ಮಾರುಕಟ್ಟೆಯಲ್ಲಿ ಚೇತರಿಕೆಯ ಬೆಳಕು
Team Udayavani, Dec 2, 2020, 6:16 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸತತ ಎರಡನೇ ಬಾರಿಗೆ ಜಿಎಸ್ಟಿ ಸಂಗ್ರಹದಲ್ಲಿ ದಾಖಲೆ, ವಿವಿಧ ವಾಹನೋದ್ದಿಮೆ ಸಂಸ್ಥೆಗಳ ವಾಹನಗಳ ಮಾರಾಟ ಹೆಚ್ಚಳ ಇತ್ಯಾದಿಗಳು ಲಾಕ್ಡೌನ್ ಬಳಿಕ ದೇಶದ ಅರ್ಥ ವ್ಯವಸ್ಥೆ ಚೇತರಿಕೆ ಕಾಣುತ್ತಿದೆ ಎಂಬ ಅಂಶವನ್ನು ಮತ್ತೂಮ್ಮೆ ಸಾಬೀತುಪಡಿಸಿವೆ.
1.04 ಲಕ್ಷ ಕೋ.ರೂ. ಜಿಎಸ್ಟಿ ಸಂಗ್ರಹ
ಸತತ 2ನೇ ಬಾರಿಗೆ ಜಿಎಸ್ಟಿ ಸಂಗ್ರಹ 1 ಲಕ್ಷ ಕೋಟಿ ರೂ. ದಾಟಿದೆ. ನ. 30ರ ಮಾಹಿತಿಯಂತೆ 1.04 ಲಕ್ಷ ಕೋಟಿ ರೂ. ಸಂಗ್ರಹಿಸಲಾಗಿದೆ. ಅಕ್ಟೋಬರ್ನಲ್ಲಿ 1,04,963 ಕೋಟಿ ರೂ. ಸಂಗ್ರಹವಾಗಿತ್ತು. 2019ರ ನವೆಂಬರ್ನಲ್ಲಿ 1,03,491 ಕೋಟಿ ರೂ. ಸಂಗ್ರಹವಾಗಿತ್ತು. 1 ಲಕ್ಷ ಕೋಟಿ ರೂ. ವ್ಯಾಪ್ತಿಯನ್ನು ಉಳಿಸಿಕೊಳ್ಳುವ ಮೂಲಕ ಅರ್ಥ ವ್ಯವಸ್ಥೆಯಲ್ಲಿ ಧನಾತ್ಮಕ ವಾತಾವರಣ ಮೂಡಿದೆ.
ವಾಹನಗಳ ಮಾರಾಟದಲ್ಲಿ ಏರಿಕೆ
ಮಹೀಂದ್ರಾಕ್ಕೆ ಥಾರ್ ನೆರವು
ಮಹೀಂದ್ರಾ ಆ್ಯಂಡ್ ಮಹೀಂದ್ರಾ ನವೆಂಬರ್ನಲ್ಲಿ 42,731 ವಾಹನ ಮಾರಾಟ ಮಾಡಿದೆ. ಕಳೆದ ವರ್ಷದ ನವೆಂಬರ್ಗೆ ಹೋಲಿಕೆ ಮಾಡಿದರೆ ಇದು ಶೇ. 4ರಷ್ಟು ಹೆಚ್ಚು. ಅ.2ರಂದು ಮಾರುಕಟ್ಟೆಗೆ ಬಿಡುಗಡೆಯಾಗಿರುವ ಥಾರ್ ವಾಹನ ಕಳೆದ ತಿಂಗಳು ಹೆಚ್ಚು ಮಾರಾಟವಾಗಿದೆ. ಯುಟಿಲಿಟಿ ವೆಹಿಕಲ್ ವಿಭಾಗ ಕಳೆದ ತಿಂಗಳು 17,971 ಯುನಿಟ್ ಮಾರಿತ್ತು.
ಅಗ್ರ ಸ್ಥಾನಕ್ಕೆ ಕಿಯಾ ಸಾನೆಟ್
ಎಸ್ಯುವಿ ವಿಭಾಗದಲ್ಲಿ ಕಿಯಾ ಸಾನೆಟ್ ಮತ್ತೆ ಅಗ್ರ ಸ್ಥಾನ ಕ್ಕೇರಿದೆ. ಕಳೆದ ತಿಂಗಳು ಕಿಯಾ 11,417 ಸಾನೆಟ್ ಗಳನ್ನು ಮಾರಿದೆ. ನವೆಂಬರ್ ನಲ್ಲಿ ಸಂಸ್ಥೆ ಒಟ್ಟು 21,022 ವಾಹನ ಮಾರಿ ದ್ದರೆ, ಈ ಪೈಕಿ ಸಾನೆಟ್ ಪಾಲು ಅರ್ಧದಷ್ಟಿದೆ. ಹ್ಯುಂಡೈ ವೆನ್ಯು 9,265, ಬ್ರೆಜಾ 7,838 ಮಾರಾಟವಾಗಿದೆ. ಹ್ಯುಂಡೈ, ಮಾರುತಿ ಸುಜುಕಿ ಮತ್ತು ಕಿಯಾ ನಡುವೆ ಪೈಪೋಟಿ ಇದೆ.
ಬಜಾಜ್ ಆಟೋ ಶೇ.5ರಷ್ಟು ಜಿಗಿತ
ದ್ವಿಚಕ್ರ ವಾಹನ ತಯಾರಿಕೆ ಸಂಸ್ಥೆ ಬಜಾಜ್ ಆಟೋ ಕೂಡ 2019ರ ನವೆಂಬರ್ನಿಂದ 2020ರ ನವೆಂಬರ್ವರೆಗಿನ ಅವಧಿಯಲ್ಲಿ ವಾಹನಗಳ ಮಾರಾಟದಲ್ಲಿ ಶೇ.5 ರಷ್ಟು ಹೆಚ್ಚಳ ಕಂಡಿದೆ. ಮೋಟರ್ ಸೈಕಲ್ ಮಾರಾಟದಲ್ಲಿ ಕಳೆದ ತಿಂಗಳು ಶೇ. 12ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 59,777 ವಾಹನಗಳು ಮಾರಾಟ ವಾಗಿದ್ದವು. ವಾಹನ ರಫ್ತು ಕೂಡ ಕಳೆದ ತಿಂಗಳು ಶೇ. 14ರಷ್ಟು ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ