ಬೆಂಗಳೂರು ಗುಲಾಬಿ ಬಣ್ಣದ ಈರುಳ್ಳಿ ರಫ್ತಿಗೆ ಅಸ್ತು
ಎಲ್ಲ ಜಾತಿಯ ಈರುಳ್ಳಿ ರಫ್ತನ್ನು ಕೇಂದ್ರ ಸರಕಾರ ಕಳೆದ ತಿಂಗಳು ನಿಷೇಧಿಸಿ ಆದೇಶ ಹೊರಡಿಸಿತ್ತು.
Team Udayavani, Oct 10, 2020, 12:40 PM IST
ಹೊಸದಿಲ್ಲಿ: ಬೆಂಗಳೂರು ರೋಸ್ ಹಾಗೂ ಕೃಷ್ಣಾಪುರಂ ತಳಿಯ ಈರುಳ್ಳಿಗಳನ್ನು ರಫ್ತು ಮಾಡಲು ಕೇಂದ್ರ ಸರಕಾರ ಶುಕ್ರವಾರ ಆದೇಶ ನೀಡಿದೆ. ಮುಂದಿನ ವರ್ಷ ಮಾ. 31ರವರೆಗೆ ಈ ಎರಡೂ ತಳಿಯ ಒಟ್ಟಾರೆ 10,000 ಟನ್ ವರೆಗೆ ಮಾತ್ರ ರಫ್ತು ಮಾಡಬಹುದು.
ಆದರೆ, ಈ ರಫ್ತು ಪ್ರಕ್ರಿಯೆ ಚೆನ್ನೈ ಬಂದರಿನ ಮೂಲಕವೇ ಅನುಷ್ಠಾನಗೊಳ್ಳಬೇಕು ಎಂದು ಆದೇಶದಲ್ಲಿ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಈರುಳ್ಳಿ ಬೆಲೆ ಗಗನಕ್ಕೇರಿದ್ದ ಹಿನ್ನೆಲೆಯಲ್ಲಿ ಭಾರತದ ಎಲ್ಲ ಜಾತಿಯ ಈರುಳ್ಳಿ ರಫ್ತನ್ನು ಕೇಂದ್ರ ಸರಕಾರ ಕಳೆದ ತಿಂಗಳು ನಿಷೇಧಿಸಿ ಆದೇಶ ಹೊರಡಿಸಿತ್ತು.
ಈ ಈರುಳ್ಳಿ ಮೇಲಿನ ರಫ್ತು ನಿಷೇಧವನ್ನು ಭಾಗಶಃ ಸಡಿಲಿಸಿರುವುದು ರೈತರಿಗೆ ಆದಾಯ ತರಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯೆಲ್ ಹೇಳಿದ್ದಾರೆ.
ಸೋಂಕಿನಿಂದ ಜೀವವಿಲ್ಲದ ಶಿಶುಗಳ ಜನನ!
ಜಗತ್ತಿನಲ್ಲಿ ಪ್ರತಿ 16 ಸೆಕೆಂಡುಗಳಿಗೆ ಒಂದು ಜೀವವಿಲ್ಲದ ಮತ್ತು ಅರೆ ಜೀವದ ಸ್ಥಿತಿ (ಸ್ಟಿಲ್ಬರ್ತ್) ಯಲ್ಲಿರುವ ಮಗು ಜನಿಸುತ್ತಿದೆ. ಇದೇ ಲೆಕ್ಕಾಚಾರವನ್ನು ತೆಗೆದುಕೊಂಡರೆ ಪ್ರತಿ ವರ್ಷ 20 ಲಕ್ಷ ಅಂಥ ಮಕ್ಕಳು ಜನಿಸುತ್ತವೆ ಎಂದು ಯೂನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವಬ್ಯಾಂಕ್ ಸಿದ್ಧಗೊಳಿಸಿದ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಕೊರೊನಾ ಸೋಂಕಿನಿಂದಾಗಿ ಜಗತ್ತಿನಾದ್ಯಂತ ಸಾಮಾನ್ಯ ಆರೋಗ್ಯ ಸೇವೆಗಳು ತ್ಯಯವಾಗಿರುವುದರಿಂದ ಈ ಪರಿಸ್ಥಿತಿ ಮತ್ತಷ್ಟು ಕೈಮೀರಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಭಾರತದಲ್ಲಿ ಈ ಸ್ಥಿತಿ ಹೆಚ್ಚು ಗಂಭೀರವಾಗಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. 2 ಸಾವಿರನೇ ಇಸ್ವಿ ಬಳಿಕ ಇಂಥ ಶಿಶುಗಳ (ಸ್ಟಿಲ್ಬರ್ತ್) ಜನನ ಪ್ರಮಾಣ ಶೇ.53ಕ್ಕಿಂತ ಕಡಿಮೆಯಾಗಿದೆ.
ಆದರೆ ನಿಜವಾದ ಸಂಖ್ಯೆಗಳನ್ನು ಗಮನಿಸಿದರೆ 3,40,622 ಜೀವವಿಲ್ಲದ ಮತ್ತು ಅರೆ ಜೀವದ ಸ್ಥಿತಿಯ ಶಿಶುಗಳು ಜನಿಸುತ್ತವೆ. 2019ರ ವರದಿ ಪ್ರಕಾರ, ಪ್ರತಿ 1 ಸಾವಿರ ಶಿಶುಗಳ ಪೈಕಿ ಶೇ.13.9 ಸ್ಟಿಲ್ ಬರ್ತ್ ಶಿಶುಗಳು ಜನಿಸಿವೆ. ನೈಜೀರಿಯಾ, ಪಾಕಿಸ್ತಾನ, ಇಥಿಯೋಪಿಯಾ, ಕಾಂಗೋ, ಚೀನಾಗಳಲ್ಲಿ ಇಂಥ ಶಿಶುಗಳ ಜನನ ಪ್ರಮಾಣ ಇನ್ನೂ ಹೆಚ್ಚಾಗಿಯೇ ಇದೆ.