- Saturday 14 Dec 2019
ಭಾರತದೊಂದಿಗೆ ವ್ಯಾಪಾರ ನಿಷೇಧ: ಉಲ್ಟಾ ಹೊಡೆದ ಪಾಕಿಸ್ಥಾನ!
ಔಷಧ ತಯಾರಿಕೆಗೆ ಕಚ್ಚಾ ವಸ್ತು ಆಮದಿಗೆ ನಿರ್ಧಾರ
Team Udayavani, Sep 3, 2019, 8:06 PM IST
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಎಗರಾಡುತ್ತಿದ್ದ ಪಾಕಿಸ್ಥಾನ ಈಗ ಒಂದೊಂದೇ ವಿಚಾರದಲ್ಲಿ ಉಲ್ಟಾ ಹೊಡೆಯುತ್ತಿದೆ.
ಯುದ್ಧದ ವಿಚಾರ, ಪರಮಾಣು ಬಾಂಬ್ ದಾಳಿ ಮಾಡುತ್ತೇವೆ ಎಂದೆಲ್ಲ ಹೇಳಿದ್ದ ಆ ದೇಶ ಕಳೆದೆರಡು ದಿನಗಳಿಂದ ಇಲ್ಲ ಇಲ್ಲ.. ಎನ್ನುತ್ತ ಯೂ ಟರ್ನ್ ತೆಗೆದುಕೊಂಡಿದೆ. ಈಗ ವ್ಯಾಪಾರ ನಿಷೇಧ ವಿಚಾರದಲ್ಲೂ ಉಲ್ಟಾ ಹೊಡೆದಿದೆ.
ಭಾರತದೊಂದಿಗೆ ಆಮದು-ತುರ್ತುಗಳನ್ನು ನಿಷೇಧಿಸಿದ್ದ ಪಾಕಿಸ್ಥಾನಕ್ಕೆ ಅಗತ್ಯ ವಸ್ತುಗಳ ವಿಚಾರದಲ್ಲಿ ಸಂಕಷ್ಟಕ್ಕೀಡಾಗಿದ್ದು, ಇದರಿಂದ ಔಷಧಿ ತಯಾರಿಕೆಯ ಕಚ್ಚಾ ವಸ್ತುಗಳಿಗೆ ಹೇರಲಾಗಿದ್ದ ನಿಷೇಧವನ್ನು ಅದು ರದ್ದುಗೊಳಿಸಿದೆ. ಕ್ಯಾನ್ಸರ್, ಕ್ಷಯ, ಹೃದಯ ಸಂಬಂಧಿ ಕಾಯಿಲೆಗಳೂ ಸೇರಿದಂತೆ ಪ್ರಮುಖ ಔಷಧಿಗಳ ಕಚ್ಚಾ ವಸ್ತುಗಳನ್ನು ಭಾರತದಿಂದ ತರಿಸಿಕೊಳ್ಳಲು ಅದು ಉದ್ಯಮಕ್ಕೆ ಸಮ್ಮತಿ ನೀಡಿದೆ.
ಇದಕ್ಕೆ ಕಾರಣ ಪಾಕ್ ನಲ್ಲಿ ಈ ಔಷಧಿಗಳ ಕೊರತೆಯಾಗುವ ಸಾಧ್ಯತೆ ದಟ್ಟವಾಗಿತ್ತು. ಇನ್ನು ಕೆಲವು ದಿನಗಳು ಕಳೆದರೆ ಔಷಧ ಅಲಭ್ಯತೆ ಕಾಡುವುದಾಗಿ ಅಲ್ಲಿನ ಉದ್ಯಮ ವಲಯ ಆತಂಕ ವ್ಯಕ್ತಪಡಿಸಿತ್ತು. ಅಲ್ಲದೇ ಭಾರತ ಹೊರತು ಬೇರೆಯಾವುದೇ ದೇಶಗಳಿಂದ ಕಚ್ಚಾ ವಸ್ತುಗಳನ್ನು ತರಿಸುವುದು ಅತಿ ದುಬಾರಿಯಾದ್ದರಿಂದ ಪಾಕಿಸ್ಥಾನಕ್ಕೆ ಬೇರೆ ದಾರಿಯೇ ಇಲ್ಲ ಎಂದು ಹೇಳಲಾಗಿದೆ.
ಅಲ್ಲದೇ ಪಾಕ್ ಶೇ.50ರಷ್ಟು ಔಷಧಿಗಳ ಕಚ್ಚಾವಸ್ತುಗಳನ್ನು ಭಾರತದಿಂದ ಆಮದು ಮಾಡುತ್ತಿದೆ. ಔಷಧಿಗಳಿಗೆ ಬಳಸುವ 820 ರಾಸಾಯನಿಕಗಳನ್ನು ಅದು ಆಮದು ಮಾಡಿಕೊಳ್ಳುತ್ತಿದೆ. ಇವುಗಳಲ್ಲಿ 62 ಕಚ್ಚಾ ವಸ್ತುಗಳಿಗೆ ಪಾಕ್ ಭಾರತವನ್ನೇ ಶೇ.100ರಷ್ಟು ಆಶ್ರಯಿಸಿದೆ. ಇವುಗಳಲ್ಲಿ 23 ವಸ್ತುಗಳು ಯಾವತ್ತೂ ಬೇಕಾಗುವ, ಅತಿ ಬೇಡಿಕೆಯಿರುವ ಜೀವ ರಕ್ಷಕ ಔಷಧಿಯ ಮೂಲವಸ್ತುಗಳಾಗಿವೆ.
ಈ ಸಂಬಂಧ ಪಾಕ್ ನ ಉದ್ದಿಮೆ ಸಚಿವಾಲಯ ಸೆ.2ರಂದು ಘೋಷಣೆ ಹೊರಡಿಸಿದ್ದು, ಆಮದಿಗೆ ಇದ್ದ ತಡೆಯನ್ನು ತೆಗೆದುಹಾಕಿರುವುದಾಗಿ ಹೇಳಿದೆ. ಇನ್ನು ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಮೇಲಿನ ನಿಷೇಧ ತೆಗೆದು ಹಾಕಬೇಕೆಂದು ಪಾಕ್ ನಲ್ಲಿ ವಿಪರೀತ ಒತ್ತಡವಿದ್ದು, ಮುಂದಿನ ದಿನಗಳಲ್ಲಿ ಅದು ನಿಷೇಧವನ್ನು ಸಂಪೂರ್ಣ ತೆಗೆದು ಹಾಕುವ ಸಾಧ್ಯತೆ ಇದೆ ಎಂದು ಉದ್ಯಮ ವಲಯದ ಮೂಲಗಳು ಹೇಳಿವೆ.
ಈ ವಿಭಾಗದಿಂದ ಇನ್ನಷ್ಟು
-
ಹೊಸದಿಲ್ಲಿ: ದೇಶದ ವಿದೇಶಿ ವಿನಿಮಯ ಮೀಸಲು ಇದೇ ಮೊದಲ ಬಾರಿಗೆ ದಾಖಲೆಯ ಸರ್ವಾಧಿಕ ಮೊತ್ತವನ್ನು ತಲುಪಿದೆ. ನ.29ಕ್ಕೆ ಕೊನೆಗೊಂಡ ವಾರದಲ್ಲಿ 45.10 ದಶಲಕ್ಷ ಕೋಟಿ...
-
ಹೊಸದಿಲ್ಲಿ: 'ಜಿಎಸ್ಟಿ ದರಗಳನ್ನು ಹೆಚ್ಚಳ ಮಾಡುವ ವಿಚಾರ ನನ್ನ ಕಚೇರಿಗಿಂತ ಹೊರಗಡೆಯೇ ಹೆಚ್ಚು ಸದ್ದು ಮಾಡುತ್ತಿದೆ' ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್...
-
ಮುಂಬಯಿ: ದೇಶದ ಪ್ರಮುಖ ಕಾರು ಉತ್ಪಾದನ ಸಂಸ್ಥೆ ಮಾರುತಿ ಸುಜುಕಿ ಡೀಸೆಲ್ ಕಾರುಗಳ ಉತ್ಪಾದನೆ ಮಾಡುವುದಿಲ್ಲವೆಂದು ಘೋಷಿಸಿತ್ತು. ಆದರೆ ಅದು ತನ್ನ ನಿರ್ಧಾರ ಬದಲು...
-
ಮುಂಬಯಿ: ಎರಡು ತಿಂಗಳಿನಿಂದ ಈರುಳ್ಳಿ ದರ ಸತತವಾಗಿ ಏರಿಕೆಯಾಗಿ 170ಗೆ ತಲುಪಿದೆ. ಹೀಗಾಗಿ, ಹೊಟೇಲ್ಗಳಲ್ಲಿ ತಿಂಡಿ ತಿನಸುಗಳ ಬೆಲೆ ಹೆಚ್ಚಳದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ....
-
ಹೊಸದಿಲ್ಲಿ: ನಿಮ್ಮ ಆಧಾರ್ ಕಾರ್ಡ್ನೊಂದಿಗೆ ಪಾನ್ ಲಿಂಕ್ ಮಾಡಲು ಡಿಸೆಂಬರ್ 31 ಕಡೆಯ ದಿನವಾಗಿದೆ. ಈ ಹಿಂದೆ ಬರೊಬ್ಬರಿ 7 ಬಾರಿ ಕಡೆಯ ದಿನಾಂಕ ನಿಗದಿ ಮಾಡಲಾಗಿದ್ದರೂ...
ಹೊಸ ಸೇರ್ಪಡೆ
-
ತುಮಕೂರು: ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಮತ್ತು ಚೆನ್ನರಾಯ ದುರ್ಗ ಹೋಬಳಿಯ 18 ಹಳ್ಳಿಗಳಿಗೆ ಹೇಮಾವತಿ ನೀರು ಹರಿಸಬೇಕು ಎಂದು ಆಗ್ರಹಿಸಿ ಶ್ರೀ...
-
ನವದೆಹಲಿ/ಶ್ರೀನಗರ್: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಗೃಹ ಬಂಧನವನ್ನು ಮತ್ತೆ ಮೂರು ತಿಂಗಳ ಕಾಲ ಮುಂದುವರಿಸುವುದಾಗಿ ಸಬ್ ಜೈಲು ಅಧಿಕಾರಿಗಳು...
-
ತರೀಕೆರೆ: ಜನವರಿ 14 ಮತ್ತು 15 ರಂದು ಅಜ್ಜಂಪುರ ತಾಲೂಕಿನ ಸೊಲ್ಲಾಪುರದ ಶ್ರೀ ಸಿದ್ದರಾಮೇಶ್ವರ ದೇವಾಲಯದ ಆವರಣದಲ್ಲಿ 847ನೇ ಶ್ರೀ ಸಿದ್ದರಾಮೇಶ್ವರರ ಜಯಂತ್ಯುತ್ಸವವನ್ನು...
-
ಹೊಸದಿಲ್ಲಿ: ಈರುಳ್ಳಿ ಬೆಲೆ ತಹಬಂದಿಗೆ ತರಲು ಇನ್ನಿಲ್ಲದ ಯತ್ನ ಮಾಡುತ್ತಿರುವ ಕೇಂದ್ರ ಸರಕಾರ ಈಗ ಅಫ್ಘಾನಿಸ್ಥಾನದಿಂದಲೂ ಆಮದು ಮಾಡುತ್ತಿದೆ. ಪಾಕಿಸ್ಥಾನದ...
-
ಮಣಿಪಾಲ: ಐಪಿಎಲ್ ಹರಾಜಿನಲ್ಲಿ ಈ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯಾವ ಆಟಗಾರರನ್ನು ಖರೀದಿಸಿದರೆ ಯಶಸ್ಸು ಗಳಿಸಬಹುದು ಎಂಬ ಪ್ರಶ್ನೆಯನ್ನು...