ಪತಂಜಲಿv/s ಹಿಂದುಸ್ಥಾನ್ ಯೂನಿಲಿವರ್:ಸಾಬೂನು ಜಾಹೀರಾತಿಗೆ ತಡೆ
Team Udayavani, Sep 8, 2017, 11:54 AM IST
ಮುಂಬಯಿ: ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ್ ಕಂಪೆನಿಯ ಸಾಬೂನಿನ ಟಿವಿ ಜಾಹೀರಾತಿನ ಮೇಲೆ ಬಾಂಬೇ ಹೈಕೋರ್ಟ್ ತಡೆಯಾಜ್ಞೆ ಹೇರಿದೆ.
ಹಿಂದುಸ್ಥಾನ್ ಯೂನಿಲಿವರ್ ಸಂಸ್ಥೆಯು ಈ ಜಾಹೀರಾತಿನ ಮೇಲೆ ತಡೆಯಾಜ್ಞೆ ಹೇರುವಂತೆ ಕೋರಿ ಬಾಂಬೇ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಪತಂಜಲಿ ಸಾಬೂನಿನ ಜಾಹೀರಾತಿನಲ್ಲಿ ಇತರ ಸಾಬೂನು ಉತ್ಪನ್ನಗಳನ್ನು ನೇರವಾಗಿ ಗುರಿ ಮಾಡಿಕೊಳ್ಳಲಾಗಿದೆ ಎಂದು ಸಂಸ್ಥೆಯು ಅರ್ಜಿಯಲ್ಲಿ ಆರೋಪಿಸಿದೆ.
ಬುಧವಾರ ಈ ಅರ್ಜಿಯ ಮೇಲೆ ವಿಚಾರಣೆ ನಡೆಸಿರುವ ಹೈಕೋರ್ಟ್ ಮುಂದಿನ ವಿಚಾರಣೆ ವರೆಗೆ ಜಾಹೀರಾತಿಗೆ ತಡೆ ಹೇರುವಂತೆ ಪತಂಜಲಿ ಆಯುರ್ವೇದಕ್ಕೆ ಆದೇಶಿಸಿದೆ. ಸೆ. 18ರಂದು ಅರ್ಜಿಯ ಮುಂದಿನ ವಿಚಾರಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್ನದ್ದು: ಮೀನಾಕ್ಷಿ ಲೇಖಿ
Lok Sabha Elections; ಕಾಂಗ್ರೆಸ್ಗೆ ಉತ್ತಮ ಅವಕಾಶ: ದಿನೇಶ್ ಗುಂಡೂರಾವ್
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್ಪಾಲ್
Lok Sabha Election ಫಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.