ಈ ಬ್ಯಾಂಕ್‌ನಿಂದ ಕೇವಲ ಒಂದು ಸಾವಿರ ರೂ. ಮಾತ್ರ ಡ್ರಾ ಮಾಡಲು ಅವಕಾಶ!

ಆರ್‌ಬಿಐ ಕಠಿನ ಕ್ರಮದಿಂದ ಗ್ರಾಹಕರು ಕಂಗಾಲು

Team Udayavani, Sep 24, 2019, 6:30 PM IST

PMC-Bank

ಮುಂಬಯಿ: ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ (ಪಿಎಂಸಿ) ವಿರುದ್ಧ ಕೇಂದ್ರೀಯ ರಿಸರ್ವ್‌ ಬ್ಯಾಂಕ್‌ ಹಲವು ನಿಬಂಧನೆಗಳನ್ನು ಹೇರಿದ್ದು, ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಯಾವುದೇ ಖಾತೆ ಹೊಂದಿದ ಗ್ರಾಹಕರು 1 ಸಾವಿರ ರೂ.ಗಳಿಗೆ ಮಿಕ್ಕಿ ಡ್ರಾ ಮಾಡದಂತೆ ನಿಬಂಧನೆ ಹೇರಿದ್ದು, ಇದರಿಂದ ಬ್ಯಾಂಕ್‌ ಮತ್ತು ಬ್ಯಾಂಕ್‌ ಎಟಿಎಂ ಎದುರು ಗೊಂದಲ ಸೃಷ್ಟಿಯಾಗಿದೆ. ಅಲ್ಲದೇ ಮುಂದಿನ ಆರು ತಿಂಗಳ ಕಾಲ ಬ್ಯಾಂಕ್‌ ಯಾವುದೇ ಸಾಲ, ಠೇವಣಿಯನ್ನು ಪಡೆಯದಂತೆ ಆರ್‌ಬಿಐ ನಿರ್ಬಂಧ ವಿಧಿಸಿದೆ.

ನಿರ್ಬಂಧವೇಕೆ?
ಬ್ಯಾಂಕ್‌ ಬೇಕಾಬಿಟ್ಟಿ ಸಾಲ ನೀಡಿದ್ದು, ಆರ್‌ಬಿಐನ ಈ ನಿಂಬಂಧನೆಗೆ ಕಾರಣ ಎಂದು ಹೇಳಲಾಗಿದೆ. 2019 ವಿತ್ತೀಯ ವರ್ಷದ ವರದಿಯಲ್ಲಿ ಬ್ಯಾಂಕ್‌ ಶೇ.3.7ರಷ್ಟು ಸಾಲ ನೀಡಿದ್ದಾಗಿ ಆರ್‌ಬಿಐಗೆ ವರದಿ ನೀಡಿತ್ತು. ಆದರೀಗ ಅದು ಹೆಚ್ಚು ಸಾಲ ಕೊಟ್ಟಿರುವುದಾಗಿ ಹೇಳುತ್ತಿದೆ. ಈ ಕಾರಣಕ್ಕಾಗಿ ಅವ್ಯವಹಾರ ನಡೆದಿದೆಯೇ ಎಂಬ ಶಂಕೆಯಮೇರೆಗೆ ಆರ್‌ಬಿಐ ನಿಬಂಧನೆ ವಿಧಿಸಿದೆ.

ಆರ್‌ಬಿಐ ನಿಬಂಧನೆಯಿಂದ ಪರಿಣಾಮವೇನು?
ಒಂದು ರೀತಿಯಲ್ಲಿ ಆರ್‌ಬಿಐ ಬ್ಯಾಂಕ್‌ ವ್ಯವಹಾರಗಳಿಗೆ ಬಹುತೇಕ ನಿರ್ಬಂಧ ಹೇರಿದೆ. 35ಎ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ ಅನ್ವಯ ಇದು ಮುಂದಿನ 6 ತಿಂಗಳ ಕಾಲ ಚಾಲ್ತಿಯಲ್ಲಿರಲಿದೆ. ಇದರಿಂದಾಗಿ ಬ್ಯಾಂಕ್‌ನಲ್ಲಿ ಯಾವುದೇ ರೀತಿಯ ಖಾತೆ ಹೊಂದಿರುವ ಗ್ರಾಹಕರು ಮುಂದಿನ 6 ತಿಂಗಳಲ್ಲಿ 1 ಸಾವಿರ ರೂ.ಗಳಿಗೆ ಮಿಕ್ಕಿ ಹಣ ವಿತ್‌ಡ್ರಾ ಮಾಡುವಂತಿಲ್ಲ. ಅಲ್ಲದೇ ಬ್ಯಾಂಕು ಯಾವುದೇ ರೀತಿಯ ಠೇವಣಿ ಮತ್ತು ಸಾಲವನ್ನು ಕೊಡುವಂತಿಲ್ಲ ಎಂದು ಆದೇಶಿಸಲಾಗಿದೆ.

ಇದೇ ಮೊದಲಲ್ಲ
ಆರ್‌ಬಿಐ ಹೀಗೆ ನಿಯಂತ್ರಣ ಹೇರುವುದು ಇದೇ ಮೊದಲೇನಲ್ಲ. ಈ ಹಿಂದೆ ನಿಯಮ ಉಲ್ಲಂ ಸಿದ ಸಹಕಾರಿ ಬ್ಯಾಂಕ್‌ಗಳ ವಿರುದ್ಧ ಅದು ಕಾನೂನು ಕ್ರಮ ಕೈಗೊಂಡಿತ್ತು ಈ ತಿಂಗಳಲ್ಲೇ ಅದು ಒಸಾಮ್ನಾಬಾದ್‌ನ ವಸಂತದಾದ ನಗರಿ ಸಹಕಾರಿ ಬ್ಯಾಂಕ್‌, ನಾಸಿಕ್‌ನ ವಿಠಲ್‌ರಾವ್‌ ವಿಖೆ ಪಾಟೀಲ್‌ ಕೋ.ಆಪ್‌. ಬ್ಯಾಂಕ್‌ ಮತ್ತು ಕರಾಡ್‌ ಜನ್ತಾ ಸಹಕಾರಿ ಬ್ಯಾಂಕ್‌ ವಿರುದ್ಧ ಕ್ರಮ ಕೈಗೊಂಡಿತ್ತು.

ಮೇನಲ್ಲಿ ಗೋವಾದ ದಿ ಮಡ್ಗಾಂವ್‌ ಅರ್ಬನ್‌ ಕೋ. ಆಪ್‌. ಬ್ಯಾಂಕ್‌ ವಿರುದ್ಧವೂ ನಿರ್ಬಂಧ ಹೇರಿದ್ದು, ಗ್ರಾಹಕರ ವಿತ್‌ಡ್ರಾ ಮಿತಿಯನ್ನು 5 ಸಾವಿರ ರೂ.ಗೆ ಸೀಮಿತಗೊಳಿಸಿತ್ತು. ಸದ್ಯ ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ಪರವಾನಿಗೆ ರದ್ದುಮಾಡುವ ಯಾವುದೇ ಇರಾದೆ ಇಲ್ಲ ಎಂದು ಆರ್‌ಬಿಐ ಮೂಲಗಳು ಹೇಳಿವೆ.

ದೊಡ್ಡ ಸಹಕಾರಿ ಬ್ಯಾಂಕ್‌
ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ದೊಡ್ಡ ಸಹಕಾರಿ ಬ್ಯಾಂಕ್‌. ಕರ್ನಾಟಕ, ಗುಜರಾತ್‌, ಗೋವಾ, ಆಂಧ್ರಪ್ರದೇಶ, ದಿಲ್ಲಿ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಇದು 137 ಶಾಖೆಗಳನ್ನು ಹೊಂದಿದೆ. 1984ರಲ್ಲಿ ಮುಂಬಯಿನಲ್ಲಿ ಇದು ಆರಂಭಗೊಂಡಿತ್ತು. ಈ ಬ್ಯಾಂಕ್‌ ದೇಶದ ಅತಿ ದೊಡ್ಡ 10 ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಇದು ಸುಮಾರು 11,617 ಕೋಟಿ ರೂ. ಠೇವಣಿ ಮತ್ತು 8,383 ಕೋಟಿ ರೂ. ಸಾಲವನ್ನು ನೀಡಿದೆ.

ತಪ್ಪೊಪ್ಪಿಗೆ
ಬ್ಯಾಂಕಿಂಗ್‌ ನಿಯಮಗಳ ಉಲ್ಲಂಘನೆಯಿಂದ ಹೀಗಾಗಿದ್ದು, ಈ ತಪ್ಪುಗಳನ್ನು ಒಪ್ಪಿಕೊಳ್ಳವುದಾಗಿ ಪಿಎಂಸಿ ಬ್ಯಾಂಕ್‌ನ ಆಡಳಿತ ನಿರ್ದೇಶಕ ಜಾಯ್‌ ಥಾಮಸ್‌ ಹೇಳಿದ್ದಾರೆ. ನಾವು ತಪ್ಪುಗಳನ್ನು ಒಪ್ಪಿಕೊಳ್ಳುತ್ತೇವೆ. ಆರ್‌ಬಿಐ ಕ್ರಮದಿಂದ 6 ತಿಂಗಳು ನಮ್ಮ ಗ್ರಾಹಕರಿಗೆ ಸಮಸ್ಯೆಯಾಗಲಿದೆ. ಅಲ್ಲದೇ 6 ತಿಂಗಳ ಒಳಗಾಗಿ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Stock-market-Exchange

Stock market ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ.ನಷ್ಟ

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.