ಎಲ್ ಐ ಸಿ ಯ ‘ಆಧಾರ್ ಶಿಲಾ’ ಉಳಿತಾಯ ಯೋಜನೆಯ ಬಗ್ಗೆ ನಿಮಗೆಷ್ಟು ಮಾಹಿತಿ ಇದೆ..?
Team Udayavani, Jul 12, 2021, 2:47 PM IST
ನವ ದೆಹಲಿ : ನಿರಂತರವಾಗಿ ತನ್ನ ಗ್ರಾಹಕರಿಗೆ ಹೊಸ ಯೋಜನೆಗಳನ್ನು ನೀಡುತ್ತಾ ಬಂದಿರುವ ಎಲ್ ಐ ಸಿ ಮತ್ತೊಂದು ಹೊಸ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ. ಹೂಡಿಕೆ ಮಾಡಿದ ಹಣವು ಅತಿ ಹೆಚ್ಚು ಬಡ್ಡಿ ಹಾಗೂ ಭದ್ರತೆಯನ್ನು ಒದಗಿಸುತ್ತದೆ.
ಭಾರತೀಯ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಗುರಿ ಹೊಂದಿರುವ ಯೋಜನೆಯೊಂದನ್ನು ಎಲ್ ಐ ಸಿ ರೂಪಿಸಿದ್ದು, ಈ ಯೋಜನೆಯ ಮುಖಾಂತರವಾಗಿ ತ್ವರಿತವಾಗಿ ಹಣವನ್ನು ಬೆಳೆಸುವ ಅವಕಾಶವನ್ನು ಮಹಿಳೆಯರಿಗೆ ನೀಡುತ್ತಿದೆ.
ಇದನ್ನೂ ಓದಿ : ಎರಡು ಮಕ್ಕಳ ಜನಸಂಖ್ಯಾ ನೀತಿ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೇವೆ : ಈಶ್ವರಪ್ಪ
8 ರಿಂದ 55 ವರ್ಷದೊಳಗಿನ ಮಹಿಳೆಯರು ಎಲ್ ಐ ಸಿ ಯ ‘ಆಧಾರ್ ಶಿಲಾ’ ಎಂಬ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು, ಸಣ್ಣ ಮೊತ್ತದ ಹೂಡಿಕೆ ಅಂದರೆ ದಿನವೊಂದಕ್ಕೆ ಕೇವಲ 29 ರೂಪಾಯಿಯನ್ನು ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾ ಬಂದರ, ಯೋಜನೆ ಮುಕ್ತಾಯ ಹಂತದಲ್ಲಿ ಬರೋಬ್ಬರಿ 4 ಲಕ್ಷ ಕ್ಕೂ ಹೆಚ್ಚು ಒಟ್ಟು ಮೊತ್ತ ನಿಮ್ಮ ಪಾಲಾಗುತ್ತದೆ.
ಹೂಡಿಕೆದಾರರು ಯೋಜನೆಯ ಮುಕ್ತಾಯಕ್ಕಿಂತ ಮುಂಚೆಯೇ ಮರಣ ಹೊಂದಿದ್ದಲ್ಲಿ, ಎಲ್ ಐ ಸಿ ಮೃತನ ಕುಟುಂಬಕ್ಕೆ ಹಣಕಾಸಿನ ನೆರವು ನೀಡುತ್ತದೆ. ಹೂಡಿಕೆಯ ಮೇಲೆ ಖಚಿತ ಆದಾಯದ ಜೊತೆಗೆ ಎಲ್ ಐ ಸಿ ಯು ಈ ಯೋಜನೆಯಲ್ಲಿ ರಕ್ಷಣೆ ವ್ಯಾಪ್ತಿಯನ್ನು ಒದಗಿಸುತ್ತಿದೆ. ಎಲ್ ಐ ಸಿ ಯ ‘ಆಧಾರ್ ಶಿಲಾ’ ಯೋಜನೆಯಲ್ಲಿ ಹೂಡಿಕೆದಾರರಿಗೆ ಕನಿಷ್ಠ 75 ಸಾವಿರ ಹಾಗೂ ಗರಿಷ್ಠ 3 ಲಕ್ಷದವರೆಗೆ ಖಚಿತ ಮೊತ್ತದ ಭರವಸೆ ದೊರಕಲಿದೆ.
4 ಲಕ್ಷ ರೂ. ಮೆಚುರಿಟಿ ಮೊತ್ತವನ್ನು ಪಡೆದುಕೊಳ್ಳಲು ಮಹಿಳೆಯರು ವರ್ಷಕ್ಕೆ ಶೇಕಡಾ. 4.5 ರಷ್ಟು ತೆರಿಗೆ ಸಹಿತ 10,959 ರೂ.ಗಳನ್ನು 20 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಆಗ ನಿಮ್ಮ ಪ್ರತಿದಿನದ ಉಳಿತಾಯದ ಮೊತ್ತ 29 ರೂ. ಆಗಲಿದೆ.
ಇನ್ನು, ಎಲ್ ಐ ಸಿ ನೀಡುತ್ತಿರುವ ಈ ಉತ್ತಮ ಯೋಜನೆಯಲ್ಲಿ ಯೋಜನೆಯಲ್ಲಿ ಹೂಡಿಕೆ ಮಾಡಲು ಮಹಿಳೆಯರು ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಪ್ರೀಮಿಯಂಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಟ್ಟಾರೆ ದಿನವೊಂದಕ್ಕೆ 29 ರೂ. ಉಳಿಸಿ ‘ಆಧಾರ್ ಶಿಲಾ’ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಇದನ್ನೂ ಓದಿ : ರಾಜ್ಯಪಾಲರು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹೇಳುವುದು ನ್ಯಾಯವಲ್ಲ: ಅರ್ಲೇಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ