ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳ ಮರುಚಾಲನೆಗೆ 25ಸಾವಿರ ಕೋಟಿ ರೂ. ಪ್ಯಾಕೇಜ್
ಗೃಹನಿರ್ಮಾಣ ಕ್ಷೇತ್ರದ ಉತ್ತೇಜನಕ್ಕೆ ಕೇಂದ್ರದಿಂದ ಬಂಪರ್ ಕೊಡುಗೆ ; ಉದ್ಯೋಗವಕಾಶ ಮತ್ತು ಕಚ್ಛಾವಸ್ತುಗಳಿಗೆ ಬೇಡಿಕೆ ನಿರೀಕ್ಷೆ
Team Udayavani, Nov 6, 2019, 10:12 PM IST
ನವದೆಹಲಿ: ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ ಮತ್ತು ಆ ಮೂಲಕ ತಳಕಂಡಿರುವ ದೇಶದ ಆರ್ಥಿಕತೆಗೆ ಚೇತರಿಕೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರಕಾರವು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅರ್ಧಕ್ಕೇ ನಿಂತುಹೋಗಿರುವ ಸುಮಾರು 1600 ಪ್ರಾಜೆಕ್ಟ್ ಗಳ ಮರುಚಾಲನೆಗಾಗಿ 25ಸಾವಿರ ಕೋಟಿ ರೂಪಾಯಿಗಳ ನಿಧಿ ಮೀಸಲಿಟ್ಟಿದೆ.
ಮನೆ ಖರೀದಿದಾರರಿಗೆ ಇದರಿಂದ ಭಾರೀ ಪ್ರಯೋಜನವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮತ್ತು ಈ ಉದ್ದೇಶಕ್ಕಾಗಿ ಬದಲೀ ಹೂಡಿಕೆ ನಿಧಿ (AIF) ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಇಂದು ತನ್ನ ಒಪ್ಪಿಗೆಯನ್ನು ಸೂಚಿಸಿದೆ.
ದೇಶದಲ್ಲಿನ ಅತೀದೊಡ್ಡ ಬ್ಯಾಂಕಿಂಗ್ ಜಾಲವಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಲ್.ಐ.ಸಿ. ಮತ್ತು ಕೇಂದ್ರ ಸರಕಾರ ಜಂಟಿಯಾಗಿ ಎ.ಐ.ಎಫ್. ನಿಧಿಯಲ್ಲಿ ಒಟ್ಟು 25 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿವೆ. ಈ ನಿಧಿಯನ್ನು ದೇಶದಲ್ಲಿ ಅರ್ಧಕ್ಕೆ ನಿಂತಿರುವ ಗೃಹನಿರ್ಮಾಣ ಕಾಮಗಾರಿಗಳ ಮರುಚಾಲನೆಗೆ ಬಳಸಲಾಗುವುದು ಎಂಬ ವಿಚಾರವನ್ನು ಕೇಂದ್ರ ಸಂಪುಟ ಸಭೆಯ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಕೇಂದ್ರ ಸರಕಾರದ ಈ ಮಹತ್ವದ ಉತ್ತೇಜನಾ ಕ್ರಮದಿಂದ ದೇಶದೆಲ್ಲೆಡೆ ಅರ್ಧಕ್ಕೆ ಸ್ಥಗಿತಗೊಂಡಿರುವ 4.58 ಲಕ್ಷ ಗೃಹ ನಿರ್ಮಾಣ ಕಾಮಗಾರಿ ಸೇರಿದಂತೆ 1,600 ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳಿಗೆ ಇದರಿಂದ ಸಹಕಾರಿಯಾಗಲಿದೆ ಎಂಬ ಅಂಶವನ್ನು ಹಣಕಾಸು ಸಚಿವರು ಬೊಟ್ಟು ಮಾಡಿದರು.
ಇನ್ನು ಈ ಉತ್ತೇಜನಾ ಕ್ರಮದ ಪ್ರಯೋಜನವನ್ನು ಮನೆ ಖರೀದಿದಾರರಿಗೆ ಮತ್ತು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಮಾಡುವ ವಿಧಾನಗಳ ಕುರಿತಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಜೊತೆ ಈಗಾಗಲೇ ಚರ್ಚಿಸಿರುವುದಾಗಿಯೂ ಸೀತಾರಾಮನ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಇನ್ನು ಈ ಉದ್ದೇಶಕ್ಕಾಗಿ ಸ್ಥಾಪಿಸಲಾಗುವ ಈ ನಿಧಿಯಲ್ಲಿ ಕೇಂದ್ರ ಸರಕಾರವು 10 ಸಾವಿರ ಕೋಟಿ ರೂಪಾಯಿಗಳನ್ನು ಪ್ರಾರಂಭಿಕ ಮೊತ್ತವಾಗಿ ಹೂಡಿಕೆ ಮಾಡಲಿರುವುದು ಹಾಗೆಯೇ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಭಾರತೀಯ ಜೀವ ವಿಮಾ ನಿಗಮಗಳು ಜಂಟಿಯಾಗಿ ಉಳಿದ ಮೊತ್ತವನ್ನು ಹೂಡಿಕೆ ಮಾಡಲಿವೆ. ಹೀಗೆ ಒಟ್ಟಾರೆಯಾಗಿ ಬದಲೀ ಹೂಡಿಕೆ ನಿಧಿಯಲ್ಲಿ (AIF) ಪ್ರಾರಂಭಿಕ ಹಂತದಲ್ಲಿ 25 ಸಾವಿರ ಕೋಟಿ ರೂಪಾಯಿಗಳ ಮೂಲ ಹೂಡಿಕೆ ನಡೆಯಲಿದೆ ಎಂದು ಈ ಯೋಜನೆಯ ಕಾರ್ಯವಿಧಾನವನ್ನು ಕೇಂದ್ರ ಹಣಕಾಸು ಸಚಿವರು ವಿವರಿಸಿದರು.
ಹಂತ ಹಂತವಾಗಿ ಈ ನಿಧಿಯನ್ನು ಬಿಡುಗಡೆ ಮಾಡಲಿದ್ದು ಎನ್.ಪಿ.ಎ.ಗೊಂಡಿರುವ ಗೃಹ ನಿರ್ಮಾಣ ಪ್ರಾಜೆಕ್ಟ್ ಗಳು ಮತ್ತು ರಾಷ್ಟ್ರೀಯ ಕಂಪೆನಿ ಕಾನೂನು ಟ್ರಿಬ್ಯೂನಲ್ ದಿವಾಳಿ ಕೋರ್ಟ್ ನಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ಗೃಹನಿರ್ಮಾಣ ಪ್ರಾಜೆಕ್ಟ್ ಗಳಿಗೂ ಸಹ ಈ ಸಹಾಯಧನ ಲಭಿಸಲಿದೆ ಎಂಬ ಮಾಹಿತಿಯನ್ನು ಹಣಕಾಸು ಸಚಿವರು ಇದೇ ಸಂದರ್ಭದಲ್ಲಿ ನೀಡಿದರು.
ಈ ಮಹತ್ವದ ಘೋಷಣೆಯಿಂದ ದೇಶದ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರವು ಮತ್ತೆ ಚೇತರಿಸಿಕೊಳ್ಳುವ ಆಶಾವಾದ ವ್ಯಕ್ತವಾಗಿದೆ. ಗೃಹನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುವುದು ಮಾತ್ರವಲ್ಲದೇ ಗೃಹನಿರ್ಮಾಣಕ್ಕೆ ಅಗತ್ಯ ಸಾಮಾಗ್ರಿಗಳಾಗಿರುವ ಸಿಮೆಂಟು, ಕಬ್ಬಿಣ ಮತ್ತು ಸ್ಟೀಲ್ ಉದ್ಯಮಗಳಿಗೂ ಸಹ ಇದರ ಪ್ರಯೋಜನ ಲಭಿಸುವ ಆಶಾವಾದವನ್ನು ಕೇಂದ್ರ ಸರಕಾರ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ