ಜಿಯೋ ಮತ್ತು ಏರ್ ಟೆಲ್ ನಿಂದ ವೈಫೈ ಕರೆ ಸೌಲಭ್ಯ ; ಇಲ್ಲಿದೆ ಸಂಪೂರ್ಣ ಮಾಹಿತಿ


Team Udayavani, Jan 10, 2020, 4:01 PM IST

Wifi-Calling-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use

ನವದೆಹಲಿ: ನೀವು ಏರ್ ಟೆಲ್ ಅಥವಾ ಜಿಯೋ ಬಳಕೆದಾರರಾಗಿದ್ದಲ್ಲಿ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಈ ಎರಡು ಮೊಬೈಲ್ ಸೇವಾದಾರ ಕಂಪೆನಿಗಳು ಇದೀಗ ಹೊಸ ತಂತ್ರಜ್ಞಾನದ ಕರೆ ಸೌಲಭ್ಯವೊಂದನ್ನು ಗ್ರಾಹಕರಿಗೆ ಪರಿಚಯಿಸುತ್ತಿವೆ, ಅದೇ ವೈಫೈ ಕಾಲಿಂಗ್ ಸೌಲಭ್ಯ. ಅಂದರೆ ಸರಳವಾಗಿ ವಿವರಿಸಬೇಕಾದರೆ ನಿಮ್ಮ ಸ್ಮಾರ್ಟ್ ಫೋನಿನಿಂದ ವೈಫೈ ಇಂಟರ್ನೆಟ್ ಬಳಸಿಕೊಂಡು ಕರೆ ಮಾಡುವ ಸೌಲಭ್ಯ ಇದಾಗಿರುತ್ತದೆ. ನೀವು ಪ್ರೀ ಪೇಯ್ಡ್ ಅಥವಾ ಪೋಸ್ಟ್ ಪೈಯ್ಡ್ ಗ್ರಾಹಕರಾಗಿದ್ದರೂ ನಿಮಗೆ ಈ ಹೊಸ ಸೌಲಭ್ಯ ಲಭಿಸಲಿದೆ

ವೈಫೈ ಕರೆ ಸೌಲಭ್ಯವನ್ನು ಏರ್ ಟೆಲ್ ಕಳೆದ ವರ್ಷದ ಡಿಸೆಂಬರ್ ಮೊದಲ ವಾರದಲ್ಲಿ ತನ್ನ ಗ್ರಾಹಕರಿಗೆ ಪರಿಚಯಿಸಿತ್ತು. ಪ್ರಾರಂಭದಲ್ಲಿ ಈ ಸೇವೆ ದೆಹಲಿಯ ಎನ್.ಸಿ.ಆರ್. ಪ್ರದೇಶದಲ್ಲಿ ಮಾತ್ರವೇ ಲಭ್ಯವಿತ್ತು. ಇದೀಗ ಏರ್ ಟೆಲ್ ಈ ವಿನೂತನ ಸೇವೆಯನ್ನು ದೆಹಲಿ ಎನ್.ಸಿ.ಆರ್. ಸೇರಿದಂತೆ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಪಶ್ಚಿಮ ಉತ್ತರ ಪ್ರದೇಶ, ಮಹಾರಾಷ್ಟ್ರ, ಮುಂಬೈ, ಕೊಲ್ಕೊತ್ತಾ, ಪೂರ್ವ ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ ಮತ್ತು ಮಧ್ಯಪ್ರದೇಶಗಳಲ್ಲಿಯೂ ಈ ಸೇವೆಯನ್ನು ಪರಿಚಯಿಸುತ್ತಿದೆ..

ಇನ್ನು ಏರ್ ಟೆಲ್ ಗೆ ಪ್ರಬಲ ಸ್ಪರ್ಧಿಯಾಗಿರುವ ಜಿಯೋ ಸಹ ವೈ ಫೈ ಕರೆ ಸೌಲಭ್ಯವನ್ನು ಜನವರಿ 07ರಿಂದ ಪರಿಚಯಿಸಿದ್ದು ಜನವರಿ 16ಕ್ಕೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹಾಗಾಗಿ ಜನವರಿ 16ರ ಬಳಿಕ ದೇಶಾದ್ಯಂತವಿರುವ ಜಿಯೋ ಬಳಕೆದಾರರಿಗೆ ಈ ಸೌಲಭ್ಯ ಲಭಿಸುವ ಸಾಧ್ಯತೆಗಳಿವೆ.

ಏನಿದು ವೈ ಫೈ ಕಾಲಿಂಗ್ ಸೌಲಭ್ಯ? ಮತ್ತಿದು ಹೇಗೆ ಕಾರ್ಯನಿರ್ವಹಿಸುತ್ತದೆ?
– ಗ್ರಾಹಕರು ತಾವು ಇದೀಗ ಹೊಂದಿರುವ ಫೋನ್ ನಂಬರ್ ಬಳಸಿಕೊಂಡು ವೈ ಫೈ ನೆಟ್ವರ್ಕ್ ಸಹಾಯದಿಂದ ಮಾಡಬಹುದಾದ ದೂರವಾಣಿ ಕರೆ ಇದಾಗಿದೆ. ಈ ಸೌಲಭ್ಯದಲ್ಲಿ ಗ್ರಾಹಕರ ಮೊಬೈಲ್ ನೆಟ್ವರ್ಕ್ ವೈಫೈ ಸಹಾಯದಿಂದ ಕರೆಗಳನ್ನು ಮಾಡುವುದು/ಸ್ವೀಕರಿಸುವುದರಿಂದ ಗ್ರಾಹಕರು ತಡೆರಹಿತ ಕರೆಗಳನ್ನು ಮಾಡಲು ಇದು ಸಹಕಾರಿಯಾಗಲಿದೆ.

– ಇದನ್ನು ಇನ್ನಷ್ಟು ಸರಳವಾಗಿ ವಿವರಿಸುವುದಾದಲ್ಲಿ, ಜಿಯೋ ಮತ್ತು ಏರ್ ಟೆಲ್ ಗಳು ಈಗಾಗಲೇ ವಾಯ್ಸ್ ಓವರ್ ಎಲ್.ಟಿ.ಇ. (VoLTE) ಕರೆ ಸೌಲಭ್ಯವನ್ನು ಹೊಂದಿದ್ದು ಇದರಲ್ಲಿ ಜಿ.ಎಸ್.ಎಂ. ನೆಟ್ ವರ್ಕ್ ಬದಲಿಗೆ ಇಂಟರ್ನೆಟ್ ಸಂಪರ್ಕದ ಮೂಲಕ ಕರೆಗಳನ್ನು ಮಾಡಲಾಗುತ್ತದೆ. ಈ ವೋಲ್ಟ್ ಗೆ ಹೊಸ ಸೇರ್ಪಡೆಯಾಗಿ ವೈಫೈ ಕರೆ ಸೌಲಭ್ಯ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಎಲ್.ಟಿ.ಇ. ಡಾಟಾ ಬಳಕೆಯ ಬದಲಾಗಿ ವೈಫೈ ಡಾಟಾವನ್ನು ಕರೆ ಮಾಡಲು/ಸ್ವೀಕರಿಸಲು ಬಳಸಿಕೊಳ್ಳಲಾಗುತ್ತದೆ. ಆದರೆ ಇಲ್ಲಿ ನಿಮ್ಮ ಮೊಬೈಲ್ ಉತ್ತಮ ವೈಫೈ ನೆಟ್ ವರ್ಕ್ ಸಂಪರ್ಕವನ್ನು ಹೊಂದಿರುವುದು ಅಗತ್ಯವಾಗಿರುತ್ತದೆ.

ವೈಫೈ ಕರೆ ಸೌಲಭ್ಯದ ಪ್ರಯೋಜನಗಳೇನು?
ವೈಫೈ ಕರೆಗಳು ಸಹಜವಾಗಿಯೇ ವೇಗವಾಗಿರುತ್ತವೆ ಮಾತ್ರವಲ್ಲದೇ ಇವುಗಳು ಕೇಬಲ್ ಸಂಪರ್ಕದ ಮೂಲಕ ಕಾರ್ಯನಿರ್ವಹಿಸುವುದರಿಂದ ಇವುಗಳ ಕಾರ್ಯಕ್ಷಮತೆ ಉತ್ತಮವಾಗಿರುತ್ತವೆ. ಹೀಗಾಗಿ ನೀವು ಮಾಡುವ ಕರೆಗಳು ಸ್ಪಷ್ಟತೆಯಿಂದ ಕೂಡಿರುತ್ತದೆ ಮತ್ತು ನಿಮ್ಮಲ್ಲಿರುವ 4ಜಿ ಕನೆಕ್ಷನ್ ದುರ್ಬಲವಾಗಿದ್ದರೂ ಕಾಲ್ ಡ್ರಾಪ್ ನಂತಹ ಸಮಸ್ಯೆಗಳು ಇರುವುದಿಲ್ಲ.

ಟಾಪ್ ನ್ಯೂಸ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock-market-Exchange

Stock market ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ.ನಷ್ಟ

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Mumbai: Sensex jumped to 75000 during Modi’s tenure

Mumbai: ಮೋದಿ ಅವಧಿಯಲ್ಲಿ ಸೆನ್ಸೆಕ್ಸ್‌ 75000ಕ್ಕೆ ಜಿಗಿತ

1-wqeqweqw

Apple ನಿಂದ 600ಕ್ಕೂ ಅಧಿಕ ಉದ್ಯೋಗಿಗಳ ವಜಾ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.