 PM IST
ಹೊಸದಿಲ್ಲಿ: ಕೋವಿಡ್ 19 ಮತ್ತು ಅದಕ್ಕೆ ಸಂಬಂಧಿಸಿದ ಲಾಕ್ ಡೌನ್ ದೇಶದಲ್ಲಿ GST ಆದಾಯ ಸಂಗ್ರಹದ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ.
2021ರ ಹಣಕಾಸು ವರ್ಷದಲ್ಲಿ ಈ GST ಕೊರತೆ 2.35 ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದ್ದು ಇದರಲ್ಲಿ 97 ಸಾವಿರ ಕೋಟಿ ರೂಪಾಯಿಗಳ ಕೊರತೆ ಅನುಷ್ಠಾನದಲ್ಲಿನ ನ್ಯೂನತೆಗಳ ಕಾರಣದಿಂದ ಕಾಣಿಸಿಕೊಂಡಿದ್ದರೆ ಉಳಿದ ಭಾರೀ ಮೊತ್ತದ ಕೊರತೆ ಕೋವಿಡ್ 19 ಕಾರಣದಿಂದಲೇ ಉಂಟಾಗಿರುವುದಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಇಂದು GST ಕೌನ್ಸಿಲ್ ನ 41ನೇ ಸಭೆಯು ನಡೆಯಿತು. ಸುಮಾರು 5 ತಾಸುಗಳವರೆಗೆ ನಡೆದ ಈ ಸಭೆಯಲ್ಲಿ ಹಲವು ವಿಚಾರಗಳ ಕುರಿತಾಗಿ ವಿಸ್ತೃತ ಚರ್ಚೆಯನ್ನು ನಡೆಸಲಾಯಿತು.
ಮತ್ತು ಈ ಸಭೆಯಲ್ಲಿ GST ಆದಾಯ ಕೊರತೆ ಅನುಭವಿಸುವ ರಾಜ್ಯಗಳಿಗೆ ಯಾವ ರೀತಿಯಲ್ಲಿ ಪರಿಹಾರವನ್ನು ನೀಡಬೇಕು ಎಂಬ ವಿಚಾರದ ಕುರಿತಾಗಿ ಪ್ರಮುಖವಾಗಿ ಚರ್ಚಿಸಲಾಯಿತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಈ ಭಾರೀ GST ಸಂಗ್ರಹ ಕೊರತೆಯ ಕಾರಣದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯಗಳಿಗೆ ಕೇಂದ್ರದಿಂದ ನೀಡಬೇಕಾದ ಪರಿಹಾರ ಒಟ್ಟು ಮೊತ್ತ 3 ಲಕ್ಷ ಕೋಟಿ ರೂಪಾಯಿಗಳಾಗಿರಲಿದೆ ಎಂದು ರೆವೆನ್ಯೂ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಅವರು ತಿಳಿಸಿದ್ದಾರೆ.
ಈ 3 ಲಕ್ಷ ಕೋಟಿ ರೂಪಾಯಿಗಳಲ್ಲಿ 65 ಸಾವಿರ ಕೋಟಿ ರೂಪಾಯಿಗಳು ಸೆಸ್ ರೂಪದಲ್ಲಿ ರಾಜ್ಯಗಳಿಗೆ ಲಭಿಸುವ ನಿರೀಕ್ಷೆ ಇದ್ದರೆ ಇನ್ನುಳಿದ 2.35 ಲಕ್ಷ ಕೋಟಿ ರೂಪಾಯಿ ಕೊರತೆಯನ್ನು ಕೇಂದ್ರ ಸರಕಾರವೇ ರಾಜ್ಯಗಳಿಗೆ ಭರಿಸಬೇಕಿದೆ.
ಈ ಪರಿಹಾರ ಮೊತ್ತವನ್ನು ರಾಜ್ಯಸರಕಾರಗಳು ಪಡೆದುಕೊಳ್ಳಲು ಅವುಗಳ ಮುಂದೆ ಎರಡು ಅವಕಾಶಗಳನ್ನು ನೀಡುವ ಕುರಿತಾಗಿ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು. ಮತ್ತು ಈ ಎರಡು ಅವಕಾಶಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಲು ರಾಜ್ಯಗಳಿಗೆ ಒಂದು ವಾರಗಳ ಅವಕಾಶವನ್ನು ನೀಡುವ ಕುರಿತಾಗಿಯೂ ಸಭೆ ನಿರ್ಧರಿಸಿತು.
ಮೊದಲ ಆಯ್ಕೆಯಾಗಿ, ರಾಜ್ಯಗಳು ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ 97 ಸಾವಿರ ಕೋಟಿ ರೂಪಾಯಿಗಳನ್ನು ಸಾಲ ರೂಪದಲ್ಲಿ ಪಡೆದುಕೊಳ್ಳಬಹುದು ಮತ್ತು ಈ ಮೊತ್ತವನ್ನು ಐದು ವರ್ಷಗಳ ಬಳಿಕ ಮರುಪಾವತಿಸುವ ಅವಕಾಶವನ್ನೂ ಸಹ ರಾಜ್ಯಗಳಿಗೆ ನೀಡಲಾಗಿದೆ.
ಇನ್ನು ಎರಡನೇ ಆಯ್ಕೆಯಲ್ಲಿ, 2.35 ಲಕ್ಷ ಕೋಟಿ ರೂಪಾಯಿಗಳ ಪೂರ್ತಿ ಕೊರತೆ ಮೊತ್ತವನ್ನು ಸ್ಪೆಷಲ್ ವಿಂಡೋ ಅಡಿಯಲ್ಲಿ ರಾಜ್ಯಗಳು ಪಡೆದುಕೊಳ್ಳಬಹುದಾಗಿದೆ.
ಸದ್ಯಕ್ಕೆ ದೇಶದ ಆರ್ಥಿಕ ಪರಿಸ್ಥಿತಿಯು ವಿಶೇಶ ‘ದೈವೇಚ್ಛೆ’ ಸ್ಥಿತಿಯಲ್ಲಿ ನಡೆಯುತ್ತಿದೆ ಮತ್ತು ಇದು ಆರ್ಥಿಕ ಕುಸಿತಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳನ್ನೂ ತೋರಿಸುತ್ತಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೇ ಸಂದರ್ಭದಲ್ಲಿ ಅಬಿಪ್ರಾಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್