ರಾಜ್ಯಗಳಿಗೆ 20 ಸಾವಿರ ಕೋ.ರೂ.
ಜಿಎಸ್ಟಿ ಬಾಕಿ ಪಾವತಿ: ವಿತ್ತ ಸಚಿವೆ ನಿರ್ಮಲಾ ಘೋಷಣೆ
Team Udayavani, Oct 6, 2020, 6:10 AM IST
ಹೊಸದಿಲ್ಲಿ: ಪ್ರಸ್ತುತ ಹಣಕಾಸು ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಡಿ ಸಂಗ್ರಹಿಸಲಾಗಿರುವ ಪರಿಹಾರ ಸೆಸ್ನ ಒಟ್ಟು ಮೊತ್ತದಲ್ಲಿ 20 ಸಾವಿರ ಕೋ.ರೂ.ಗಳನ್ನು ಸೋಮವಾರ ರಾತ್ರಿಯೇ ಎಲ್ಲ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಮೊದಲ ಹಂತದಲ್ಲಿ 20 ಸಾವಿರ ಕೋ.ರೂ. ಸೆಸ್ ಹಂಚಿಕೆ ಮಾಡಲಾಗುವುದು. ಮುಂದಿನ ವಾರಾಂತ್ಯದ ಒಳಗೆ ಹೆಚ್ಚುವರಿಯಾಗಿ 24 ಸಾವಿರ ಕೋಟಿ ರೂ. ಮೊತ್ತದ ಪರಿಹಾರ ಸೆಸ್ ಹಣವನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಜಿಎಸ್ಟಿ ಮಂಡಳಿ ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ. ಆದರೆ 3ನೇ ಹಂತದಲ್ಲಿ ನೀಡುವ 24 ಸಾವಿರ ಕೋಟಿ ರೂ. ಸೆಸ್ ಹಣವು, ಯಾವ ರಾಜ್ಯಗಳಿಗೆ ಕಳೆದ ವರ್ಷ ಕೇಂದ್ರದಿಂದ ಮರುಪಾವತಿಸಲಾದ ಜಿಎಸ್ಟಿಯಲ್ಲಿ ನಿರೀಕ್ಷೆಗಿಂತ ಕಡಿಮೆ ಹಣ ಬಂದಿದೆಯೋ ಆ ರಾಜ್ಯಗಳಿಗೆ ಮಾತ್ರ ಹಂಚಿಕೆಯಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪರಿಹಾರ ಸೆಸ್ ಅವಧಿ ವಿಸ್ತರಣೆ
2017ರ ಜುಲೈಯಿಂದ ದೇಶಾದ್ಯಂತ ಜಿಎಸ್ಟಿ ಜಾರಿಯಾದ ಹಿನ್ನೆಲೆಯಲ್ಲಿ ರಾಜ್ಯಗಳು ಅನುಭವಿಸಿದ ತೆರಿಗೆ ನಷ್ಟವನ್ನು ಸರಿದೂಗಲು ರೂಪಿಸಲಾಗಿದ್ದ ಪರಿಹಾರ ಸೆಸ್ ಅನ್ನು 2022ರ ಜುಲೈ ಅನಂತರವೂ ವಿಸ್ತರಿಸಲಾಗುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ. ಈ ಸೆಸ್ ಅವಧಿ 2022ರ ಜುಲೈಗೆ ಅಂತ್ಯ ಗೊಳ್ಳಬೇಕಿತ್ತು. ಆದರೆ ಕೊರೊನಾ ಬಿಕ್ಕಟ್ಟಿನಿಂದ ರಾಜ್ಯಗಳು ಆರ್ಥಿಕ ಸಂಕಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ಅದನ್ನು 2022ರ ಜುಲೈಯ ಬಳಿಕವೂ ವಿಸ್ತರಿಸಲಾಗುತ್ತದೆ ಎಂದಿದ್ದಾರೆ.
ಜಿಎಸ್ಟಿ ಮಂಡಳಿಯ ಹಿಂದಿನ ಸಭೆಯಲ್ಲಿ ಕರ್ನಾಟಕವು ನೀಡಿದ ಸಲಹೆಯನ್ನು ಪರಿಗಣಿಸಲಾಗಿದೆ. ಸೆಪ್ಟಂಬರ್ವರೆಗೆ ಸಂಗ್ರಹವಾಗಿರುವ ಸೆಸ್ ಮೊತ್ತವನ್ನು ಬಿಡುಗಡೆ ಮಾಡಿರುವುದು ಸಂತಸ ತಂದಿದೆ. 2022ರ ಅನಂತರವೂ ಸೆಸ್ ಸಂಗ್ರಹ ವಿಸ್ತರಣೆಯ ಸಲಹೆಯನ್ನು ಸ್ವಾಗತಿಸುತ್ತೇವೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್