ಆಧಾರ್ ಕಾರ್ಡ್ ಕಳೆದುಕೊಂಡಿದ್ದೀರಾ..? ಹಾಗಾದ್ರೆ ಹೀಗೆ ಮಾಡಿ..!
Team Udayavani, Apr 21, 2021, 2:20 PM IST
ನವದೆಹಲಿ: ಭಾರತದಲ್ಲಿ ನಾಗರಿಕ ಗುರುತಿನ ಚೀಟಿ ಎನ್ನಿಸಿಕೊಂಡಿರುವ ಆಧಾರ್ ಕಾರ್ಡ್ ಗೆ ಬಹು ದೊಡ್ಡ ಮಾನ್ಯತೆ ಇದೆ. ಆಧಾರ್ ಕಾರ್ಡ್ ಇಲ್ಲದೇ ಇದ್ದಲ್ಲಿ ದೇಶದಲ್ಲಿ ಸರ್ಕಾರದ ಯಾವ ಲಾಭವನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಆಧಾರ್ ಕಾರ್ಡ್ ಬಹಳ ಮುಖ್ಯವಾಗುತ್ತದೆ.
ಇಷ್ಟು ಮಾನ್ಯತೆ ಇರುವ ಆಧಾರ್ ಕಾರ್ಡ್, ಕಳೆದುಹೋದರೆ, ನೀವು ಅದನ್ನು ತಕ್ಷಣ ಲಾಕ್ ಮಾಡುವುದಕ್ಕೆ ಕೂಡ ಸಾಧ್ಯವಿದೆ. ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಬೇರೆ ಯಾವುದೇ ವ್ಯಕ್ತಿ ದುರುಪಯೋಗಪಡಿಸಿಕೊಳ್ಳಬಾರದು ಎಂಬ ದೃಷ್ಟಿಯಿಂದ ನೀವು ಆಧಾರ್ ಕಾರ್ಡ್ ಕಳೆದು ಹೋದಲ್ಲಿ ಅದನ್ನು ಲಾಕ್ ಮಾಡುವುದು ಉತ್ತಮ. ಹಾಗಾದರೇ, ಸರ್ಕಾರದ ಮತ್ತು ಖಾಸಗಿ ಬಹುತೇಕ ಎಲ್ಲಾ ಕೆಲಸಗಳಿಗೆ ಅಗತ್ಯವಿರುವ ಆಧಾರ್ ಕಾರ್ಡ್ ಕಳೆದು ಹೋದರೆ ಲಾಕ್ ಮಾಡುವುದು ಹಾಗೂ ಅದನ್ನು ಮತ್ತೆ ಅನ್ ಲಾಕ್ ಮಾಡುವ ಪ್ರಕ್ರಿಯೆಗಳ ಬಗ್ಗೆ ಯುಐಡಿಎಐ ವೆಬ್ ಸೈಟ್ ನಲ್ಲಿ ವಿವರಿಸಲಾಗಿದೆ.
ಓದಿ : ಕೋವಿಡ್ ಆರ್ಭಟ : ತಮ್ಮ ಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ ಸಿದ್ದರಾಮಯ್ಯ!
ಆಧಾರ್ ಅನ್ನು ಹೇಗೆ ಲಾಕ್ ಮಾಡುವುದು? ಆಧಾರ್ ಸಂಖ್ಯೆಯನ್ನು ಲಾಕ್ ಮಾಡಲು, ನೀವು ಯುಐಡಿಎಐ ನ ಅಧಿಕೃತ ವೆಬ್ಸೈಟ್ಗೆ ಹೋಗಬೇಕು. ನಂತರ ಕೆಳಗೆ ನೀಡಿದ ವಿಧಾನಗಳನ್ನು ಅನುಸರಿಸಿ.
- ಯುಐಡಿಎಐ ನ ಅಧಿಕೃತ ವೆಬ್ಸೈಟ್https://resident.uidai.gov.in/ ಗೆ ಭೇಟಿ ನೀಡಿ
- ‘ನನ್ನ ಆಧಾರ್’ ನಲ್ಲಿ ನೀವು ‘Aadhaar Services’ ಆಯ್ಕೆಯನ್ನು ಮಾಡಿ
- Lock/Unlock Biometrics ಆಧಾರ್ ಸರ್ವೀಸಸ್ ಆಯ್ಕೆಯನ್ನು ಕಾನ ಸಿಗುತ್ತದೆ.
- ಕೆಳಗಿನLock/Unlock Biometrics ಟ್ಯಾಬ್ ಕ್ಲಿಕ್ ಮಾಡಿ.
- log in ಆಯ್ಕೆ ಕಾಣಿಸುತ್ತದೆ, ಇಲ್ಲಿ 12 ಅಂಕಿಯ ಆಧಾರ್ ಸಂಖ್ಯೆ ಅಥವಾ 15 ಅಂಕಿಯ ವರ್ಚುವಲ್ ಐಡಿ (ವಿಐಡಿ) ಅನ್ನು ನಮೂದಿಸಿ.
- ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು’Send OTP’ ಕ್ಲಿಕ್ ಮಾಡಿ
- ಒಟಿಪಿಯನ್ನು ಎಂಟರ್ ಮಾಡಿದ ನಂತರ, ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವ ಆಯ್ಕೆ ಕಾಣಿಸುತ್ತದೆ.
- ಲಾಕ್ ಆಯ್ಕೆಯನ್ನು ಕ್ಲಿಕ್ ಮಾಡಿ, ಹಾಗೆ ಮಾಡುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಲಾಕ್ ಆಗುತ್ತದೆ.
ಇನ್ನು, ಆಧಾರ್ ಕಾರ್ಡ್ ಅನ್ನು ಲಾಕ್ ಮಾಡುವ ಮೊದಲು, ನೀವು ವರ್ಚುವಲ್ ಐಡಿ ಅನ್ನು ಕ್ರಿಯೇಟ್ ಮಾಡಬೇಕು ಎಂಬುದು ನೆನಪಿನಲ್ಲಿರಲಿ, ಆಧಾರ್ ಸಂಖ್ಯೆಯನ್ನು ಲಾಕ್ ಮಾಡಿದ ನಂತರ, KYCಗೆ ಸಂಬಂಧಿಸಿದಂತೆ ಇದು ಅಗತ್ಯವಾಗಿಬೇಕಾಗುತ್ತದೆ. ನೀವು ಲಾಕ್ ಮಾಡಿ ಹಾಗೆ ಅದೇ ಪ್ರಕ್ರಿಯೆಯಲ್ಲಿ ಅದನ್ನ ಅನ್ಲಾಕ್ ಮಾಡಬಹುದು. OTP ನಮೂದಿಸುವ ಮೂಲಕ, ಬಯೋಮೆಟ್ರಿಕ್ ಡೇಟಾವನ್ನು ‘ಅನ್ಲಾಕ್’ ಮಾಡುವ ಆಯ್ಕೆಯನ್ನು ನೀವು ಕ್ಲಿಕ್ ಮಾಡಬೇಕಾಗುತ್ತದೆ.
ಓದಿ : ದ.ಕನ್ನಡದಲ್ಲಿ ವಾಕ್ಸಿನ್ ಕೊರತೆಯಿದೆ ಆದರೆ ಶಾಸಕರು ಗುದ್ದಲಿ ಪೂಜೆ ಮಾಡುತ್ತಿದ್ದಾರೆ: ಐವನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ