ಒಂದು ವಾರದ ಅಂತರದಲ್ಲಿ 750 ರೂ. ಇಳಿಕೆ ಕಂಡ ಚಿನ್ನದ ಬೆಲೆ..!
ಪ್ರಮುಖ ಮೆಟ್ರೋ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ..?
Team Udayavani, Jun 15, 2021, 4:03 PM IST
ನವ ದೆಹಲಿ : ಹಳದಿ ಲೋಹದ ಬೆಲೆ ಮತ್ತೆ ಇಳಿಮುಖಗೊಂಡಿದೆ. ಕಳೆದ ಶುಕ್ರವಾರ 10 ಗ್ರಾಂ ಚಿನ್ನಕ್ಕೆ 320 ರೂಪಾಯಿ ಇಳಿಕೆ ಕಂಡಿತ್ತು, ಈಗ ಮತ್ತೆ ಚಿನ್ನದ ಬೆಲೆ ಇಳಿಮುಖ ಕಂಡಿದೆ. ಶುಕ್ರವಾರ 49,000 ರೂ. ಇದ್ದ ಚಿನ್ನ, ಈಗ ಮತ್ತೆ 430 ರೂ. ಕುಸಿತಗೊಂಡು 48,450 ರೂ. ಗೆ ಇಳಿದಿದೆ.
ಒಂದುವಾರದ ಒಳಗೆ ಹತ್ತು ಗ್ರಾಂ ನ ಚಿನ್ನದ ಬೆಲೆ ಒಟ್ಟಾರೆ 750 ರೂ. ಇಳಿಕೆ ಕಂಡಿದೆ.
ಇನ್ನು, ಬೆಳ್ಳಿ ದರವೂ ಕುಸಿತ ಕಂಡಿದ್ದು, ನಿನ್ನೆ(ಸೋಮವಾರ) 72,200 ರೂ.ಇದ್ದ ಬೆಳ್ಳಿ ಬೆಲೆ, ಇಂದು(ಮಂಗಳವಾರ) 71,900ಕ್ಕೆ ಕುಸಿದಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 72,200 ರೂ. ಇದ್ದಿತ್ತು, ಇಂದು(ಮಂಗಳವಾರ) 71,900 ರೂ. ಗೆ ಕುಸಿತ ಕಂಡಿದೆ.
ಇದನ್ನೂ ಓದಿ : ಕೇಂದ್ರ ಸಂಪುಟ ವಿಸ್ತರಣೆ ಚರ್ಚೆ: ಕೆಲ ರಾಜ್ಯಗಳ ಸಂಸದರೊಂದಿಗೆ ಮೋದಿ, ಶಾ, ನಡ್ಡಾ ಮಾತುಕತೆ
ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ..?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯವರಗೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 45,740 ರೂ. ಇದ್ದಿದ್ದು, ಇಂದು 45,490 ರೂ.ಗೆ ಕುಸಿದಿದೆ.
ರಾಷ್ಟ್ರ ರಾಜಧಾನಿ ನವ ದೆಹಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ 47,650 10 ಗ್ರಾಂ 24 ಕ್ಯಾರೆಟ್ ಚಿನ್ನ 51,800 ರೂ. ನಲ್ಲಿ ಮಾರಾಟವಾಗುತ್ತಿದೆ.
ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ 45,750 ರೂ. ಇದ್ದು, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 49,900 ರೂ. ಆಗಿದೆ.
ಕೋಲ್ಕತಾದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 47,770 ರೂ. ಇದ್ದರೇ, 10 ಗ್ರಾಂ 24 ಕ್ಯಾರೆಟ್ ಚಿನ್ನ 50,400 ರೂ. ಆಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ 47,760 ರೂ. ಆದರೇ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 48,760 ರೂ. ಆಗಿದೆ.
ಇದನ್ನೂ ಓದಿ : ಮಗಳು ತಂದ 35,000 ರೂಪಾಯಿ ಬೆಲ್ಟ್ ನೋಡಿ ಈ ಅಮ್ಮ ಅಂದಿದ್ದೇನು ಗೊತ್ತಾ? ವಿಡಿಯೋ ನೋಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ