ಅಮೃತಾಂಜನ್ ರಾಯಭಾರಿಗಳಾಗಿ ಒಲಿಂಪಿಕ್ ಪದಕ ವಿಜೇತ ಮೀರಾಬಾಯಿ ಚಾನು ಮತ್ತು ಪುನಿಯಾ
Team Udayavani, Oct 10, 2021, 3:32 PM IST
ಮುಂಬಯಿ: ಸುಧೀರ್ಘ 128 ವರ್ಷಗಳ ಪರಂಪರೆ ಹೊಂದಿದ ಅಮೃತಾಂಜನ್ ಹೆಲ್ತ್ ಕೇರ್, ಟೋಕಿಯೊ 2020 ಒಲಿಂಪಿಕ್ ಗೇಮ್ಸ್, ವೇಟ್ ಲಿಫ್ಟಿಂಗ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಮತ್ತು ಕುಸ್ತಿ ಕಂಚಿನ ಪದಕ ವಿಜೇತೆ ಭಜರಂಗ್ ಪುನಿಯಾ ಅವರನ್ನು ಬ್ರಾಂಡ್ ಅಂಬಾಸಡರ್ ಆಗಿ ನೇಮಕ ಮಾಡಿಕೊಂಡಿದೆ.
ಈ ಒಲಂಪಿಕ್ ಚಾಂಪಿಯನ್ಗಳು ಕಂಪನಿಯ ಉತ್ಪನ್ನ ಶ್ರೇಣಿಯ ಅತ್ಯಾಧುನಿಕ ದೇಹದ ನೋವು ನಿರ್ವಹಣೆ ಉತ್ಪನ್ನಗಳನ್ನು ಬೆಂಬಲಿಸಲಿದ್ದಾರೆ. ಇದರಲ್ಲಿ ಬ್ಯಾಕ್ ಪೈನ್ ರೋಲ್-ಆನ್, ಜಾಯಿಂಟ್ ಮಸಲ್ ಸ್ಪ್ರೇ ಮತ್ತು ಪೈನ್ ಪ್ಯಾಚ್ ಸೇರಿವೆ.
ಉನ್ನತ ದರ್ಜೆಯ ಕ್ರೀಡಾಪಟುಗಳಾಗಿ, ಈ ಇಬ್ಬರೂ ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಪದಕ ಗೆಲ್ಲುವ ಮೂಲಕ ಗೌರವ ತಂದುಕೊಟ್ಟಿದ್ದಾರೆ. ಆದರೆ ಕ್ರೀಡೆಗಳಲ್ಲಿ ಯಶಸ್ಸಿನ ಹಾದಿ ಎಂದಿಗೂ ಸುಲಭವಲ್ಲ. ಈ ಆಟಗಾರರು ವಾಸ್ತವವಾಗಿ ತಮ್ಮ ನೈಜ ನೋವು, ಕಷ್ಟ ಮತ್ತು ಸವಾಲುಗಳನ್ನು ಜಯಿಸಬೇಕಾಗುತ್ತದೆ.
1893 ರಿಂದ ನೋವು ನಿರ್ವಹಣೆಯಲ್ಲಿ ಅಗ್ರಗಣ್ಯರಾಗಿರುವ ಅಮೃತಾಂಜನ್, ಲಕ್ಷಾಂತರ ಭಾರತೀಯರ ನೋವನ್ನು ಜಯಿಸಲು ಸಹಾಯ ಮಾಡುತ್ತಿದೆ ಮತ್ತು ಈ ಪಾಲುದಾರಿಕೆಯ ಮೂಲಕ, ಈ ಕ್ರೀಡಾಪಟುಗಳ ಯಶಸ್ಸಿನ ಕಥೆಗಳನ್ನು ವಿವರಿಸುವುದು ಮಾತ್ರವಲ್ಲದೆ ಈ ಶ್ರೇಷ್ಠತೆಯನ್ನು ಸಾಧಿಸಬೇಕಾದರೆ, ಅವರು ಎದುರಿಸಿದ ಕಷ್ಟಗಳನ್ನು ಬಣ್ಣಿಸುತ್ತದೆ. ಜತೆಗೆ ದೇಹದ ನೋವು ನಿರ್ವಹಣಾ ಉತ್ಪನ್ನಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಕಂಪೆನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಡ್ರೀಮ್ ಇಲೆವೆನ್ ಸೇರಿ ಎಲ್ಲಾ ಆನ್ಲೈನ್ ಗೇಮ್ ಗಳು ರಾಜ್ಯದಲ್ಲಿ ಬ್ಯಾನ್
ಪಾಲುದಾರಿಕೆಯ ಭಾಗವಾಗಿ, ಬ್ರಾಂಡ್ ಅಂಬಾಸಿಡರ್ಗಳು ಅಮೃತಾಂಜನ್ನ ಸುಧಾರಿತ ಬ್ಯಾಕ್ ಪೈನ್ ರೋಲ್-ಆನ್, ಜಾಯಿಂಟ್ ಮಸಲ್ ಸ್ಪ್ರೇ ಮತ್ತು ಪೈನ್ ಪ್ಯಾಚ್ ಉತ್ಪನ್ನಗಳ ದೂರದರ್ಶನ ಮತ್ತು ಡಿಜಿಟಲ್ ಜಾಹೀರಾತುಗಳನ್ನು ಒಳಗೊಂಡಂತೆ ಸರಣಿ ಪ್ರಚಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಎಲ್ಲಾ ಉತ್ಪನ್ನಗಳು ಆರೋಗ್ಯ, ವಿಜ್ಞಾನ ಮತ್ತು ಪ್ರಕೃತಿಯ ವಿಶಿಷ್ಟ ಮಿಶ್ರಣವಾಗಿದ್ದು ಆಯುರ್ವೇದದ ಮೂಲಿಕೆಗಳಿಂದ ಕೂಡಿದೆ.
ಈ ಇಬ್ಬರು ಕ್ರೀಡಾಪಟುಗಳು ಗ್ರಾಹಕರು ಮತ್ತು ಗ್ರಾಹಕರ ಸಂಪರ್ಕ ಕಾರ್ಯಕ್ರಮಗಳಂತಹ ವಿವಿಧ ಅಭಿಯಾನಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
Tesla; ಭಾರತದಲ್ಲಿ ಎಲಾನ್ ಮಸ್ಕ್ 25,000 ಕೋಟಿ ಹೂಡಿಕೆ?
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ