ದಿಲ್ಲಿ-ಲಕ್ನೋ ತೇಜಸ್ ಎಕ್ಸ್ ಪ್ರೆಸ್ ಗೆ ಚಾಲನೆ, ಏನಿದರ ವಿಶೇಷತೆ, ಮೆನು, ಟಿಕೆಟ್ ದರ ಎಷ್ಟು


Team Udayavani, Oct 4, 2019, 4:28 PM IST

Airplane-Tejas-express

ಲಕ್ನೋ: ದೆಹಲಿ ಟು ಲಕ್ನೋ ನಡುವೆ ಸಂಚರಿಸಲಿರುವ ದೇಶದ ಮೊದಲ ಖಾಸಗಿ ರೈಲು ತೇಜಸ್ ಎಕ್ಸ್ ಪ್ರೆಸ್ ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಐಆರ್ ಟಿಸಿಯ ನಿರ್ವಹಣೆಯ ಭಾರತದ ಪ್ರಥಮ ಖಾಸಗಿ ರೈಲು ತೇಜಸ್ ಶನಿವಾರದಿಂದ ಸಂಚರಿಸಲಿದೆ.

ಭಾರತೀಯ ರೈಲ್ವೆ ಇಲಾಖೆ ಆಶ್ರಯದಲ್ಲಿ ಸಂಚರಿಸಲಿರುವ ತೇಜಸ್ ಎಕ್ಸ್ ಪ್ರೆಸ್ ಖಾಸಗಿ ರೈಲಿನಲ್ಲಿ ವಿಮಾನ ಮಾದರಿಯ ಸೌಲಭ್ಯ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಸಂಪೂರ್ಣ ಹವಾನಿಯಂತ್ರಿತ ತೇಜಸ್ ಎಕ್ಸ್ ಪ್ರೆಸ್ ರೈಲು ದೆಹಲಿಯಿಂದ ಲಕ್ನೋಗೆ 6ಗಂಟೆ 15 ನಿಮಿಷಗಳಲ್ಲಿ ತಲುಪಲಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ಭಾರತದ ಮೊದಲ ಖಾಸಗಿ ತೇಜಸ್ ಎಕ್ಸ್ ಪ್ರೆಸ್ ನಲ್ಲಿ ವಿಮಾನ ಮಾದರಿ ಸೌಲಭ್ಯ ಸಿಗುತ್ತೆ!

ದೆಹಲಿ-ಲಕ್ನೋ ತೇಜಸ್ ಎಕ್ಸ್ ಪ್ರೆಸ್ ಒಂದು ವೇಳೆ ವಿಳಂಬವಾದರೆ ಪ್ರಯಾಣಿಕರಿಗೆ ನಷ್ಟವನ್ನು ತುಂಬಿ ಕೊಡಲಿರುವ ದೇಶದ ಮೊದಲ ರೈಲು ಎಂಬ ಹೆಗ್ಗಳಿಕೆ ಇದರದ್ದಾಗಲಿದೆ. ಒಂದು ಗಂಟೆಗಿಂತ ಹೆಚ್ಚು ವಿಳಂಬವಾದರೆ ಪ್ರಯಾಣಿಕರಿಗೆ 100 ರೂಪಾಯಿ, ಎರಡು ಗಂಟೆಗಿಂತ ಹೆಚ್ಚು ವಿಳಂಬವಾದರೆ 250 ರೂಪಾಯಿ ಪರಿಹಾರದ ರೂಪದಲ್ಲಿ ನೀಡಲಿದೆ ಎಂದು ತಿಳಿಸಿದೆ.

ತೇಜಸ್ ಎಕ್ಸ್ ಪ್ರೆಸ್ ರೈಲಿನ ಸಮಯ:

ತೇಜಸ್ ಎಕ್ಸ್ ಪ್ರೆಸ್ ರೈಲು(ರೈಲು ನಂ.82501) ಲಕ್ನೋದಿಂದ ಬೆಳಗ್ಗೆ 6.10ಕ್ಕೆ ಹೊರಡಲಿದ್ದು, ದೆಹಲಿಗೆ 12.25ಕ್ಕೆ ತಲುಪಲಿದೆ. ಅದೇ ರೀತಿ ದೆಹಲಿಯಿಂದ (ರೈಲು ನಂ.82502) 4.30ಕ್ಕೆ ಹೊರಟು ರಾತ್ರಿ 10.35ಕ್ಕೆ ಲಕ್ನೋ ತಲುಪಲಿದೆ. ವಾರದಲ್ಲಿ ಮಂಗಳವಾರ ಹೊರತುಪಡಿಸಿ, ಉಳಿದ ಎಲ್ಲಾ ದಿನ ತೇಜಸ್ ಎಕ್ಸ್ ಪ್ರೆಸ್ ಸಂಚರಿಸಲಿದೆ. ಈ ರೈಲು ಕಾನ್ಪುರ್ ಸೆಂಟ್ರಲ್ ಮತ್ತು ಗಾಜಿಯಾಬಾದ್ ನಲ್ಲಿ ನಿಲುಗಡೆ ಇದೆ.

ತೇಜಸ್ ರೈಲಿನಲ್ಲಿ ಟಿಕೆಟ್ ದರ ಎಷ್ಟು?

ಲಕ್ನೋದಿಂದ ದೆಹಲಿಗೆ ಎಸಿ (Chair car-ಇದು ಬಕೆಟ್ ಆಕೃತಿಯ ಸೀಟ್) ಟಿಕೆಟ್  ಬೆಲೆ ಒಬ್ಬರಿಗೆ 1,125 ರೂಪಾಯಿ, ಎಕ್ಸಿಕ್ಯೂಟಿವ್ ಸೀಟ್ ಟಿಕೆಟ್ ಗೆ ಒಬ್ಬರಿಗೆ 2,310 ರೂಪಾಯಿ.

ದೆಹಲಿಯಿಂದ ಲಕ್ನೋಗೆ ಎಸಿ ಟಿಕೆಟ್ ಬೆಲೆ 1,280 ರೂಪಾಯಿ, ಎಕ್ಸಿಕ್ಯೂಟಿವ್ ಟಿಕೆಟ್ ಬೆಲೆ ಒಬ್ಬರಿಗೆ 2,450 ರೂಪಾಯಿ. ಪ್ರಯಾಣಿಕರು ಲಕ್ನೋದಿಂದ ಕಾನ್ಪುರ್ ಕ್ಕೆ ತೇಜಸ್ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುವುದಾದರೆ ಟಿಕೆಟ್ ಬೆಲೆ ಒಬ್ಬರಿಗೆ 320 ರೂಪಾಯಿ, ಎಕ್ಸಿಕ್ಯೂಟಿವ್ ಟಿಕೆಟ್ ಗೆ 630 ರೂಪಾಯಿ. ಲಕ್ನೋದಿಂದ ಗಾಜಿಯಾಬಾದ್ ಗೆ ಎಸಿ ಟಿಕೆಟ್ ಬೆಲೆ 1,125, ಎಕ್ಸಿಕ್ಯೂಟಿವ್ ಟಿಕೆಟ್ ಗೆ 2,310 ರೂಪಾಯಿ.

ತೇಜಸ್ ಎಕ್ಸ್ ಪ್ರೆಸ್ ಮೆನು:

ತೇಜಸ್ ಎಕ್ಸ್ ಪ್ರೆಸ್ ನಲ್ಲಿ ನ ಊಟಕ್ಕೆ (ಎಸಿ ಕ್ಲಾಸ್) 185 ರೂಪಾಯಿ, ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ 245 ರೂಪಾಯಿ (ಟಿಕೆಟ್ ದರದಲ್ಲಿಯೇ ಸೇರಿರುತ್ತದೆ). ದೆಹಲಿಯಿಂದ ಲಕ್ನೋ ಪ್ರಯಾಣದ ವೇಳೆ ಕೆಟರಿಂಗ್ ಬೆಲೆ 340 ರೂಪಾಯಿ(Chair car) ಮತ್ತು ಎಕ್ಸಿಕ್ಯೂಟಿವ್ ಗೆ 385 ರೂಪಾಯಿ ದರ ನಿಗದಿಪಡಿಸಿರುವುದಾಗಿ ವಿವರಿಸಿದೆ.

ತೇಜಸ್ ಎಕ್ಸ್ ಪ್ರೆಸ್ ರೈಲಿನ ಎಸಿ ಕ್ಲಾಸ್ ಪ್ರಯಾಣಿಕರಿಗೆ ಟೀ, ಕಾಫಿ(ಪ್ರಿ ಮಿಕ್ಸ್ ಕಿಟ್) ಕೊಡಲಿದ್ದು, ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣಿಕರಿಗೆ ಪ್ರಿಮೀಯಮ್ ಕುಕ್ಕೀಸ್ ಕಿಟ್ ನೀಡಲಾಗುವುದು ಎಂದು ಐಆರ್ ಸಿಟಿಸಿ ತಿಳಿಸಿದೆ. ಅಷ್ಟೇ ಅಲ್ಲ ಎಸಿ ಪ್ರಯಾಣಿಕರಿಗೆ ಲಿಂಬು ಶರಬತ್, ಎಕ್ಸಿಕ್ಯೂಟಿವ್ ಪ್ರಯಾಣಿಕರಿಗೆ ಲಸ್ಸಿ ವಿತರಿಸಲಾಗುವುದು ಎಂದು ವಿವರಿಸಿದೆ.

ಸಸ್ಯಹಾರ ಮತ್ತು ಮಾಂಸಹಾರ ಉಪಹಾರ ಲಭ್ಯವಿದೆ. ಸಸ್ಯಹಾರಿಗಳಿಗೆ ಎರಡು ಪೀಸ್ ವೆಜ್ ಕಟ್ಲೇಟ್(combo), ಉತ್ತಪ್ಪ, ಫೋಹಾ(ಮಹಾರಾಷ್ಟ್ರ ಶೈಲಿಯ ಅವಲಕ್ಕಿ, ಈರುಳ್ಳಿ ಮಿಶ್ರಣದ ತಿಂಡಿ), ಸೇವಿಗೆ ಮತ್ತು ಕಾಯಿ ಚಟ್ನಿ.

ಮತ್ತೊಂದು ಕಾಂಬೋದಲ್ಲಿ ಎರಡು ಪೀಸ್ ಮೆದು ವಡಾ, ರವೆ ಉಪ್ಪಿಟ್ಟು, ತೆಂಗಿನ ಕಾಯಿ ಚಟ್ನಿ. ಮಾಂಸಹಾರಿಗಳಿಗೆ ಮಸಾಲಾ ಆಮ್ಲೇಟ್ಸ್ ಮತ್ತು ಎಣ್ಣೆಯಲ್ಲಿ ಹುರಿದ ತರಕಾರಿ ನೀಡಲಾಗುತ್ತದೆ. ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣಿಕರು ಹೆಚ್ಚುವರಿಯಾಗಿ ಸಕ್ಕರೆ ಮತ್ತು ಹಾಲಿಗೆ ಬೇಡಿಕೆ ಸಲ್ಲಿಸಬಹುದಾಗಿದೆ.

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.