ತನ್ನ ಗ್ರಾಹಕರಿಗಾಗಿ ವಾಟ್ಸ್ಯಾಪ್ ಸೇವೆ ಪರಿಚಯಿಸಿದ ICICI ಬ್ಯಾಂಕ್; ಈ ಎಲ್ಲಾ ಸೇವೆಗಳು ಲಭ್ಯ


Team Udayavani, Mar 30, 2020, 4:02 PM IST

ತನ್ನ ಗ್ರಾಹಕರಿಗಾಗಿ ವಾಟ್ಸ್ಯಾಪ್ ಸೇವೆ ಪರಿಚಯಿಸಿದ ICICI ಬ್ಯಾಂಕ್; ಈ ಎಲ್ಲಾ ಸೇವೆಗಳು ಲಭ್ಯ

ಮುಂಬಯಿ: ಕೋವಿಡ್ 19 ವೈರಸ್ ಭೀತಿಯಿಂದಾಗಿ ದೇಶಕ್ಕೆ ದೇಶವೇ 21 ದಿನಗಳ ಲಾಕ್ ಡೌನ್ ಸ್ಥಿತಿಗೆ ಒಳಗಾಗಿರುವ ಈ ಸಂದರ್ಭದಲ್ಲಿ ಅವಶ್ಯಕ ಸೇವೆಗಳನ್ನು ಮಾತ್ರವೇ ಮುಂದುವರೆಸಲು ಸರಕಾರ ಅನುಮತಿ ನೀಡಿದೆ. ಅವಶ್ಯಕ ಸೇವೆಗಳಲ್ಲಿ ಬ್ಯಾಂಕಿಂಗ್ ಸೇವೆಗಳೂ ಒಳಗೊಳ್ಳುತ್ತವೆ.

ಆದರೆ ಬ್ಯಾಂಕಿಗೆ ಗ್ರಾಹಕರು ಬಂದಲ್ಲಿ ಆ ಮೂಲಕ ಈ ವೈರಸ್ ಹಬ್ಬುವ ಭೀತಿ ಇಲ್ಲದಿಲ್ಲ. ಹಾಗಾಗಿಯೇ ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಹೆಚ್ಚು ಬಳಸುವಂತೆ ವಿನಂತಿ ಮಾಡಿಕೊಂಡಿವೆ. ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿರಿಸಿರುವ ಐಸಿಐಸಿಐ ಬ್ಯಾಂಕ್ ವಾಟ್ಸ್ಯಾಪ್ ಮೂಲಕ ತನ್ನ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಪ್ರಾರಂಭಿಸಿದೆ.

ಈ ನೂತನ ವಾಟ್ಸ್ಯಾಪ್ ಸೇವೆಗಳ ಮೂಲಕ ಪ್ರತೀನಿತ್ಯ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುವ ತನ್ನ ಗ್ರಾಹಕರು ಈ ಲಾಕ್ ಡೌನ್ ಅವಧಿಯಲ್ಲಿ ತಾವಿರುವ ಸ್ಥಳದಿಂದಲೇ ಸುಲಭವಾಗಿ ಬ್ಯಾಂಕ್ ವ್ಯವಹಾರಗಳನ್ನು ನಡೆಸಲು ಅನುಕೂಲವಾಗಲಿದೆ. ಇದರಲ್ಲಿ ಬ್ಯಾಂಕ್ ಬ್ಯಾಲೆನ್ಸ್ ನೋಡುವುದು, ಕೊನೆಯ ಮೂರು ವ್ಯವಹಾರಗಳ ವಿವರಗಳನ್ನು ಪಡೆದುಕೊಳ್ಳುವುದು, ಕ್ರೆಡಿಟ್ ಕಾರ್ಡ್ ಮಿತಿಯ ವಿವರಗಳನ್ನು ಪಡೆದುಕೊಳ್ಳುವುದು, ಈ ಮೊದಲೇ ಜಾರಿಯಾಗಿರುವ ಸಾಲದ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದು ಮತ್ತು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಬ್ಲಾಕ್ ಆಥವಾ ಅನ್ ಬ್ಲಾಕ್ ಮಾಡಿಕೊಳ್ಳುವ ಸೇವೆಗಳನ್ನು ಪಡೆದುಕೊಳ್ಳಲು ಅವಕಾಶವಿದೆ.

ಗ್ರಾಹಕರು ಈ ಸೇವೆಗಳನ್ನು ಪಡೆದುಕೊಳ್ಳುವುದು ಹೇಗೆ?
1. ಐಸಿಐಸಿಐ ಬ್ಯಾಂಕಿನ ಅ‍ಧಿಕೃತ ವಾಟ್ಸ್ಯಾಪ್ ನಂಬರನ್ನು (9324953001) ಗ್ರಾಹಕರು ಸೇವ್ ಮಾಡಿಕೊಳ್ಳಬೇಕು. ಬಳಿಕ <Hi> ಎಂಬ ಸಂದೇಶವನ್ನು ಗ್ರಾಹಕರು ತಾವು ಬ್ಯಾಂಕಿಗೆ ನೀಡಿರುವ ಮೊಬೈಲ್ ನಂಬರಿನಿಂದಲೇ ಈ ನಂಬರಿಗೆ ಕಳುಹಿಸಬೇಕು. ಬಳಿಕ ಲಭ್ಯವಿರುವ ಸೇವಾ ವಿವರಗಳೊಂದಿಗೆ ನಿಮ್ಮ ಮೊಬೈಲ್ ಗೆ ಬ್ಯಾಂಕಿನಿಂದ ಪ್ರತಿಕ್ರಿಯೆ ಸಂದೇಶ ಬರುತ್ತದೆ.

2. ಬಳಿಕ ಸೇವಾ ಪಟ್ಟಿಗಳನ್ನು ನೋಡಿಕೊಂಡು ನಿಮಗೆ ಅಗತ್ಯವಿರುವ ಸೇವೆಯನ್ನು ಆರಿಸಿಕೊಳ್ಳಬೇಕು. ಉದಾಹರಣೆಗೆ:, <Balance>, <Block> ಇತ್ಯಾದಿ.

ವಾಟ್ಸ್ಯಾಪ್ ಮೂಲಕ ಲಭ್ಯವಿರುವ ಸೇವೆಗಳು ಮತ್ತು ಅದನ್ನು ಬಳಸಿಕೊಳ್ಳಬಹುದಾದ ವಿಧಾನ ಇಲ್ಲಿದೆ:

ಅಕೌಂಟ್ ಬ್ಯಾಲೆನ್ಸ್ ನೋಡಲು: <transaction>, <bal>, <ac bal> ಗಳಲ್ಲಿ ನಿಮಗೆ ಅಗತ್ಯವಿರುವುದನ್ನು ಆರಿಸಿಕೊಂಡು ಈ ಕೀ ವರ್ಡ್ ಗಳನ್ನು ಟೈಪ್ ಮಾಡಿ ಬ್ಯಾಂಕಿನ ಅಧಿಕೃತ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು.

ಕೊನೆಯ ಮೂರು ಟ್ರಾನ್ಸಾಕ್ಷನ್ ಗಳ ವಿವರ ಪಡೆದುಕೊಳ್ಳಲು: <transaction>, <stmt>, <history> ಗಳಲ್ಲಿ ನಿಮಗೆ ಅಗತ್ಯವಿರುವುದನ್ನು ಟೈಪ್ ಮಾಡಿ ಕಳುಹಿಸಿ.

ನಿಮ್ಮ ಕ್ರೆಡಿಟ್ ಕಾರ್ಡ್ ನಲ್ಲಿರುವ ಬ್ಯಾಲೆನ್ಸ್ ಮೊತ್ತ ಹಾಗೂ ಕ್ರೆಡಿಟ್ ಮಿತಿ ತಿಳಿದುಕೊಳ್ಳಲು: <limit>, <cclimit>, <ccbalance> ಗಳಲ್ಲಿ ನಿಮಗೆ ಬೇಕಾಗಿರುವುದನ್ನು ಆಯ್ಕೆ ಮಾಡಿ ಟೈಪ್ ಮಾಡಿ ಮೆಸೇಜ್ ಮಾಡಿ.

ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಗಳನ್ನು ತಕ್ಷಣವೇ ಬ್ಲಾಕ್ ಮಾಡಿಸಿಕೊಳ್ಳಲು: <block>, <Lost my card>, <Unblock> ಕೀ ವರ್ಡ್ ಗಳಲ್ಲಿ ನಿಮಗೆ ಸಂಬಂಧಿಸಿರುವುದನ್ನು ಟೈಪ್ ಮಾಡಿ ಮೆಸೇಜ್ ಮಾಡಿ.

ಇನ್ನು ಈ ಮೊದಲೇ ಮಂಜೂರಾಗಿರುವ ಸಾಲಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು: <Loan>, <home loan>, <personal loan>, <instant loans> ಗಳಲ್ಲಿ ನಿಮ್ಮ ಆಯ್ಕೆಯನ್ನು ಟೈಪ್ ಮಾಡಿ ಮೆಸೇಜ್ ಮಾಡಬೇಕು.

ನಿಮಗೆ ಸಮೀಪದಲ್ಲಿರುವ ಐಸಿಐಸಿಐ ಬ್ಯಾಂಕಿನ ಎಟಿಎಂ ಮಾಹಿತಿಯನ್ನು ಪಡೆದುಕೊಳ್ಳಲು: ಟೈಪ್ <ATM>, <Branch>

ಟಾಪ್ ನ್ಯೂಸ್

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?

Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?

Odisha: ಗೋಪಾಲ್‌ ಪುರ್‌ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ

Odisha: ಗೋಪಾಲ್‌ ಪುರ್‌ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ

1-wqeqeqw

Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.