2ವರ್ಷದಲ್ಲಿ ಗರಿಷ್ಠ ಬೆಲೆ ಹೆಚ್ಚಳ; ಸತತ ಆರನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ನ. 20ರ ಬಳಿಕ 14ನೇ ಬಾರಿಗೆ ತೈಲೋತ್ಪನ್ನಗಳ ಬೆಲೆ ಏರಿಕೆಯಾಗುತ್ತಿದೆ.
Team Udayavani, Dec 7, 2020, 12:54 PM IST
ಹೊಸದಿಲ್ಲಿ: ದೇಶದಲ್ಲಿ ತೈಲ ಬೆಲೆಯೇರಿಕೆ ಮುಂದುವರಿದಿದೆ. ರಾಷ್ಟ್ರ ರಾಜಧಾನಿಯಲ್ಲಿ ಸತತ 6ನೇ ದಿನವೂ ಏರಿಕೆ ಕಂಡು ಪೆಟ್ರೋಲ್ ಬೆಲೆ ಲೀ.ಗೆ 83.71 ರೂ.ಗಳಿಗೆ ಮುಟ್ಟಿದೆ. ಸೋಮವಾರ(ಡಿಸೆಂಬರ್ 07, 2020) 30 ಪೈಸೆ ಏರಿಕೆಯಾಗಿದೆ. ಡೀಸೆಲ್ ಬೆಲೆ ಲೀ.ಗೆ 29 ಪೈಸೆಗಳಷ್ಟು ಹೆಚ್ಚಿ 73.87ರೂ. ಗೇರಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀ.ಗೆ 29 ಪೈಸೆ ಏರಿ 86.20 ರೂ.ಗಳಿಗೆ ಮುಟ್ಟಿದ್ದರೆ, ಡೀಸೆಲ್ ಬೆಲೆ ಲೀ.ಗೆ 30 ಪೈಸೆ ಹೆಚ್ಚಿ 78.03 ರೂ.ಗಳಿಗೆ ತಲುಪಿದೆ. ಮುಂಬಯಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ಗೆ 90 ರೂ. ದಾಟಿದ್ದರೆ, ಡೀಸೆಲ್ಗೆ 80 ರೂ.ಗಳಿಗೆ ಹೆಚ್ಚಿದೆ.
ನ. 20ರ ಬಳಿಕ 14ನೇ ಬಾರಿಗೆ ತೈಲೋತ್ಪನ್ನಗಳ ಬೆಲೆ ಏರಿಕೆಯಾಗುತ್ತಿದೆ. ಈ 17 ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ 2.35 ರೂ. ಏರಿಕೆಯಾಗಿದ್ದರೆ, ಡೀಸೆಲ್ 3.15 ರೂ. ಜಿಗಿದಿದೆ.
ಇದನ್ನೂ ಓದಿ:ನಾಳೆ ಭಾರತ್ ಬಂದ್: ಕರಾವಳಿಯಲ್ಲಿ ಹೇಗಿರಲಿದೆ ಬಂದ್, ಬಸ್ ಸಂಚಾರ ಪರಿಸ್ಥಿತಿ?
ಇದನ್ನೂ ಓದಿ:ಸರ್ವೀಸ್ ಬಸ್ ನಲ್ಲಿ ಮದುವೆ ಟ್ರಿಪ್! ಟೂರಿಸ್ಟ್ ವಾಹನ ಚಾಲಕರಿಂದ ಬಸ್ಸಿಗೆ ತಡೆ
ಟ್ವಿಟರ್ ಸೆಕ್ಯುರಿಟಿ ಕೀ ತಂತ್ರ
ನ್ಯೂಯಾರ್ಕ್: ಹ್ಯಾಕರ್ಸ್ಗಳಿಂದ ಬಳಕೆದಾರರ ಖಾತೆ ಸಂರಕ್ಷಿಸಲು ಟ್ವಿಟರ್, “ಸೆಕ್ಯುರಿಟಿ ಕೀ ಸಪೋರ್ಟ್’ ಸೌಲಭ್ಯ ಕಲ್ಪಿಸಿದೆ. ಹ್ಯಾಕರ್ಸ್ಗಳಿಗೆ ಒಂದು ವೇಳೆ ಯೂಸರ್ನೇಮ್ ಮತ್ತು ಪಾಸ್ವರ್ಡ್ ಸಿಕ್ಕರೂ, ಖಾತೆ ಪ್ರವೇಶಿಸುವುದು ಇನ್ನಮುಂದೆ ಅಸಾಧ್ಯ.
ಟ್ವಿಟರ್ ಸಂಸ್ಥೆಯ ಸಿಬಂದಿ ಖಾತೆಗಳು ಈ ಹಿಂದೆ ಹಲವು ಬಾರಿ ಹ್ಯಾಕ್ ಆಗಿದ್ದವು. ಇದನ್ನು ತಡೆಯಲು 2018ರಲ್ಲಿ ಟ್ವಿಟರ್, ಸಿಬಂದಿ ಖಾತೆಗಳಿಗೆ “ಸೆಕ್ಯುರಿಟಿ ಕೀ ಸಪೋರ್ಟ್’ ಅಳವಡಿಸಿತ್ತು. ಈ ಪ್ರಯೋಗ ಯಶಸ್ವಿಯಾಗಿದ್ದು, ಇದನ್ನು ಎಲ್ಲ ಬಳಕೆದಾರರಿಗೆ ವಿಸ್ತರಿಸಲು ಟ್ವಿಟರ್ ಮುಂದಾಗಿದೆ.
“ಸೆಕ್ಯುರಿಟಿ ಕೀ ಸೆಟ್ಅಪ್ ಬಳಸಿ, ಬಳಕೆದಾರರು ತಮ್ಮ ಖಾತೆಯನ್ನು ಸುದೀರ್ಘವಾಗಿ ಸಂರಕ್ಷಿಸಿಟ್ಟುಕೊಳ್ಳಬಹುದು’ ಎಂದು ಭರವಸೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ