ಜಿಯೋ ಫೈಬರ್ ಸೇವೆ ಆರಂಭ; ಗ್ರಾಹಕರಿಗೆ ಮೆಗಾ ಆಫರ್ ಘೋಷಣೆ


Team Udayavani, Sep 5, 2019, 7:13 PM IST

Hello

ಮುಂಬೈ:ಟೆಲಿಕಾಂ ಕ್ಷೇತ್ರದಲ್ಲಿ ಕಡಿಮೆ ದರದಲ್ಲಿ 4ಜಿ ಸೇವೆಯನ್ನು ನೀಡುವ ಮೂಲಕ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಗುರುವಾರ ಅಧಿಕೃತವಾಗಿ ಜಿಯೋ ಫೈಬರ್ ಸೇವೆಗೆ ಚಾಲನೆ ನೀಡಿದೆ.

ಜಿಯೋ ಫೈಬರ್ ನ ಮೆಗಾ ಆಫರ್ ಅನ್ನು ಇಂದು ರಿಯಲನ್ಸ್ ಘೋಷಿಸಿದೆ. ಜಿಯೋ ಮೆಗಾ ಆಫರ್ ವಿವರ ಹೀಗಿದೆ…

ರಿಲಯನ್ಸ್ ಒಟ್ಟು ಆರು ಪ್ರಿ ಪೇಯ್ಡ್ ಪ್ಲ್ಯಾನ್ಸ್ ಆಫರ್ ನೀಡಿದೆ. ಅದರಲ್ಲಿ ಕಂಚು-ತಿಂಗಳಿಗೆ 699 ರೂಪಾಯಿ, ಬೆಳ್ಳಿ-ತಿಂಗಳಿಗೆ 849 ರೂಪಾಯಿ, ಚಿನ್ನ-ತಿಂಗಳಿಗೆ 1,299 ರೂಪಾಯಿ, ವಜ್ರ-ತಿಂಗಳಿಗೆ 2,499, ಪ್ಲಾಟಿನಂ-ತಿಂಗಳಿಗೆ 3,999 ಮತ್ತು ಟಿಟಾನಿಯಂ-ತಿಂಗಳಿಗೆ 8,499 ರೂಪಾಇಯ ಆಫರ್ ನೀಡಿದೆ.

ಜಿಯೋ ಫೈಬರ್ ಬ್ರೋನ್ಜ್ (ಕಂಚು) ಮತ್ತು ಸಿಲ್ವರ್(ಬೆಳ್ಳಿ) ಪ್ಲ್ಯಾನ್ಸ್ ನಲ್ಲಿ ಡಾಟಾ ಸ್ಪೀಡ್ ಕನಿಷ್ಠ 100 ಎಂಬಿಪಿಎಸ್ ವರೆಗೆ, ಗೋಲ್ಡ್ (ಚಿನ್ನ) ಮತ್ತು ಡೈಮಂಡ್(ವಜ್ರ) ಪ್ಲ್ಯಾನ್ಸ್ ನಲ್ಲಿ ಕನಿಷ್ಠ 250 ಎಂಬಿಪಿಎಸ್ ಮತ್ತು 500 ಎಂಬಿಪಿಎಸ್ ವೇಗದ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ.

ಅದೇ ರೀತಿ ಪ್ಲಾಟಿನಂ ಮತ್ತು ಟಿಟಾನಿಯಂ ಪ್ಲ್ಯಾನ್ ನಲ್ಲಿ ಒಂದು ಜಿಬಿಪಿಎಸ್ ಡಾಟಾ ಸ್ಪೀಡ್ ಲಭ್ಯವಾಗಲಿದೆ. ಇದು ಒಂದು ತಿಂಗಳ ಪ್ಲ್ಯಾನ್ ಹೊಂದಿದ್ದು, ಇನ್ನುಳಿದಂತೆ ಜಿಯೋ 3 ತಿಂಗಳ, 6 ತಿಂಗಳ ಹಾಗೂ ಒಂದು ವರ್ಷದ ಪ್ಲ್ಯಾನ್ ಅನ್ನು ಕೂಡಾ ನೀಡಲಿದೆ ಎಂದು ತಿಳಿಸಿದೆ.

ಅನ್ ಲಿಮಿಟೆಡ್ ಡಾಟಾ ಡೌನ್ ಲೋಡ್ ಮತ್ತು ಅಪ್ ಲೋಡ್:

ಜಿಯೋ ಫೈಬರ್ ನ ಪ್ರತಿಯೊಂದು ಪ್ಲ್ಯಾನ್ ನಲ್ಲಿಯೂ ಅನ್ ಲಿಮಿಟೆಡ್ ಡೌನ್ ಲೋಡ್ ಮತ್ತು ಅಪ್ ಲೋಡ್ ಸೇವೆ ಲಭ್ಯವಾಗಲಿದೆ. ಆರಂಭಿಕವಾಗಿ ಕಂಚು(ಬ್ರೊನ್ಜ್) ಪ್ಲ್ಯಾನ್ ನಲ್ಲಿ 100 ಜಿಬಿ, ನಂತರ ಬೆಳ್ಳಿಯಿಂದ ಟಿಟಾನಿಯಂ ಪ್ಲ್ಯಾನ್ ವರೆಗೆ 5000 ಜಿಬಿ ಕ್ರಮವಾಗಿ ಲಭ್ಯವಾಗಲಿದೆ. ಅಷ್ಟೇ ಅಲ್ಲ ಹೆಚ್ಚುವರಿ 250 ಜಿಬಿ ಉಚಿತ ಹೈಸ್ಪೀಡ್ ಡಾಟಾ ಸೇವೆ ನೀಡುವುದಾಗಿ ಜಿಯೋ ಘೋಷಿಸಿದೆ.

ಫ್ರೀ ವಾಯ್ಸ್ ಕರೆ, ಟಿವಿ ವಿಡಿಯೋ ಕರೆ:

ಜಿಯೋ ಫೈಬರ್ ನ ಪ್ಲ್ಯಾನ್ ನಲ್ಲಿ ದೇಶೀಯ ಉಚಿತ ವಾಯ್ಸ್ ಕರೆ, ಟಿವಿ ವಿಡಿಯೋ ಕರೆ, ಗೇಮಿಂಗ್, 5 ಡಿವೈಸ್ ಗೆ ಆ್ಯಂಟಿ ವೈರಸ್ ನೋರ್ಟೊನ್ ನೀಡಲಾಗುವುದು.

ಪ್ರಮುಖ ನಗರಗಳಲ್ಲಿ ಸಂಪರ್ಕ:

ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಜೈಪುರ, ಹೈದರಾಬಾದ್, ಸೂರತ್, ವಡೋದರಾ, ಚೆನ್ನೈ, ನೋಯ್ಡಾ, ಗಾಜಿಯಾಬಾದ್, ಭುವನೇಶ್ವರ್, ವಾರಣಾಸಿ, ಅಲಹಾಬಾದ್, ಆಗ್ರಾ, ಮೀರತ್, ವೈಜಾಗ್, ಲಕ್ನೋ, ಹರಿದ್ವಾರ, ಗಯಾ, ಪಾಟ್ನ, ಪೋರ್ಟ್ ಬ್ಲೇರ್, ಪಂಜಾಬ್ ಸೇರಿದಂತೆ ಹಲವು ನಗರಗಳಲ್ಲಿ ಜಿಯೋ ಫೈಬರ್ ಸೇವೆ ಲಭ್ಯವಾಗಲಿದೆ ಎಂದು ಜಿಯೋ ತಿಳಿಸಿದೆ.

ಜಿಯೋ ಗಿಗಾಫೈಬರ್ ಸೇವೆ ಪಡೆಯಲು ಗಿಗಾಫೈಬರ್ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೇಳಿರುವ ವಿವರಗಳನ್ನು ದಾಖಲಿಸಬೇಕು. ಬಳಿಕ ನಾವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಬೇಕು. ಮನೆಯಲ್ಲಿ ರೂಟರ್ ಅಳವಡಿಸಿದ ಕೆಲವೇ ಗಂಟೆಗಳಲ್ಲಿ ಇಂಟರ್ನೆಟ್ ಸೇವೆ ಆರಂಭವಾಗುತ್ತದೆ.

ಅಲ್ಲದೇ ಇಂಟರ್ನೆಟ್ ಸೇವೆ ಪಡೆಯಲು ರೂಟರ್ ಅಗತ್ಯ. ಅದಕ್ಕಾಗಿ ಜಿಯೋ ಸಂಪರ್ಕ ಪಡೆಯುವ ಗ್ರಾಹಕರು ರೂಟರ್ ಗೆ 2500 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ..ಇದನ್ನು ಗ್ರಾಹಕರು ಹಿಂಪಡೆಯುವ ಮೊತ್ತವಾಗಿದೆ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Stock-market-Exchange

Stock market ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ.ನಷ್ಟ

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Mumbai: Sensex jumped to 75000 during Modi’s tenure

Mumbai: ಮೋದಿ ಅವಧಿಯಲ್ಲಿ ಸೆನ್ಸೆಕ್ಸ್‌ 75000ಕ್ಕೆ ಜಿಗಿತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.