ಚಿಗುರಿದ ಮಾರುಕಟ್ಟೆ ; ಜಿಎಸ್ಟಿ ಸಂಗ್ರಹ 1.05 ಲಕ್ಷ ಕೋ.ರೂ.
Team Udayavani, Nov 2, 2020, 6:20 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೋವಿಡ್ ಮತ್ತು ಲಾಕ್ಡೌನ್ಗಳ ಕರಿ ನೆರಳಿನಿಂದ ದೇಶದ ಅರ್ಥ ವ್ಯವಸ್ಥೆ ನಿಧಾನವಾಗಿ ಹೊರಬರುತ್ತಿದ್ದು, ಅಕ್ಟೋಬರ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಗಣನೀಯ ಏರಿಕೆ ಯಾಗಿದೆ. ಜತೆಗೆ ಆಟೋ ಮೊಬೈಲ್, ರಿಟೇಲ್ ಮಾರುಕಟ್ಟೆಗಳು ಕೂಡ ಚಿಗಿತುಕೊಂಡಿವೆ.
ದಸರಾ ಹಿನ್ನೆಲೆಯಲ್ಲಿ ಜನರು “ಶಾಪಿಂಗ್ ಮೂಡ್’ಗೆ ಇಳಿದ ಪರಿಣಾಮ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಚೇತರಿಕೆ ಕಂಡು ಬಂದಿದೆ. ಮಾರುತಿ ಸುಜುಕಿ ಕಾರು ಗಳ ಮಾರಾಟದಲ್ಲಿ ಶೇ. 19ರಷ್ಟು ಏರಿಕೆ ದಾಖಲಾದರೆ, ಹ್ಯುಂಡೈ ಕಾರುಗಳ ಮಾರಾಟ ದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಟಾಟಾ ಮೋಟಾರ್ಸ್ನ ಅಕ್ಟೋಬರ್ ಮಾರಾಟ ಶೇ. 79ರಷ್ಟು ಏರಿಕೆ ಕಂಡಿದೆ.
ಅಕ್ಟೋಬರ್ನಲ್ಲಿ ದೇಶದಲ್ಲಿ ಜಿಎಸ್ಟಿ ಸಂಗ್ರಹ 1,05,155 ಕೋ.ರೂ. ದಾಟಿರು ವುದು ಆಶಾ ದಾಯಕ ಬೆಳವಣಿಗೆ. ಫೆಬ್ರವರಿ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಬೃಹತ್ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ರವಿವಾರ ತಿಳಿಸಿದೆ.
ಈ ಮೊತ್ತದಲ್ಲಿ ಕೇಂದ್ರ ಸರಕಾರದ ಜಿಎಸ್ಟಿ ಪಾಲು 19,193 ಕೋ. ರೂ.ಗಳಾದರೆ, ರಾಜ್ಯಗಳ ಪಾಲಿನ ಜಿಎಸ್ಟಿ 5,411 ಕೋ.ರೂ., ಐಜಿಎಸ್ಟಿ ಪಾಲು 52,540 ಕೋ. ರೂ. ಆಗಿದೆ. ಕಳೆದ ವರ್ಷದ ಅಕ್ಟೋಬರ್ನಲ್ಲಿ 95,379 ಕೋ. ರೂ. ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಕಳೆದ ತಿಂಗಳು ಶೇ.10ರಷ್ಟು ಹೆಚ್ಚು ಸುಂಕ ಸಂಗ್ರಹವಾಗಿದೆ.
ಸತತ ಎರಡನೇ ಬಾರಿ
ದೇಶದಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗುತ್ತಿದೆ. ಇದು ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳುತ್ತಿರುವುದರ ಸೂಚನೆ. ಸತತ 2ನೇ ಬಾರಿಗೆ ಜಿಎಸ್ಟಿ ಸಂಗ್ರಹದಲ್ಲಿ ಏರಿಕೆ ಆಗಿದೆ ಎಂದು ಹಣಕಾಸು ಕಾರ್ಯದರ್ಶಿ ಅಜಯ ಭೂಷಣ ಪಾಂಡೆ ಹೇಳಿದ್ದಾರೆ. ಸರಕು ಸಾಗಣೆ ವಾಹನಗಳಿಗೆ ಅಗತ್ಯವಾದ ಇ-ವೇ ಬಿಲ್ ದೇಶದಲ್ಲಿ ಸೋಂಕುಪೂರ್ವದ ದಿನಗಳ ಪ್ರಮಾಣಕ್ಕೇ ವಾಪಸಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿಯೂ ಹೆಚ್ಚಳ
ಬೆಂಗಳೂರು: ದಸರಾ ಸಂದರ್ಭದಲ್ಲಿ ರಾಜ್ಯದಲ್ಲಿಯೂ ಎಸ್ಜಿಎಸ್ಟಿ ಸಂಗ್ರಹ ಹೆಚ್ಚಳವಾಗಿದೆ. ಅಕ್ಟೋಬರ್ನಲ್ಲಿ 2,024 ಕೋಟಿ ರೂ. ಎಸ್ಜಿಎಸ್ಟಿ ಸಂಗ್ರಹವಾಗಿದೆ. ದಸರಾ ಹಬ್ಬದಲ್ಲಿ ವಾಣಿಜ್ಯ ಚಟುವಟಿಕೆಗಳು ಹಾಗೂ ಆಟೊಮೊಬೈಲ್ ಮಾರಾಟ ಹೆಚ್ಚಳವಾಗಿದ್ದರಿಂದ ಜಿಎಸ್ಟಿ ಸಂಗ್ರಹದಲ್ಲಿ ಹೆಚ್ಚಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ 1,924.56 ಕೋಟಿ ರೂ. ಎಸ್ಜಿಎಸ್ಟಿ ಸಂಗ್ರಹವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ
Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?
Odisha: ಗೋಪಾಲ್ ಪುರ್ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ
Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?
Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!
MUST WATCH
ಹೊಸ ಸೇರ್ಪಡೆ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ