ಕೋವಿಡ್ ಪೂರ್ವಕ್ಕೆ ತಲುಪಿದ ಬಡ್ಡಿದರ; ಮೂರನೇ ಬಾರಿಗೆ ಶೇ.0.5 ಬಡ್ಡಿದರ ಹೆಚ್ಚಿಸಿದ ಆರ್ಬಿಐ
ಇಎಂಐ ಮೊತ್ತದಲ್ಲಿ ಹೆಚ್ಚಳ; ಠೇವಣಿದಾರರಿಗೂ ಖುಷಿ
Team Udayavani, Aug 6, 2022, 6:45 AM IST
ಮುಂಬೈ: ಪ್ರಸಕ್ತ ವಿತ್ತೀಯ ವರ್ಷದಲ್ಲಿ ಮೂರನೇ ಬಾರಿಗೆ ಆರ್ಬಿಐ ಸಾಲಗಳ ಮೇಲಿನ ಬಡ್ಡಿದರವನ್ನು ಶೇ.0.5 (50 ಬೇಸಿಸ್ ಪಾಯಿಂಟ್ಸ್) ಏರಿಕೆ ಮಾಡಿದೆ.
ಹೀಗಾಗಿ, ಬಡ್ಡಿದರ ಪ್ರಮಾಣ ದೇಶಕ್ಕೆ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುವುದಕ್ಕಿಂತ ಮೊದಲು ಇದ್ದ ಪ್ರಮಾಣ ಅಂದರೆ ಶೇ. 5.40ಕ್ಕೆ ತಲುಪಿದಂತಾಗಿದೆ. ಜತೆಗೆ 2019ನೇ ಸಾಲಿಗೆ ಹೋಲಿಕೆ ಮಾಡಿದರೆ, ಗರಿಷ್ಠ ಏರಿಕೆ ಇದಾಗಿದೆ. ಮೇ ಬಳಿಕ ಬಡ್ಡಿದರ ಶೇ.1.40 ಏರಿಕೆಯಾಗಿದೆ.
ಬುಧವಾರ ಶುರುವಾಗಿದ್ದ ಆರು ಮಂದಿ ಸದಸ್ಯರ ವಿತ್ತೀಯ ನೀತಿ ಪರಿಶೀಲನಾ ಸಮಿತಿ (ಎಂಪಿಸಿ) ಸಭೆ ಶುಕ್ರವಾರ ಮುಕ್ತಾಯವಾಗಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಡ್ಡಿದರ ಏರಿಕೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ಇದರಿಂದಾಗಿ ಗೃಹ, ವಾಹನ, ವೈಯಕ್ತಿಕ ಮತ್ತು ಕಾರ್ಪೊರೇಟ್ ಸಾಲಗಳ ಬಡ್ಡಿದರಗಳು ಹೆಚ್ಚಾಗಲಿದೆ.
ಹೀಗಾಗಿ ಇಎಂಐ ಕೂಡ ತುಟ್ಟಿಯಾಗಲಿದೆ. ಇನ್ನೊಂದು ಲೆಕ್ಕಾಚಾರದಲ್ಲಿ ಹೇಳುವುದಾದರೆ ಬ್ಯಾಂಕ್ಗಳಲ್ಲಿ ಇರಿಸಲಾಗಿರುವ ಉಳಿತಾಯ ಠೇವಣಿಗಳಿಗೆ ಬಡ್ಡಿದರ ಕೂಡ ಹೆಚ್ಚಲಿದೆ.
ಅಭಿವೃದ್ಧಿದರದಲ್ಲಿ ಯಥಾ ಸ್ಥಿತಿ:
ಉಕ್ರೇನ್-ರಷ್ಯಾ, ಚೀನಾ ಮತ್ತು ತೈವಾನ್ ನಡುವಿನ ಬಿಕ್ಕಟ್ಟು ಸೇರಿದಂತೆ ರಾಜಕೀಯ ತಲ್ಲಣಗಳಿಂದಾಗಿ ಆರ್ಥಿಕ ಹಿಂಜರಿತ ಎಚ್ಚರಿಕೆಯನ್ನೂ ಗಮನದಲ್ಲಿ ಇರಿಸಿಕೊಂಡು ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯ ಪ್ರಮಾಣವನ್ನು ಶೇ.7.2ರ ಪ್ರಮಾಣಕ್ಕೇ ಇರಿಸಲು ತೀರ್ಮಾನಿಸಲಾಗಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ಇದರ ಜತೆಗೆ ಪ್ರಸಕ್ತ ವಿತ್ತೀಯ ವರ್ಷಕ್ಕೆ ಸಂಬಂಧಿಸಿದಂತೆ ಹಣದುಬ್ಬರ ಪ್ರಮಾಣ ಶೇ.6.7ನ್ನೇ ಮುಂದುವರಿಸಲು ತೀರ್ಮಾನಿಸಿದೆ. ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆಗಳಲ್ಲೂ ಇಳಿಕೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
Tesla; ಭಾರತದಲ್ಲಿ ಎಲಾನ್ ಮಸ್ಕ್ 25,000 ಕೋಟಿ ಹೂಡಿಕೆ?
MUST WATCH
ಹೊಸ ಸೇರ್ಪಡೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ