ಫಾಸ್ಟಾಗ್ನಿಂದ ಶುಲ್ಕ ಸಂಗ್ರಹ ಹೆಚ್ಚು ; ನಗದು ಮೂಲಕ ಶುಲ್ಕ ಸಂಗ್ರಹ ಶೇ.30ಕ್ಕೆ ಕುಸಿತ
Team Udayavani, Dec 27, 2019, 7:46 AM IST
ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟಾಗ್ ಮೂಲಕ ಟೋಲ್ ಸಂಗ್ರಹ ಮಾಡಲು ಶುರು ಮಾಡಿದ ಬಳಿಕ ಆದಾಯ ಪ್ರಮಾಣ ಹೆಚ್ಚಾಗಿದೆ. ನವೆಂಬರ್ನಲ್ಲಿ ಪ್ರತಿ ದಿನ 26.4 ಕೋಟಿ ರೂ. ಸಂಗ್ರಹವಾಗುತ್ತಿದ್ದದ್ದು, ಈ ತಿಂಗಳ ಮೂರನೇ ವಾರದ ವೇಳೆಗೆ ಅದರ ಪ್ರಮಾಣ ಪ್ರತಿ ದಿನ 44 ಕೋಟಿ ರೂ.ಗೆ ಏರಿಕೆಯಾಗಿದೆ.
ಈ ಅವಧಿಯಲ್ಲಿ ನಗದು ಮೂಲಕ ಟೋಲ್ ಸಂಗ್ರಹ ಶೇ.30ರಷ್ಟು ಕುಸಿದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಫಾಸ್ಟ್ಟ್ಯಾಗ್ ಅಳವಡಿಸಿಕೊಳ್ಳಲಿರುವುದರಿಂದ ಮೊತ್ತ ಸಂಗ್ರಹ ಪ್ರಮಾಣ ಹೆಚ್ಚಾಗಲಿದೆ ಎಂಬ ವಿಶ್ವಾಸದಲ್ಲಿದೆ ಕೇಂದ್ರ ಸರಕಾರ.
ಹೆಚ್ಚಳ: ಫಾಸ್ಟಾಗ್ ಮೂಲಕ ಶುಲ್ಕ ಪಾವತಿ ಮಾಡುವ ವಾಹನಗಳ ಸಂಖ್ಯೆ ಡಿ.1 ರಂದು 19.5 ಲಕ್ಷ ಇದ್ದದ್ದು 16ರ ವೇಳೆಗೆ 24.8 ಲಕ್ಷಕ್ಕೆ ಏರಿಕೆಯಾಗಿದೆ. ಹೀಗಾಗಿ ಜನರು ಹೊಸ ವ್ಯವಸ್ಥೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಒಪ್ಪಿಕೊಂಡಿದ್ದಾರೆ ಎನ್ನುವುದು ಕೇಂದ್ರದ ಪ್ರತಿಪಾದನೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್ಗಳಲ್ಲಿ ಪ್ರತಿ ದಿನಕ್ಕೆ 60 ಲಕ್ಷಕ್ಕೂ ಅಧಿಕ ವಾಹನಗಳಿಂದ ಶುಲ್ಕ ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿವೆ. ದೇಶಾ ದ್ಯಂತ ಸುಮಾರು 20 ಕೋಟಿ ನೋಂದಾಯಿತ ವಾಹನಗಳು ಇದ್ದು, ಈ ಪೈಕಿ 6 ಕೋಟಿ ನಾಲ್ಕು ಚಕ್ರ ವಾಹನಗಳೇ ಇವೆ.
ಕದ್ದ ಕಾರು ಪತ್ತೆ
ಕಳವಾಗಿರುವ ವಾಹನ ಪತ್ತೆ ಮಾಡಲೂ ಫಾಸ್ಟಾಗ್ ನೆರವಾಗಿದೆ. ಆಗಸ್ಟ್ನಲ್ಲಿ ಪುಣೆ ಬಿಲ್ಡರ್ ರಾಜೇಂದ್ರ ಜಗ್ತಾಪ್, ಮಹೀಂದ್ರಾ ಸ್ಕಾರ್ಪಿಯೊ ಖರೀದಿಸಿದ್ದರು ಬಳಿಕ ಅದು ಕಳವಾಗಿತ್ತು. ಡಿ.23ರಂದು ಎರಡು ಬಾರಿ ಫಾಸ್ಟಾಗ್ ಮೂಲಕ ಹಣ ಕಡಿತಗೊಂಡ ಸಂದೇಶ ಮೊಬೈಲ್ಗೆ ಬಂದಿದೆ.
ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆ ಮಾಹಿತಿಯನ್ವಯ, ವಾಹನ ಹೋದ ಜಾಗವನ್ನು ಜಿಪಿಎಸ್ ಮೂಲಕ ಹಿಂಬಾಲಿಸಿದ್ದಾರೆ. ಥಾಣೆಯ ಎಸ್ಟೇಟೊಂದರಲ್ಲಿ ಕಾರು ಪತ್ತೆಯಾಗಿದೆ. ಕಳ್ಳರು ಕಾರನ್ನು ಬಿಟ್ಟು ಓಡಿಹೋಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ