- Saturday 07 Dec 2019
ಶಿವಸೇನೆ – ಎನ್.ಸಿ.ಪಿ. -ಕಾಂಗ್ರೆಸ್ ಅಧಿಕಾರಕ್ಕೇರಿದರೆ ಬುಲೆಟ್ ರೈಲಿಗೆ ಎಳ್ಳುನೀರು?
Team Udayavani, Nov 22, 2019, 7:40 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ಮಹಾರಾಷ್ಟ್ರ ಗದ್ದುಗೆಯೇರಲು ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಪ್ರಯತ್ನ ನಡೆಸುತ್ತಿರುವಂತೆಯೇ, ಒಂದು ವೇಳೆ ಈ ಸರಕಾರ ರಚನೆಯಾದರೆ, ಭಾರತದ ಮೊದಲ ಬಹುನಿರೀಕ್ಷಿತ ಬುಲೆಟ್ ರೈಲು ಯೋಜನೆ ಹಳ್ಳ ಹಿಡಿಯಲಿದೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ. ಅಹಮದಾಬಾದ್-ಮುಂಬಯಿ ನಡುವಿನ ಒಂದು ಲಕ್ಷ ಕೋಟಿ ರೂ. ವೆಚ್ಚದ ಹೈಸ್ಪೀಡ್ ಬುಲೆಟ್ ರೈಲು ಯೋಜನೆ ಇದಾಗಿದ್ದು, ಯೋಜನೆಗೆ ಕೇಂದ್ರ ಸರಕಾರ ತಿಲಾಂಜಲಿ ಇಡಲಿದೆ ಎಂದು ಮೂಲಗಳು ಹೇಳಿವೆ.
ಈ ಬುಲೆಟ್ ರೈಲು ಯೋಜನೆಗೆ 2017ರಲ್ಲಿ ಜಪಾನ್ ಪ್ರಧಾನಿ ಶಿಂಝೋ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶಂಕು ಸ್ಥಾಪನೆ ನೆರವೇರಿಸಿದ್ದರು. ಯೋಜನೆಗೆ ಜಪಾನ್ 88 ಸಾವಿರ ಕೋಟಿ ರೂ. ಸಾಲವನ್ನು ಶೇ. 0.1 ಬಡ್ಡಿದರಲ್ಲಿ ನೀಡುತ್ತಿದೆ.
ಸದ್ಯ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದರೆ, ಇಡೀ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸಬೇಕೆನ್ನುವ ಇಂಗಿತವನ್ನು ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಹೊಂದಿದ್ದಾರೆ. ಈ ಹಿಂದಿನ ಒಪ್ಪಂದ ಪ್ರಕಾರ ಮಹಾರಾಷ್ಟ್ರ ಸರಕಾರ 5 ಸಾವಿರ ಕೋಟಿ ರೂ.ಗಳನ್ನು ಬುಲೆಟ್ ರೈಲು ಯೋಜನೆಗೆ ನೀಡಲು ಒಪ್ಪಿಕೊಂಡಿತ್ತು. ಆದರೆ ಈಗ ಎನ್ಸಿಪಿ – ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಯಾವುದೇ ಮೊತ್ತವನ್ನು ಭರಸಿಲು ಸಾಧ್ಯವಿಲ್ಲ ಎಂಬುದನ್ನು ಹೇಳಿದ್ದಾರೆ.
ಸರಕಾರ ಅಸ್ತಿತ್ವಕ್ಕೆ ಬಂದರೆ ಈ ವಿಚಾರವನ್ನು ಕೇಂದ್ರ ಸರಕಾರಕ್ಕೆ ತಿಳಿಸುವುದಾಗಿಯೂ ಹೇಳಿದ್ದಾರೆ. ಮೂಲ ಯೋಜನೆ ಪ್ರಕಾರ 2023ರಲ್ಲಿ ಯೋಜನೆ ಪೂರ್ಣಗೊಳ್ಳಬೇಕಿದ್ದು 508 ಕಿ.ಮೀ. ಉದ್ದದ ಬುಲೆಟ್ ಮಾರ್ಗ ನಿರ್ಮಾಣವಾಗಲಿದೆ. ಇದರಲ್ಲಿ ಗಂಟೆಗೆ 350 ಕಿ.ಮೀ. ವೇಗದಲ್ಲಿ ಬುಲೆಟ್ ರೈಲು ಓಡಿಸುವ ಉದ್ದೇಶ ಹೊಂದಲಾಗಿತ್ತು.
ಈ ವಿಭಾಗದಿಂದ ಇನ್ನಷ್ಟು
-
ನವದೆಹಲಿ:ಏರ್ ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ಕರೆ ಮತ್ತು ಡೇಟಾ ಪ್ಯಾಕ್ ಗಳ ದರ ಏರಿಕೆ ಮಾಡಿದ ಬೆನ್ನಲ್ಲೇ ರಿಯಲನ್ಸ್ ಜಿಯೋ ಕೂಡಾ ಹೊಸ ದರದ ಪ್ಯಾಕೇಜ್ ಅನ್ನು...
-
ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್ ಪಾವತಿ ಗಳನ್ನು ಕಾರ್ಡ್ ಅಥವಾ ಆ್ಯಪ್ಗ್ಳ ಮೂಲಕ ಮಾಡುತ್ತಿದ್ದಾರೆ....
-
ಹೊಸದಿಲ್ಲಿ: ಭಾರತದ ಕಾರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಅಮೆರಿಕದ ಪ್ರಸಿದ್ಧ ಕಾರು ತಯಾರಿಕ ಕಂಪೆನಿ ಎಂಜಿ ಹೆಕ್ಟರ್ (ಮೋರಿಸ್ ಗ್ಯಾರೇಜಸ್) ಇದೀಗ...
-
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದೆ. ಅಲ್ಲದೇ...
-
ಮುಂಬಯಿ: ಆರ್ಬಿಐನ ತ್ತೈಮಾಸಿಕ ಸಾಲ ಪರಿಶೀಲನ ನೀತಿ ಸಮಿತಿ ಸಭೆ ಮುಂಬಯಿನಲ್ಲಿ ನಡೆಯುತ್ತಿದೆ. ಗುರುವಾರ ಸಭೆಯ ಕೊನೆಯ ದಿನವಾಗಿದ್ದು, ಸಾಲದ ಮೇಲಿನ ಬಡ್ಡಿ ದರ...
ಹೊಸ ಸೇರ್ಪಡೆ
-
ನವದೆಹಲಿ: ಕಳೆದ ವರ್ಷ ತನ್ನನ್ನು ಅತ್ಯಾಚಾರ ಮಾಡಿದ್ದ ಆರೋಪಿಗಳಿಂದಲೇ ಗುರುವಾರದಂದು ಸುಡಲ್ಪಟ್ಟಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಕೊನೆಗೂ ಚಿಕಿತ್ಸೆ...
-
ಉಡುಪಿ: ಅದಮಾರು ಮಠದ ಪರ್ಯಾಯದಲ್ಲಿ ಕಾಲೇ ವರ್ಷತು ಪರ್ಜನ್ಯಃ| ಪೃಥಿವೀ ಸಸ್ಯಶಾಲಿನಿ|| ದೇಶಃ ಅಯಂ ಕ್ಷೋಭರಹಿತಃ| ಸಜ್ಜನಾಃ ಸಂತು ನಿರ್ಭಯಾಃ|| ಎಂಬಂತೆ ಈ ನಾಲ್ಕು ವಿಷಯಗಳ...
-
ಮುಂಬಯಿ: ಇತ್ತೀಚೆಗೆ ವಿಶ್ವ ದರ್ಜೆಯ ಕ್ರಿಕೆಟಿಗರು ವಿಪರೀತ ಒತ್ತಡದಿಂದಾಗಿ ಖಿನ್ನತೆಗೆ ಒಳಗಾಗುತ್ತಿರುವುದು ದೊಡ್ಡ ಸುದ್ದಿಯಾಗುತ್ತಿದೆ. ಆಸ್ಟ್ರೇಲಿಯದ...
-
ಪೋಖರಾ (ನೇಪಾಲ): 13ನೇ ಸೌತ್ ಏಶ್ಯನ್ ಗೇಮ್ಸ್ನ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ. ಶುಕ್ರವಾರ ಆಶ್ಮಿತಾ ಚಾಲಿಹಾ ಮತ್ತು...
-
ನಾಗಾಲ್ಯಾಂಡ್: ಹಾರ್ನ್ ಬಿಲ್ ನಲ್ಲಿ ನಡೆದ 20ನೇ ವರ್ಷದ ಹಾರ್ನ್ ಬಿಲ್ ಫೆಸ್ಟಿವಲ್ಗೆ ತೆರೆ ಬಿದ್ದಿದೆ. ಡಿಸೆಂಬರ್ 1ರಿಂದ 6ರ ವರೆಗೆ ಈ ಹಬ್ಬ ನಡೆದಿತ್ತು. ಡಿಸೆಂಬರ್...