ವ್ಯವಹಾರ ಶ್ರೇಯಾಂಕ: ಭಾರತಕ್ಕೆ 63ನೇ ಸ್ಥಾನ
Team Udayavani, Oct 24, 2019, 8:20 PM IST
ನವದೆಹಲಿ: ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿರುವ ವ್ಯವಹಾರ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಕಾರ್ಯಕ್ಷಮತೆ ಸುಧಾರಿಸಿದೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಆರ್ಥಿಕ ಕ್ಷೇತ್ರ ಸುಧಾರಣೆ ಕಾಣುತ್ತಿದ್ದು, ಸರಕಾರ ಕೈಗೊಂಡಿರುವ ಕ್ರಮಗಳ ಫಲಶ್ರುತಿ ಈ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
14 ಸ್ಥಾನಗಳ ಮುನ್ನಡೆ
ವ್ಯವಹಾರ ಸೂಚ್ಯಂಕದಲ್ಲಿ ಭಾರತಕ್ಕೆ 63ನೇ ಸ್ಥಾನ ಲಭಿಸಿದ್ದು, ಕಳೆದ ವರ್ಷಕ್ಕಿಂತ 14 ಸ್ಥಾನಗಳ ಮುನ್ನಡೆ ಸಾಧಿಸಿದೆ ಎಂದು ವರದಿಯಲ್ಲಿನ ಮಾಹಿತಿಯನ್ನು ಸಚಿವಾಲಯ ಹಂಚಿಕೊಂಡಿದೆ. ಸರಕಾರದ “ಮೇಕ್ ಇನ್ ಇಂಡಿಯಾ’ ದಂತಹ ಯೋಜನೆಗಳು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತಿದ್ದು ಬಂಡವಾಳ ಹೂಡಿಕೆ ಚಟುವಟಿಕೆಗಳ ಮೇಲೆ ಸಕರಾತ್ಮಕ ಪರಿಣಾಮ ಬೀರಿದೆ.
ನಿರಂತರ ಪ್ರಯತ್ನದ ಫಲಶುೃತಿ
ಸರಕಾರದ ನಿರಂತರ ಪ್ರಯತ್ನಗಳ ಫಲವಾಗಿ, ಕಳೆದ ಐದು ವರ್ಷಗಳಲ್ಲಿ (2014-19) ಭಾರತದ ಶ್ರೇಯಾಂಕ ಮಟ್ಟ ಸುಧಾರಿಸಿದ್ದು, 190 ದೇಶಗಳ ಪೈಕಿ 79 ಸ್ಥಾನದಲ್ಲಿದ್ದ ಭಾರತ ಪ್ರಸಕ್ತ ಸಾಲಿನಲ್ಲಿ 14 ಸ್ಥಾನಗಳ ಮುನ್ನಡೆ ಸಾಧಿಸಿದೆ.
ಮಾನದಂಡಗಳು
10 ಮಾನದಂಡಗಳ ಪೈಕಿ ಭಾರತ 7 ಸೂಚಕಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿನ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲವಾಗಿ ಪಾಲ್ಗೊಂಡಿದೆ.
ಈ ಕ್ಷೇತ್ರಗಳಲ್ಲಿ ಮಹತ್ತರ ಸುಧಾರಣೆ
ಆರ್ಥಿಕ ಕ್ಷೇತ್ರದಲ್ಲಿನ ದಿವಾಳಿತನವನ್ನು ನಿವಾರಿಸುವುದು, ನಿರ್ಮಾಣ ಪರವಾನಿಗಿಗಳನ್ನು ನಿಭಾಯಿಸುವುದು, ಆಸ್ತಿ ನೋಂದಾವಣೆ, ಗಡಿಯುದ್ದಕ್ಕೂ ವ್ಯಾಪಾರ ಮಾಡುವುದು ಮತ್ತು ತೆರಿಗೆ ಸೂಚಕಗಳನ್ನು ಪಾವತಿಸುವಲ್ಲಿ ಗಮನಾರ್ಹ ಸುಧಾರಣೆಗಳನ್ನು ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಟಾಪ್ 10 ಯಾವುದು
ಭಾರತದ ಹೊರತಾಗಿ, ಈ ವರ್ಷದ ‘ಟಾಪ್ 10 ಸ್ಥಾನಗಳಲ್ಲಿ ದೇಶಗಳು
– ನ್ಯೂಜಿಲ್ಯಾಂಡ್
– ಸಿಂಗಾಪುರ್
– ಹಾಂಗ್ ಕಾಂಗ್ ಸರ್ ಚೀನ
– ಡೆನ್ಮಾರ್ಕ್
– ರಿಪಬ್ಲಿಕ್ ಆಫ್ ಕೋರಿಯಾ
– ಅಮೆರಿಕಾ
– ಜಾರ್ಜಿಯಾ
– ಯುನೈಟೆಡ್ ಕಿಂಗ್ಡಮ್
– ನಾರ್ವೆ
– ಸ್ವೀಡನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ