ಎಲ್ಐಸಿ ಆಧಾರ್ ಸ್ಥಂಭ್ ಪಾಲಿಸಿ, ವಿಶೇಷತೆಗಳೇನು ..?
Team Udayavani, Mar 21, 2021, 1:03 PM IST
ನವ ದೆಹಲಿ : ಎಲ್ಐಸಿ ಆಧಾರ್ ಸ್ಥಂಭ್ ಪಾಲಿಸಿ ಒಂದು ಜೀವವಿಮಾ ಪಾಲಸಿಯಾಗಿದ್ದು. ಸುರಕ್ಷತೆ ಹಾಗೂ ಉಳಿತಾಯ ಎರಡರ ಲಾಭ ಕೂಡ ಇದರಲ್ಲಿ ಸಿಗಲಿದೆ. ಆದರೆ, ಈ ಪಾಲಸಿ ಕೇವಲ ಪುರುಷರಿಗಾಗಿ ಮಾತ್ರ ಸೀಮಿತವಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆಧಾರ್ ಕಾರ್ಡ್ ಅಗತ್ಯ. ಎಲ್ಐಸಿಯ ಈ ಸಣ್ಣ ಉಳಿತಾಯ ಯೋಜನೆಯಲ್ಲಿ ಕೆಲ ರೈಡರ್ ಗಳ ಜೊತೆಗೆ ಡೆತ್ ಹಾಗೂ ಮ್ಯೆಚುರಿಟಿ ಬೆನಿಫಿಟ್ ಕೂಡ ಸಿಗಲಿದೆ ಎಂದು ಇತ್ತೀಚೆಗೆ ಭಾರತೀಯ ಜೀವವಿಮಾ ನಿಗಮದ(LIC) ಅಧಿಕೃತ ವೆಬ್ ಸೈಟ್ licindia.in ನಲ್ಲಿ ಮಾಹಿತಿ ನಿಡಿದೆ.
ಓದಿ : ನನಗಾಗ 35, ನಾನು ಮಕ್ಕಳನ್ನು ಬಯಸುತ್ತಿದ್ದೆ, ಆತ ಇನ್ನೂ 20ರ ಹರೆಯದಲ್ಲಿದ್ದ : ಪ್ರಿಯಾಂಕ
ಈ ಪಾಲಸಿಯ ವಿಶೇಷತೆಗಳೇನು..?
ಇದೊಂದು ನಾನ್ ಲಿಂಕ್ಡ್ ಹಾಗೂ ಪ್ರಾಫಿಟ್ ಎಂಡೋಮೆಂಟ್ ಅಶುರೆನ್ಸ್ ಪ್ಲಾನ್ ಆಗಿದ್ದು, ಪಾಲಸಿಯ ಮುಕ್ತಾಯಕ್ಕು ಮೊದಲಾಗಿ ಪಾಲಸಿದಾರರ ಅಕಾಲಿಕವಾಗಿ ಮರಣ ಹೊಂದಿದರೆ, ನಾಮಿನಿಗೆ ಡೆತ್ ಬೆನಿಫಿಟ್ ಸಿಗಲಿದೆ. ಇದರಿಂದ ಕುಟುಂಬ ಸದಸ್ಯರ ಭವಿಷ್ಯದ ಅಗತ್ಯತೆಗಳು ಪೂರ್ಣಗೊಳ್ಳುತ್ತವೆ. ಇನ್ನೊಂದೆಡೆ ಪಾಲಸಿದಾರರು ಪಾಲಿಸಿ ಕೊನೆಗೊಳ್ಳುವ ತನಕ ಜೀವಂತವಾಗಿದ್ದರೇ, ಮ್ಯೆಚುರಿಟಿ ಬೆನಿಫಿಟ್ ಕೂಡ ಲಭ್ಯವಾಗಲಿದೆ. ಇದನ್ನು ಪಾಲಿಸಿದಾರರಿಗೆ ಏಕಕಾಲಕ್ಕೆ ಒದಗಿಸಲಾಗುತ್ತದೆ ಎಂದು ಸಂಸ್ಥೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಹೇಳಿಕೊಂಡಿದೆ.
10 ರಿಂದ 20 ವರ್ಷಗಳ ಕಾಲ ಇರಲಿದೆ ಈ ಪಾಲಿಸಿ ಅವಧಿ :
8 ರಿಂದ 55 ವರ್ಷ ವಯಸ್ಸಿನವರು ಯಾರು ಬೇಕಾದವರು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಈ ಪ್ಲ್ಯಾನ್ ನ ಮ್ಯೆಚುರಿಟಿ ಸಮಯದಲ್ಲಿ ಅರ್ಜಿದಾರರ ಗರಿಷ್ಟ ವಯಸ್ಸು 70 ವರ್ಷಗಳಾಗಿರಬೇಕು. ಆಧಾರ್ ಸ್ಥಂಭ್ ಪಾಲಸಿ ಅಡಿ ನೀಡಲಾಗುವ ಕನಿಷ್ಠ 75, 000 ರೂ.ಗಳಾಗಿದ್ದರೆ ಅತ್ಯಧಿಕ 3,00,000ರೂ. ಗಳಾಗಿದೆ. ಈ ಪಾಲಸಿಯನ್ನು ನೀವು 10 ರಿಂದ 20 ವರ್ಷಗಳ ಅವಧಿಗೆ ಪಡೆಯಬಹುದು. ಈ ಪಾಲಸಿಯ ಇನ್ನೊಂದು ವಿಶೇಷತೆ ಎಂದರೆ. ಇದರಲ್ಲಿ ರಿಸ್ಕ್ ಕವರೇಜ್ ಪಾಲಸಿ ಜಾರಿಯಾದ ದಿನದಿಂದಲೇ ಆರಂಭವಾಗಲಿದೆ.
ಓದಿ : ಬೇಕಿದ್ದರೆ ನಳಿನ್ ಕಟೀಲ್ ಗೂ ಒಂದೆರಡು ಜೊತೆ ಬಟ್ಟೆ ದಾನ ಮಾಡ್ತೀನಿ: ಸಿದ್ದರಾಮಯ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ