ಐಸಿಐಸಿಐ ಬ್ಯಾಂಕ್ ಬಿಟ್ಟ ಕೊಚ್ಚಾರ್, ಸಂದೀಪ್ ಬಕ್ಷಿ ನೂತನ MD,CEO
Team Udayavani, Oct 4, 2018, 3:19 PM IST
ಹೊಸದಿಲ್ಲಿ : ತತ್ಕ್ಷಣದಿಂದ ಜಾರಿಗೆ ಬರುವಂತೆ ಚಂದಾ ಕೊಚ್ಚಾರ್ ಐಸಿಐಸಿಐ ಬ್ಯಾಂಕ್ ಬಿಟ್ಟಿದ್ದು ಸಂದೀಪ್ ಬಕ್ಷಿ ನೂತನ ಎಂ ಡಿ ಮತ್ತು ಸಿಇಓ ಆಗಿದ್ದಾರೆ ಎಂದು ಐಸಿಐಸಿ ಬ್ಯಾಂಕ್ ಹೇಳಿದೆ.
ವಿಡಿಯೋಕಾನ್ ಸಾಲ ಕ್ಕೆ ಸಂಬಂಧಿಸಿದಂತೆ ಚಂದಾ ಕೊಚ್ಚಾರ್ ಅವರು ಬಾಹ್ಯ ತನಿಖೆಯನ್ನು ಎದುರಿಸುತ್ತಿದ್ದಾರೆ. ಕೊಚ್ಚಾರ್ ಮತ್ತು ಅವರ ಕುಟುಂಬ ಸದಸ್ಯರು ‘ ಕೊಡು-ಕೊಳೆ ‘ಯ ಆರೋಪ ಎದುರಿಸುತ್ತಿದ್ದಾರೆ ಮತ್ತು ವಿಡಿಯೋಕಾನ್ ಸಮೂಹಕ್ಕೆ ಸಾಲ ನೀಡಿರುವ ವಿಷಯದಲ್ಲಿ ವಿರೋಧಾತ್ಮಕ ಹಿತಾಸಕ್ತಿಯ ಆರೋಪಕ್ಕೂ ಗುರಿಯಾಗಿದ್ದಾರೆ.
ಬಕ್ಷಿ ಅವರ ನೇಮಕಾತಿಯು ಐದು ವರ್ಷಗಳ ಅವಧಿಯದ್ದಾಗಿದ್ದು 2023ರ ಅ.3ರಂದು ಅದು ಕೊನೆಗೊಳ್ಳಲಿದೆ ಎಂದು ಬಿಎಸ್ಇ ಯಲ್ಲಿ ಸಲ್ಲಿಸಿರುವ ದಾಖಲೆ ಪತ್ರದಲ್ಲಿ ಐಸಿಐಸಿಐ ಹೇಳಿದೆ.
ಕೊಚ್ಚಾರ್ ಅವರು 2018ರ ಮೇ 30ರಂದೇ ತನ್ನ ವಿರುದ್ಧದ ತನಿಖೆ ಮುಗಿಯುವ ವರೆಗಿನ ಅವಧಿಯ ವರೆಗೆ ರಜೆಯಲ್ಲಿ ತೆರಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ