ಸರ್ದಾ ಮೈನ್ಸ್ಗೆ ಸುಪ್ರೀಂ ಕೋರ್ಟ್ ನಿರಾಳ
Team Udayavani, Jan 31, 2020, 1:54 AM IST
ಹೊಸದಿಲ್ಲಿ: ಗಣಿ ಕಂಪನಿ ಸರ್ದಾ ಮೈನ್ಸ್ಗೆ ಸುಪ್ರೀಂ ಕೋರ್ಟ್ನಿಂದ ತುಸು ನಿರಾಳ ದೊರೆತಿದೆ. ಪರಿಸರ ಹಾನಿ ಪರಿಹಾರ 933 ಕೋಟಿ ರೂ.ಗಳನ್ನು ಫೆ.29ರ ಒಳಗೆ ಠೇವಣಿ ಇರಿಸಿ, ಒಡಿಶಾದಲ್ಲಿ ಗಣಿಗಾರಿಕೆ ಮುಂದು ವರಿಸಬಹುದು ಎಂದು ಕಂಪನಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಪರಿಸರ ಮಾನ್ಯತೆ ಪಡೆಯದಿದ್ದ ಕಾರಣ 2014ರ ಮಾ.31ರಂದು ಸರ್ದಾ ಮೈನ್ಸ್ಗೆ ಅದಿರು ಪೂರೈಸದಂತೆ ತಡೆ ಒಡ್ಡಲಾಗಿತ್ತು.