ಇಂದು GST ಸಭೆ: ವಿಪಕ್ಷ ಆಳ್ವಿಕೆಯ ರಾಜ್ಯಗಳ ಗದ್ದಲ?
Team Udayavani, Oct 5, 2020, 7:09 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಜಿಎಸ್ಟಿ ಮಂಡಳಿಯ 42ನೇ ಸಭೆಯು ಸೋಮವಾರ (ಅ.5) ನಡೆಯಲಿದ್ದು, ರಾಜ್ಯಗಳ ಜಿಎಸ್ಟಿ ಬಾಕಿ ಹಣ ಬಿಡುಗಡೆಯ ವಿಚಾರವಾಗಿ ಗದ್ದಲಮಯವಾಗುವ ಸಂಭವವಿದೆ.
ರಾಜ್ಯಗಳಿಗೆ ನೀಡಬೇಕಾಗಿರುವ ಜಿಎಸ್ಟಿ ಬಾಕಿಯನ್ನು ಸಾಲವಾಗಿ ನೀಡುವ ಕೇಂದ್ರ ಸರಕಾರದ ಆಯ್ಕೆಯನ್ನು 21 ರಾಜ್ಯಗಳು ಸ್ವೀಕರಿಸಿವೆ.
ಇವುಗಳಲ್ಲಿ ಬಿಜೆಪಿ ಆಳ್ವಿಕೆಯ ರಾಜ್ಯಗಳೇ ಅಧಿಕ. ಆದರೆ ವಿಪಕ್ಷಗಳ ಆಡಳಿತ ಇರುವ ಪಂಜಾಬ್, ಕೇರಳ, ಪ. ಬಂಗಾಲದಂತಹ ರಾಜ್ಯಗಳು ಈ ಆಯ್ಕೆಯನ್ನು ವಿರೋಧಿಸಿವೆ.
ಸೋಮವಾರದ ಸಭೆಯಲ್ಲಿ ಈ ರಾಜ್ಯಗಳು ಕೇಂದ್ರ ಸರಕಾರದ ಸಾಲ ಆಯ್ಕೆಯನ್ನು ಬಲವಾಗಿ ವಿರೋಧಿಸುವ ಸಾಧ್ಯತೆಯಿದ್ದು, ಪರ್ಯಾಯ ಮಾರ್ಗಕ್ಕಾಗಿ ಆಗ್ರಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಾಲ ಆಯ್ಕೆಗೆ ವಿರೋಧ
ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಾಜ್ಯಗಳು 2.35 ಲಕ್ಷ ಕೋ.ರೂ. ಜಿಎಸ್ಟಿ ಆದಾಯ ಕೊರತೆ ಅನುಭವಿಸಿವೆ. ಕೇಂದ್ರದ ಲೆಕ್ಕಾಚಾರದಂತೆ ಈ ಪೈಕಿ 97 ಸಾವಿರ ಕೋ.ರೂ. ಜಿಎಸ್ಟಿ ಜಾರಿ ಸಂಬಂಧಿಯದ್ದಾದರೆ ಇನ್ನುಳಿದ 1.38 ಲಕ್ಷ ಕೋ.ರೂ. ರಾಜ್ಯಗಳ ಜಿಎಸ್ಟಿ ಆದಾಯದ ಮೇಲೆ ಕೋವಿಡ್ 19 ಪರಿಣಾಮದಿಂದ ಉಂಟಾಗಿದೆ.
ಕೊರತೆಯಾಗಿರುವ 97 ಸಾವಿರ ಕೋ. ರೂ.ಗಳನ್ನು ಆರ್ಬಿಐ ಮೂಲಕ ಸಾಲವಾಗಿ ಪಡೆಯುವ ಅಥವಾ 2.35 ಲಕ್ಷ ಕೋ. ರೂ.ಗಳನ್ನು ಬಾಹ್ಯ ಸಾಲವಾಗಿ ಪಡೆಯುವ ಆಯ್ಕೆಗಳನ್ನು ಕೇಂದ್ರ ಸರಕಾರವು ರಾಜ್ಯಗಳ ಮುಂದೆ ಇರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ