ಕೋವಿಡ್ ಹೊತ್ತಲ್ಲಿ ಭವಿಷ್ಯ ನಿಧಿ ಹಣ ಬೇಕಾ? – ಇಲ್ಲಿದೆ ಸಂಪೂರ್ಣ ಮಾಹಿತಿ 


Team Udayavani, May 11, 2020, 6:25 AM IST

ಕೋವಿಡ್ ಹೊತ್ತಲ್ಲಿ ಭವಿಷ್ಯ ನಿಧಿ ಹಣ ಬೇಕಾ? – ಇಲ್ಲಿದೆ ಸಂಪೂರ್ಣ ಮಾಹಿತಿ 

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಲಾಕ್‌ಡೌನ್‌ ಪರಿಣಾಮ ಹಣ ಓಡಾಡುತ್ತಿಲ್ಲ, ಖರ್ಚು ಹೆಚ್ಚಾಗಿದೆ ಮತ್ತು ನಿಮಗೀಗ ತುರ್ತು ಹಣದ ಅವಶ್ಯಕತೆ ಇದೆ.

ಅಂತಹವರು ಈಗ ತಮ್ಮ ಭವಿಷ್ಯನಿಧಿ ಖಾತೆಯಿಂದ ಮುಂಗಡವಾಗಿ ಹಣ ಪಡೆಯಲು ಅವಕಾಶವಿದೆ. ಅದೂ ಕೋವಿಡ್‌-19 ಹೆಸರಲ್ಲಿ. ಹೇಗೆ ಗೊತ್ತಾ?

ನಾಲ್ಕು ಹಂತಗಳನ್ನು ಗಮನದಲ್ಲಿಡಿ
1. ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿರುವ ಶೇ.75ರಷ್ಟು ಹಣ ಅಥವಾ ನಿಮ್ಮ ಮೂಲವೇತನದ ಮೂರು ತಿಂಗಳ ಮೊತ್ತ+ಡಿಎ…ಇವೆರಡರಲ್ಲಿ ಯಾವುದು ಕಡಿಮೆಯೋ, ಆ ಮೊತ್ತವನ್ನು ನೀವು ಪಡೆಯಬಹುದು.

2. ಅರ್ಜಿಯನ್ನು ಇಪಿಎಫ್ಒ ವೆಬ್‌ಸೈಟ್‌ ಮೂಲಕ ಅಂತರ್ಜಾಲದಲ್ಲೇ ಸಲ್ಲಿಸಬೇಕು.

3. ಒಂದು ವೇಳೆ ಈಗಾಗಲೇ ಬೇರೆ ಯಾವುದೋ ಕಾರಣಕ್ಕೆ ಹಣ ಪಡೆಯಲು ನೀವು ಅರ್ಜಿ ಸಲ್ಲಿಸಿರಬಹುದು. ಅದರ ಜೊತೆಗೆ ಕೋವಿಡ್‌-19 ಅರ್ಜಿ ಮೂಲಕವೂ ಹಣ ಪಡೆಯಲು ತಕರಾರಿಲ್ಲ.

4. ಕೋವಿಡ್‌-19 ಅರ್ಜಿ ಮೂಲಕ ಒಮ್ಮೆ ಮಾತ್ರ ಹಣ ಪಡೆಯಬಹುದು.

ಹಣ ಪಡೆಯುವ ಲೆಕ್ಕಾಚಾರ ಹೇಗೆ?

1.ಮಾಸಿಕ ಮೂಲವೇತನ +ಡಿಎ 30,000 ರೂ. ಇದ್ದರೆ…
ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿ 2 ಲಕ್ಷ ರೂ. ಇದೆ ಎಂದಿಟ್ಟುಕೊಳ್ಳೋಣ. ನಿಮ್ಮ ಮೂರು ತಿಂಗಳ ಮಾಸಿಕ ವೇತನ + ಡಿಎ ಸೇರಿ 90,000 ರೂ. ಆಗುತ್ತದೆ. ಇನ್ನೊಂದು ಕಡೆ ಶೇ.75ರ ಲೆಕ್ಕಾಚಾರ ಹಿಡಿದರೆ, 1.5 ಲಕ್ಷ ರೂ. ಆಗುತ್ತದೆ. ಇವೆರಡರಲ್ಲಿ ಕಡಿಮೆ 90,000 ರೂ. ಆಗುವುದರಿಂದ ಈ ಮೊತ್ತ ಕೈಗೆ ಸಿಗುತ್ತದೆ.

2. ಮಾಸಿಕ ಮೂಲವೇತನ +ಡಿಎ 55,000 ರೂ. ಇದ್ದರೆ…
ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿ 2 ಲಕ್ಷ ರೂ. ಇದೆ ಎಂದುಕೊಳ್ಳೋಣ. ನಿಮ್ಮ ಮೂರು ತಿಂಗಳ ವೇತನ ಮೊತ್ತ+ಡಿಎ 1,65,000 ರೂ. ಆಗುತ್ತದೆ. ಇನ್ನೊಂದು ಕಡೆ ಶೇ.75ರಷ್ಟು ಎಂದು ಲೆಕ್ಕಾಚಾರ ಮಾಡಿದರೆ, 1.5 ಲಕ್ಷ ರೂ. ಮೊತ್ತವಾಗುತ್ತದೆ. ಇವೆರಡರಲ್ಲಿ ಕಡಿಮೆ 1.5 ಲಕ್ಷ ರೂ. ಆಗುವುದರಿಂದ ನಿಮಗೆ ಇಷ್ಟೇ ಮೊತ್ತ ಸಿಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
1. https://unifiedportalmem.epfindia.gov.in/memberinterface ಈ ವೆಬ್‌ಸೈಟ್‌ನಲ್ಲಿ ಮೊದಲು ಲಾಗ್‌ಇನ್‌ ಆಗಿ.

2 ಅಲ್ಲಿ ಆನ್‌ಲೈನ್‌ ಸರ್ವಿಸಸ್‌-ಕ್ಲೈಮ್‌ (ಫಾರ್ಮ್ 31, 19, 10ಸಿ, 10ಡಿ) ಬಟನ್ ಒತ್ತಬೇಕು.

3 ನಿಮ್ಮ ಬ್ಯಾಂಕ್‌ ಖಾತೆ ಸಂಖ್ಯೆ ಒತ್ತಿ ಪರಿಶೀಲಿಸಬೇಕು.

4 ಪ್ರೊಸೀಡ್‌ ಫಾರ್‌ ಆನ್‌ಲೈನ್‌ ಕ್ಲೈಮ್‌ ಮೇಲೆ ಒತ್ತಿ.

5 ಭವಿಷ್ಯ ನಿಧಿ ಮುಂಗಡ ಅಥವಾ ಪಿಎಫ್ ಅಡ್ವಾನ್ಸ್‌ ಅನ್ನು ಒತ್ತಿ.

6 ಅಲ್ಲಿ ಉದ್ದೇಶವಾಗಿ ಔಟ್‌ಬ್ರೇಕ್‌ ಆಫ್ ಪ್ಯಾಂಡೆಮಿಕ್‌ (ಕೋವಿಡ್‌-19) ಒತ್ತಿ.

7 ನಿಮಗೆ ಬೇಕಿರುವ ಹಣ, ಹಾಗೆಯೇ ಚೆಕ್‌ನ ಸ್ಕ್ಯಾನ್‌ ಮಾಡಲ್ಪಟ್ಟ ಚಿತ್ರ, ವಿಳಾಸವನ್ನು ನಮೂದಿಸಿ.

8 ಗೆಟ್‌ ಆಧಾರ್‌ ಒಟಿಪಿ ಮೇಲೆ ಒತ್ತಿ.

9 ನಂತರ ಒಟಿಪಿಯನ್ನು (ಒನ್‌ಟೈಮ್‌ ಪಾಸ್‌ವರ್ಡ್‌) ನಮೂದಿಸಿ.

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Stock-market-Exchange

Stock market ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ.ನಷ್ಟ

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Mumbai: Sensex jumped to 75000 during Modi’s tenure

Mumbai: ಮೋದಿ ಅವಧಿಯಲ್ಲಿ ಸೆನ್ಸೆಕ್ಸ್‌ 75000ಕ್ಕೆ ಜಿಗಿತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.