ಇನ್ನು ರೈಲ್ವೇ ಟಿಕೆಟ್ ಶುಲ್ಕ ರಿಫಂಡ್ ಗೂ ಮೊದಲು ಒಟಿಪಿ ಬರುತ್ತದೆ!
IRCTC ಅಧಿಕೃತ ಏಜೆಂಟ್ ಮೂಲಕ ಮಾಡಲಾದ ಟಿಕೆಟ್ ಬುಕ್ಕಿಂಗ್ ಗಳಿಗೆ ಮಾತ್ರ ಇದು ಅನ್ವಯ
Team Udayavani, Oct 29, 2019, 6:54 PM IST
ನವದೆಹಲಿ: ನೀವು ಕಾಯ್ದಿರಿಸಿದ ರೈಲ್ವೇ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಿದಲ್ಲಿ ಅಥವಾ ತತ್ಕಾಲ್ ನಲ್ಲೇ ಉಳಿದ ಟಿಕೆಟ್ ಗಳಿಗೆ ಹಣ ಹಿಂದಿರುಗಿಸುವ ವಿಧಾನವನ್ನು ಭಾರತೀಯ ರೈಲ್ವೇ ಇನ್ನಷ್ಟು ಪಾರದರ್ಶಕಗೊಳಿಸಿದೆ. ಒಟಿಪಿ ಆಧಾರಿತ ಹಣ ವಾಪಸಾತಿ ವಿಧಾನಕ್ಕೆ ಮಂಗಳವಾರದಂದು ಚಾಲನೆ ನೀಡಿರುವ ಭಾರತೀಯ ರೈಲ್ವೇ ಈ ಮೂಲಕ ನೀವು ಅಧಿಕೃತ ಐ.ಆರ್.ಸಿ.ಟಿ.ಸಿ. ಏಜೆಂಟರ ಮೂಲಕ ಕಾಯ್ದಿರಿಸಿದ ರೈಲ್ವೇ ಟಿಕೆಟ್ ಅನ್ನು ರದ್ದುಗೊಳಿಸಿದರೆ ಅಥವಾ ನಿಮ್ಮ ಪ್ರಯಾಣ ಖಾತ್ರಿಯಾಗದಿದ್ದರೆ ಆ ಸಂದರ್ಭದಲ್ಲಿ ಒಟಿಪಿ ಸಂದೇಶವನ್ನು ಪ್ರಯಾಣಿಕರ ಮೊಬೈಲ್ ಗೆ ಕಳುಹಿಸುವ ವ್ಯವಸ್ಥೆ ಇದಾಗಿದೆ. ಟಿಕೆಟ್ ಶುಲ್ಕವನ್ನು ರಿಫಂಡ್ ಮಾಡುವ ಸಂದರ್ಭದಲ್ಲೇ ಈ ಒಟಿಪಿ ಸಂದೇಶವೂ ಸಹ ಬರುತ್ತದೆ.
ಭಾರತೀಯ ರೈಲ್ವೇಯ ಪಿ.ಎಸ್.ಯು. ಮತ್ತು ಐ.ಆರ್.ಸಿ.ಟಿ.ಸಿ. ಜಂಟಿಯಾಗಿ ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿವೆ. ಐ.ಆರ್.ಸಿ.ಟಿ.ಸಿ. ಅಧಿಕೃತ ಏಜೆಂಟರುಗಳ ಮೂಲಕ ಬುಕ್ಕಿಂಗ್ ಮಾಡಿದ ಟಿಕೆಟ್ ಗಳಿಗೆ ಮಾತ್ರವೇ ಈ ಒಟಿಪಿ ಸಂದೇಶ ಬರುತ್ತದೆ.
ಟಿಕೆಟ್ ಅಲಭ್ಯತೆಯಿಂದ ಅಥವಾ ಇನ್ಯಾವುದೇ ಕಾರಣಗಳಿಂದ ಒಂದು ವೇಳೆ ನಿಮ್ಮ ಉದ್ದೇಶಿತ ರೈಲ್ವೇ ಪ್ರಯಾಣವು ರದ್ದುಗೊಂಡಲ್ಲಿ, ಪ್ರಯಾಣಿಕರು ಅಧಿಕೃತ ಏಜೆಂಟರ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ಸಂದರ್ಭದಲ್ಲಿ ನೀಡುವ ಮೊಬೈಲ್ ನಂಬರ್ ಗೆ ಒಟಿಪಿ ಸಂದೇಶವನ್ನು ಕಳುಹಿಸಲಾಗುತ್ತದೆ. ಈ ಒಟಿಪಿ ಸಂದೇಶವನ್ನು ನೀವು ಟಿಕೆಟ್ ಬುಕ್ಕಿಂಗ್ ಮಾಡಿರುವ ಏಜೆಂಟ್ ಅವರಿಗೆ ತೋರಿಸುವ ಮೂಲಕ ನೀವು ನಿಮ್ಮ ಟಿಕೆಟ್ ಹಣವನ್ನು ಮರಳಿ ಪಡೆಯಬಹುದಾಗಿರುತ್ತದೆ.
ಒಟಿಪಿ ಆಧಾರಿತ ಟಿಕೆಟ್ ಶುಲ್ಕ ಹಿಂದಿರುಗಿಸುವಿಕೆ ವಿಧಾನವು ಹೆಚ್ಚು ಪಾರದರ್ಶಕತೆಯಿಂದ ಕೂಡಿದ್ದಾಗಿದೆ ಎಂದು ನಂಬಲಾಗುತ್ತಿದೆ. ಯಾಕೆಂದರೆ ಈ ವಿಧಾನದಲ್ಲಿ ಪ್ರಯಾಣಿಕರಿಗೆ ತಮ್ಮ ಟಿಕೆಟ್ ಶುಲ್ಕದಲ್ಲಿ ಎಷ್ಟು ಮೊತ್ತ ರಿಫಂಡ್ ಆಗಿ ಏಜೆಂಟರ ಕೈಸೇರಿದೆ ಎಂಬ ನಿಖರವಾದ ಮಾಹಿತಿ ಲಭ್ಯವಾಗುತ್ತದೆ. ಇದರಿಂದಾಗಿ ಟಿಕೆಟ್ ರಿಫಂಡ್ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ.
ಈ ವ್ಯವಸ್ಥೆಯ ಉಪಯೋಗವನ್ನು ಪಡೆದುಕೊಳ್ಳಲು ರೈಲ್ವೇ ಪ್ರಯಾಣಿಕರು ತಾವು IRCTCಯ ಅಧಿಕೃತ ಏಜೆಂಟರ ಬಳಿ ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ತಮ್ಮ ಸರಿಯಾದ ಮೊಬೈಲ್ ನಂಬರನ್ನು ನೀಡುವುದು ಅಗತ್ಯವಾಗಿರುತ್ತದೆ, ಮಾತ್ರವಲ್ಲದೇ ಏಜೆಂಟರುಗಳು ಈ ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂಬುದನ್ನೂ ಸಹ ಖಚಿತಪಡಿಸಿಕೊಳ್ಳುವುದು ಪ್ರಯಾಣಿಕರ ಜವಾಬ್ದಾರಿಯಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ