ಚಿನ್ನಕ್ಕೆ ಹಾಲ್‌ಮಾರ್ಕ್‌ ಕಡ್ಡಾಯ


Team Udayavani, Jan 16, 2020, 5:28 AM IST

GOLD-a

ಜನವರಿ 15ರ ಬಳಿಕ ಚಿನ್ನಕ್ಕೆ ಹಾಲ್‌ಮಾರ್ಕ್‌ ಗುರುತು ಕಡ್ಡಾಯ ಎಂದು ಹೇಳ ಲಾಗಿತ್ತು. ಆದರೆ ಇದೀಗ ಈ ದಿನಾಂಕ ವನ್ನು ಒಂದು ವರ್ಷ ಮುಂದೂಡ ಲಾಗಿದೆ. ಹಾಗಾದರೆ ಏನಿದು ಹಾಲ್‌ಮಾರ್ಕ್‌, ಏನಿದರ ಮಹತ್ವ ಎಂಬುದನ್ನು ಇಲ್ಲಿ ನೀಡಲಾಗಿದೆ.

ಏನಿದು ಹಾಲ್‌ಮಾರ್ಕ್‌?
ಗ್ರಾಹಕ ಬಳಕೆಯ ವಸ್ತುಗಳಿಗೆ ಐಎಸ್‌ಐ, ಖಾದ್ಯ ವಸ್ತುಗಳಿಗೆ ಅಗ್ಮಾರ್ಕ್‌ ಇದ್ದಂತೆ ಚಿನ್ನಾಭರಣಗಳ ಶುದ್ಧತೆಯ ಪ್ರತೀಕವಾಗಿ ಹಾಲ್‌ಮಾರ್ಕ್‌ ಇರುತ್ತದೆ. ಆಭರಣದಲ್ಲಿ ಬಳಸಲಾಗುವ ಚಿನ್ನದ ಶುದ್ಧತೆಗೆ ಇದೊಂದು ಪ್ರಮಾಣ ಪತ್ರವಾಗಿದೆ. ಅಂತಾರಾಷ್ಟ್ರೀಯವಾಗಿಯೂ ಇದು ಮೌಲ್ಯವನ್ನು ಹೊಂದಿದೆ.

2000ರಲ್ಲಿ ಜಾರಿ
ದೇಶದೆಲ್ಲೆಡೆ 2000ರ ಎಪ್ರಿಲ್‌ನಲ್ಲಿಯೇ ಹಾಲ್‌ಮಾರ್ಕ್‌ ನಿಯಮ ಪ್ರಾರಂಭವಾಗಿದ್ದು, 2005ರಿಂದ ಬೆಳ್ಳಿ ಮೊದಲಾದ ಲೋಹಗಳ ಆಭರಣಗಳಿಗೆ ಹಾಲ್‌ಮಾರ್ಕ್‌ ಅಗತ್ಯ ಎಂದು ಹೇಳಲಾಗಿತ್ತು. ಆದರೆ ನಿಯಮ ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಜತೆಗೆ ತಮ್ಮ ಆಭರಣಗಳಿಗೆ ಹಾಲ್‌ಮಾರ್ಕ್‌ ಪಡೆಯುವುದು ಗ್ರಾಹಕರ ಆಯ್ಕೆಗೆ ಬಿಟ್ಟ ವಿಚಾರವಾಗಿತ್ತು.

ಏನು ಉಪಯೋಗ?
ಹಾಲ್‌ಮಾರ್ಕ್‌ ಚಿಹ್ನೆಯನ್ನು ಕಡ್ಡಾಯ ಮಾಡುವುದರಿಂದ ವಂಚನೆ ಪ್ರಮಾಣ ಕಡಿಮೆಯಾಗಲಿದೆ. ಮಾತ್ರವಲ್ಲದೆ ಖರೀದಿದಾರರಿಗೆ ಗುಣಮಟ್ಟದ ಆಭರಣಗಳು ದೊರೆಯುತ್ತವೆ. ಮರು ಮಾರಾಟ ಮಾಡುವ ವೇಳೆಯೂ ಆಗಿನ ಮಾರುಕಟ್ಟೆ ದರ ದೊರೆಯಲಿದೆ.

ಏಕೆ ಅಗತ್ಯ?
ಚಿನ್ನದ ಪರಿಶುದ್ಧತೆ ಅಥವಾ ಗುಣಮಟ್ಟವನ್ನು ದೃಢೀಕರಿಸಲು ಹಾಲ್‌ಮಾರ್ಕ್‌ ಅಗತ್ಯವಾಗಿದ್ದು, ಈ ಚಿಹ್ನೆ ಇದ್ದರೆ ಚಿನ್ನದ ಮರು ಮಾರಾಟದ ವೇಳೆ ಗ್ರಾಹಕರಿಗೆ ಆಗಿನ ಮಾರುಕಟ್ಟೆಯಲ್ಲಿನ ದರವೇ ಸಿಗುತ್ತದೆ.

ಇಷ್ಟನ್ನು ಗಮನಿಸಿ
ಗ್ರಾಹಕರು ಹಾಲ್‌ಮಾರ್ಕ್‌ ಹೊಂದಿರುವ ಚಿನ್ನದ ಮೇಲೆ ನಾಲ್ಕು ಅಂಶಗಳನ್ನು ಗಮನಿಸಬೇಕು ಬಿಐಎಸ್‌ ಗುರುತು, ಕ್ಯಾರೆಟ್‌ ಶುದ್ಧತೆ, ಮೌಲ್ಯಮಾಪನ ಕೇಂದ್ರದ ಹೆಸರು ಮತ್ತು ಆಭರಣಕಾರರ ಗುರುತಿನ ಚಿಹ್ನೆ.

30 ರೂ. ಹೆಚ್ಚಳ
ಹಾಲ್‌ಮಾರ್ಕ್‌ ಇರುವ ಆಭರಣಗಳ ಖರೀದಿ ಮೇಲೆ ಹೆಚ್ಚುವರಿಯಾಗಿ 30 ರೂ. ಶುಲ್ಕ ವಿಧಿಸಲಾಗಿದೆ. ಆದರೆ ಸ್ಥಳೀಯ ವರ್ತಕರು ಮಾತ್ರ ಈ ವೆಚ್ಚವನ್ನು ಗ್ರಾಹಕರ ಮೇಲೆ ಹೇರಬಹುದಾಗಿದೆ. ಬ್ರ್ಯಾಂಡೆಡ್‌ ಆಭರಣ ಮಾರಾಟಗಾರರು ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ವಿಧಿಸುವಂತಿಲ್ಲ.

ಕಡ್ಡಾಯ ಏಕೆ ?
ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಹಾಲ್‌ಮಾರ್ಕ್‌ ಅನ್ನು ಕಡ್ಡಾಯಗೊಳಿಸುವುದಕ್ಕೆ ಸಂಬಂಧಿಸಿ ಬಿಡುಗಡೆಗೊಳಿಸಿರುವ ಅಧಿಸೂಚನೆಯ ಗಡುವು ಕಳೆದ ಡಿಸೆಂಬರ್‌ 8ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ಹಾಲ್‌ಮಾರ್ಕ್‌ ಕಡ್ಡಾಯಗೊಳಿಸಬೇಕಾದ ಒತ್ತಡ ಉಂಟಾಗಿದ್ದು, ಇದಕ್ಕೆ ತಪ್ಪಿದರೆ ಡಬುÉ éಟಿಒ ಸದಸ್ಯತ್ವ ಹೊಂದಿರುವ ರಾಷ್ಟ್ರಗಳಲ್ಲಿ ಜ್ಯುವೆಲ್ಲರಿ, ಚಿನ್ನ ಕುರಿತ ವಹಿವಾಟಿಗೆ ಅಡಚಣೆ ಉಂಟಾಗಲಿದೆ.

ಬಿಐಎಸ್‌ ನೀಡುತ್ತದೆ
ಬ್ಯೂರೋ ಆಫ್ ಇಂಡಿಯನ್‌ ಸ್ಟಾಂಡರ್ಡ್‌ ಈ ಕಾರ್ಯಾಚರಣೆಯನ್ನು ಮಾಡಿಕೊಂಡು ಬಂದಿದ್ದು, ಚಿನ್ನದ ಮೌಲ್ಯ ಮತ್ತು ಹಾಲ್‌ಮಾರ್ಕಿಂಗ್‌ ಕೇಂದ್ರಗಳು (ಎಎಚ್‌ಸಿಎಸ್‌) ನೀಡಿದ ಚಿಹ್ನೆಯ ಮೂಲಕ ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸಲಾಗುತ್ತದೆ. ಜತೆಗೆ ಈ ನಿಯಮದಡಿ ಸುಮಾರು ಶೇ. 40ರಷ್ಟು ಹಾಲ್‌ಮಾರ್ಕ್‌ ಇರುವ ಚಿನ್ನಾಭರಣಗಳನ್ನು ಗುರುತಿಸಲಾಗಿದೆ.

ಶಿಕ್ಷೆಯೂ ಇದೆ
2021ರ ಜನವರಿ 15ರಿಂದ ಕಡ್ಡಾಯವಾಗಲಿದ್ದು, ಈ ಒಂದು ವರ್ಷದೊಳಗೆ ಹಾಲ್‌ಮಾರ್ಕಿಂಗ್‌ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. 14, 18 ಮತ್ತು 22 ಕ್ಯಾರೆಟ್‌ ಚಿನ್ನದ ಆಭರಣಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಟಾಪ್ ನ್ಯೂಸ್

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Stock-market-Exchange

Stock market ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ.ನಷ್ಟ

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Mumbai: Sensex jumped to 75000 during Modi’s tenure

Mumbai: ಮೋದಿ ಅವಧಿಯಲ್ಲಿ ಸೆನ್ಸೆಕ್ಸ್‌ 75000ಕ್ಕೆ ಜಿಗಿತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.