ಪ್ರಯಾಣಿಕರೇ ಗಮನಿಸಿ: ರೈಲ್ವೆ ಪ್ರಯಾಣ ಎಸಿ, ಸ್ಲೀಪರ್ ಕ್ಲಾಸ್ ಟಿಕೆಟ್ ದರ ದುಬಾರಿ ಸಾಧ್ಯತೆ?
ಸ್ಲೀಪರ್ ಕ್ಲಾಸ್ ಪ್ರಯಾಣಿಕರು ಕಡಿಮೆ ಯುಡಿಎಫ್ ಪಾವತಿಸುತ್ತಾರೆ.
Team Udayavani, Sep 28, 2020, 5:56 PM IST
ನವದೆಹಲಿ: ಪ್ರಯಾಣಿಕ (ಗ್ರಾಹಕ) ಅಭಿವೃದ್ಧಿ ಶುಲ್ಕ (ಯುಡಿಎಫ್) ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಇನ್ಮುಂದೆ ರೈಲ್ವೆ ಪ್ರಯಾಣದ ಟಿಕೆಟ್ ದರ ದುಬಾರಿಯಾಗುವ ನಿರೀಕ್ಷೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಜೀ ಮಾಧ್ಯಮಕ್ಕೆ ತಿಳಿಸಿರುವ ಮೂಲಗಳ ಪ್ರಕಾರ, ಮುಂದಿನ ತಿಂಗಳು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಯಾಣಿಕ ಅಭಿವೃದ್ಧಿ ಶುಲ್ಕ(ಯುಡಿಎಫ್) ಹೆಚ್ಚಳ ಮಾಡುವ ಬಗ್ಗೆ ಅನುಮತಿ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ಸ್ಲೀಪರ್ ಕ್ಲಾಸ್ ಹಾಗೂ ಎಸಿ ರೈಲ್ವೆ ಪ್ರಯಾಣದ ಟಿಕೆಟ್ ದರ 10ರಿಂದ 35 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದೆ.
ಯೂಸರ್ ಡೆವಲಪ್ ಮೆಂಟ್ ಫೀ (ಪ್ರಯಾಣಿಕ ಅಭಿವೃದ್ಧಿ ಶುಲ್ಕ) ರೈಲು ಪ್ರಯಾಣದ ವಿವಿಧ ಕೆಟಗರಿ ಹಾಗೂ ಕ್ಲಾಸ್ ಗಳಿಗೆ ಭಿನ್ನವಾಗಿರುತ್ತದೆ. ಯುಡಿಎಫ್ ಶುಲ್ಕವನ್ನು ಐದು ವಿವಿಧ ಕೆಟಗರಿಗಳಿಗೆ ಏರಿಸಲಾಗುತ್ತದೆ.
ರೈಲಿನ ಎಸಿ ಕ್ಲಾಸ್ ಪ್ರಯಾಣಿಕರು ಹೆಚ್ಚು ಶುಲ್ಕ ಪಾವತಿಸುತ್ತಾರೆ, ಸ್ಲೀಪರ್ ಕ್ಲಾಸ್ ಪ್ರಯಾಣಿಕರು ಕಡಿಮೆ ಯುಡಿಎಫ್ ಪಾವತಿಸುತ್ತಾರೆ. ಒಂದು ವೇಳೆ ಯುಡಿಎಫ್ ಶುಲ್ಕ ಏರಿಕೆಯಾದರೆ ರೈಲು ಪ್ರಯಾಣದ ಟಿಕೆಟ್ ದರ ಈ ಪ್ರಮಾಣದಲ್ಲಿ ಏರಿಕೆಯಾಗಲಿದೆ:
ಎಸಿ ಫಸ್ಟ್ ಟಯರ್: 35ರಿಂದ 40 ರೂಪಾಯಿ
ಎಸಿ ಟು ಟಯರ್ : 30 ರೂಪಾಯಿ
ಎಸಿ ತ್ರಿ ಟಯರ್ : 30 ರೂಪಾಯಿ
ಸ್ಲೀಪರ್ ಕ್ಲಾಸ್: 10 ರೂಪಾಯಿ
ಯುಡಿಎಫ್ ಶುಲ್ಕ ಖಾಸಗಿ ರೈಲ್ವೆ ನಿಲ್ದಾಣ ಬಳಸುವ ಪ್ರಯಾಣಿಕರಿಗೆ ಅನ್ವಯವಾಗಲಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ರೈಲ್ವೆ ಭೂ ಅಭಿವೃದ್ದಿ ಪ್ರಾಧಿಕಾರ (ಆರ್ ಎಲ್ ಡಿ) ನವದೆಹಲಿಯ 5 ಲಕ್ಷ ಸ್ಕ್ವಾರ್ ಮೀಟರ್ ನಷ್ಟು ಪ್ರದೇಶವನ್ನು ಮರು ನವೀಕರಣಕ್ಕಾಗಿ ಖಾಸಗಿ ಟೆಂಡರ್ ಗಳನ್ನು ಬಿಡ್ ಗೆ ಆಹ್ವಾನಿಸಿದೆ. ಇದರಲ್ಲಿ ಇನ್ನುಳಿದ 2.6 ಲಕ್ಷ ಸ್ಕ್ವಾರ್ ಮೀಟರ್ ಪ್ರದೇಶ ವಾಣಿಜ್ಯ ಉದ್ದೇಶದ ಬಳಕೆಗೆ ಬಳಸಲಾಗುವುದು ಎಂದು ವರದಿ ತಿಳಿಸಿದೆ.
ಆರ್ ಎಲ್ ಡಿಎ ಆದ್ಯತೆ ಮೇರೆಗೆ ನವದೆಹಲಿ, ತಿರುಪತಿ, ಡೆಹ್ರಾಡೂನ್, ನೆಲ್ಲೂರು ಹಾಗೂ ಪಾಂಡಿಚೇರಿ ರೈಲ್ವೆ ನಿಲ್ದಾಣಗಳ ಮರು ನವೀಕರಣಕ್ಕೆ ಸಿದ್ಧತೆ ನಡೆಸಿದೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ