2021 ಆರ್ಥಿಕ ವರ್ಷ: ಹೆಚ್ಚು ಕಾರು ಮಾರಾಟವಾದ ಟಾಪ್ ತ್ರಿ ಸಿಟಿಗಳ ಲಿಸ್ಟ್ ನಲ್ಲಿ ಬೆಂಗಳೂರು!?
Team Udayavani, May 4, 2021, 3:12 PM IST
ನವ ದಹೆಲಿ : ಕೋವಿಡ್ ಸೋಂಕಿನ ಸಂಕಷ್ಟದ ದಿನದಲ್ಲೂ ಅತಿ ಹೆಚ್ಚು ಕಾರು ಮಾರಾಟವಾದ ಭಾರತದ ಟಾಪ್ ತ್ರಿ ಮೆಟ್ರೋ ಸಿಟಿಗಳ ಪೈಕಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಹೌದು, 2021 ಆರ್ಥಿಕ ವರ್ಷದಲ್ಲಿ ಒಟ್ಟು ಕಾರು ಮಾರಾಟದ ಸಂಖ್ಯೆ 1,36,869 ಕ್ಕೆ ತಲುಪಿದ್ದು, ಎನ್ಸಿಆರ್ ಪ್ರದೇಶವು ಅಂಗ್ರ ಪಂಕ್ತಿಯಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿ 1, 28. 907 ಕಾರುಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದ್ದರೇ, ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ಇಡೀ ದೇಶಕ್ಕೆ ದೇಶವೇ ಲಾಕ್ ಡೌನ್ ಆದ ಪರಿಣಾಮ ಹಾಗೂ ಸೋಂಕಿನ ಭಯವಿದ್ದ ಕಾರಣ ಹೆಚ್ಚಿನವರು ಸಾರ್ವಜನಿಕ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ವೈಯಕ್ತರಿಕ ವಾಹನಗಳನ್ನು ಹೆಚ್ಚಾಗಿ ಬಳಸುವುದಕ್ಕೆ ಪ್ರಾರಂಭಿಸಿದರು. ದೇಶದಲ್ಲಿ ದ್ವಚಕ್ರ ವಾಹನ ಹಾಗೂ ಕಾರುಗಳ ಮಾರಾಟಗಳಲ್ಲಿ ಹೆಚ್ಚಳವಾಗಿದೆ.
ಓದಿ : ರೆಮಿಡಿಸಿವಿರ್ ಅಕ್ರಮ ಮಾರಾಟ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಎಂ ಬಿಎಸ್ ವೈ
ಭಾರತದಲ್ಲಿ ಮಾರಾಟವಾದ 10 ಕಾರುಗಳಲ್ಲಿ 6 ಕಾರುಗಳು ಭಾರತದ ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಮಾರಾಟವಾಗುತ್ತವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಕಾರು ತಯಾರಕರು ತಮ್ಮ ಉತ್ಪನ್ನಗಳನ್ನು ದೇಶದ ಟಾಪ್ ನಗರಗಳಲ್ಲಿ ಮೊದಲು ಬಿಡುಗಡೆಗೊಳಿಸುತ್ತಾರೆ.
ಇನ್ನು, ದೇಶದ ಪ್ರಮುಖ ನಗರಗಳು ಯುಟಿಲಿಟಿ ವಾಹನಗಳು, ಪ್ರೀಮಿಯಂ ಸೆಡಾನ್ ಗಳು ಮತ್ತು ಐಷಾರಾಮಿ ಹ್ಯಾಚ್ಬ್ಯಾಕ್ಗಳಿಗೆ ಗರಿಷ್ಠ ಬೇಡಿಕೆಯನ್ನು ಉಂಟುಮಾಡುತ್ತವೆ ಎಂದು autopunditz.com ವರದಿ ತಿಳಿಸಿದೆ.
2021 ರ ಆರ್ಥಿಕ ವರ್ಷದಲ್ಲಿ ಒಟ್ಟು ಕಾರು ಮಾರಾಟದ ಸಂಖ್ಯೆ 1,36,869 ಕ್ಕೆ ತಲುಪಿದ್ದು, ಎನ್ ಸಿ ಆರ್ ಪ್ರದೇಶವು ಈ ವಿಷಯದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ರಾಷ್ಟ್ರ ರಾಜಧಾನಿ ಕಾರು ಮಾರಾಟದಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದರೇ, ಈ ಭಾರಿ ರಾಜಧಾನಿ ನವದೆಹಲಿಯು 1,28,907 ಮಾರಾಟದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಎನ್ ಸಿ ಆರ್ ಪ್ರದೇಶವು ನವದೆಹಲಿಯನ್ನು ಹಿಂದಿಕ್ಕಿ ಮೊದಲನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರು ಕಾರು ಮಾರಾಟದ ವಿಚಾರದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ
Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?
Odisha: ಗೋಪಾಲ್ ಪುರ್ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ
Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’