ಗಮನಿಸಿ: ಜೂ.1ರಿಂದ ಪಿಎಫ್ ಜತೆ ಆಧಾರ್ ಸಂಖ್ಯೆ ಜೋಡಿಸದಿದ್ರೆ ಭಾರೀ ನಷ್ಟ, ಏನಿದು ನಿಯಮ?
ಸಾಮಾಜಿಕ ಭದ್ರತಾ ಸಂಹಿತೆ 2020ರ ಸೆಕ್ಷನ್ 142ರ ಅಡಿಯಲ್ಲಿ ಇಪಿಎಫ್ ಒ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
Team Udayavani, Jun 1, 2021, 12:13 PM IST
ನವದೆಹಲಿ: ಈ ಹಿಂದೆ ಆಧಾರ್ ಜತೆಗೆ ಪ್ಯಾನ್ ಸಂಖ್ಯೆಯನ್ನು ಜೋಡಿಸುವ ಗಡುವನ್ನು ಕೇಂದ್ರ ಸರ್ಕಾರ ಮಾರ್ಚ್ 3ರವರೆಗೆ ವಿಸ್ತರಿಸಿತ್ತು. ಆದರೆ ಇದೀಗ ನೌಕರರ ಭವಿಷ್ಯ ನಿಧಿ ಸಂಸ್ಥೆಯು ಆಧಾರ್ ಮತ್ತು ಪ್ಯಾನ್ ಸಂಖ್ಯೆ ಜೋಡಿಸುವ ನೂತನ ನಿಯಮವನ್ನು ಜೂನ್ 1ರಿಂದ ಕಡ್ಡಾಯವಾಗಿ ಮಾಡುವಂತೆ ಸೂಚನೆ ನೀಡಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:‘ಮೇಡಂ ನಿಮ್ಮ ಮದುವೆ ಯಾವಾಗ?’ ಸ್ಯಾಂಡಲ್ವುಡ್ ಪದ್ಮಾವತಿಗೆ ಅಭಿಮಾನಿಗಳ ಪ್ರಶ್ನೆ
ಒಂದು ವೇಳೆ ಪಿಎಫ್ ಖಾತೆದಾರರು ಪ್ಯಾನ್ ಸಂಖ್ಯೆಯನ್ನು ಜೋಡಿಸಲು ವಿಫಲರಾದರೆ ಇದರಿಂದ ಭಾರೀ ಪ್ರಮಾಣದ ಆರ್ಥಿಕ ನಷ್ಟ ಎದುರಿಸುವಂತಾಗಲಿದೆ ಎಂದು ಹೇಳಿದೆ.
ನೂತನ ಇಪಿಎಫ್ ಒ ನಿಯಮದ ಪ್ರಕಾರ, ಪ್ರತಿಯೊಬ್ಬ ಪಿಎಫ್ ಖಾತೆದಾರ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸಬೇಕು. ಪ್ರತಿಯೊಬ್ಬ ನೌಕರನು ತನ್ನ ಪಿಎಫ್ ಖಾತೆಯನ್ನು ಪರಿಶೀಲಿಸುವುದು ಹೊಣೆಗಾರಿಕೆಯಾಗಿದೆ. ಒಂದು ವೇಳೆ ಜೂನ್ 1ರಿಂದ ನೌಕರರು ಆಧಾರ್ ಲಿಂಕ್ ಮಾಡುವುದನ್ನು ನಿರ್ಲಕ್ಷಿಸಿದರೆ ಇದರಿಂದ ಹಲವು ನಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಯಾಕೆಂದರೆ ಪಿಎಫ್ ಖಾತೆಗೆ ಸಂಸ್ಥೆ ನೀಡುವ ಕೊಡುಗೆ (ಹಣದ ಪಾಲು) ಜಮೆಯಾಗುವುದನ್ನು ನಿಲ್ಲಿಸಬಹುದು. ಈ ಹಿನ್ನೆಲೆಯಲ್ಲಿ ಇಪಿಎಫ್ ಒ ಅಧಿಸೂಚನೆಯನ್ನು ಹೊರಡಿಸಿದೆ ಎಂದು ತಿಳಿಸಿದೆ.
ಸಾಮಾಜಿಕ ಭದ್ರತಾ ಸಂಹಿತೆ 2020ರ ಸೆಕ್ಷನ್ 142ರ ಅಡಿಯಲ್ಲಿ ಇಪಿಎಫ್ ಒ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಒಂದು ವೇಳೆ ಜೂನ್ 1ರಿಂದ ಪಿಎಫ್ ಖಾತೆಯನ್ನು ಆಧಾರ್ ಗೆ ಲಿಂಕ್ ಮಾಡದಿದ್ದರೆ ಅಥವಾ ಯುಎಎನ್ ಆಧಾರ್ ಅನ್ನು ಪರಿಶೀಲಿಸದಿದ್ದಲ್ಲಿ ಇದರ ಪರಿಣಾಮ ಇಸಿಆರ್ -ಎಲೆಕ್ಟ್ರಾನಿಕ್ ಚಲನ್ ಪಿಎಫ್ ಜಮೆಯಾಗುವುದನ್ನು ತಡೆಯಲಿದೆ ಎಂದು ಹೇಳಿದೆ.
ಅಂದರೆ ಇದರಿಂದ ನೌಕರ ತನ್ನ ಪಾಲಿನ ಪಿಎಫ್ ಖಾತೆಯ ಪಾಲನ್ನು ಮಾತ್ರ ನೋಡಲು ಸಾಧ್ಯವಾಗುತ್ತದೆ. ಆದರೆ ಯಜಮಾನ(ಸಂಸ್ಥೆ/ಕಂಪನಿ)ಯ ಪಾಲಿನ ಹಣ ಖಾತೆಗೆ ಜಮೆಯಾಗುವುದಿಲ್ಲ ಎಂದು ಇಪಿಎಫ್ ಒ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ
Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?
Odisha: ಗೋಪಾಲ್ ಪುರ್ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ
Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?
Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!
MUST WATCH
ಹೊಸ ಸೇರ್ಪಡೆ
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ