ರಿಲಯನ್ಸ್ Jio ನೂತನ ಪ್ಯಾಕೇಜ್ ಘೋಷಣೆ; ಹೊಸ ಮತ್ತು ಹಳೇ ಪ್ಲ್ಯಾನ್ ವಿವರ ಚೆಕ್ ಮಾಡಿ…
ಡಿಸೆಂಬರ್ 6ರಿಂದ ಅನ್ವಯವಾಗುವಂತೆ ರಿಲಯನ್ಸ್ ಜಿಯೋದ ನೂತನ ಪ್ಲ್ಯಾನ್
Team Udayavani, Dec 6, 2019, 11:58 AM IST
ನವದೆಹಲಿ:ಏರ್ ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ಕರೆ ಮತ್ತು ಡೇಟಾ ಪ್ಯಾಕ್ ಗಳ ದರ ಏರಿಕೆ ಮಾಡಿದ ಬೆನ್ನಲ್ಲೇ ರಿಯಲನ್ಸ್ ಜಿಯೋ ಕೂಡಾ ಹೊಸ ದರದ ಪ್ಯಾಕೇಜ್ ಅನ್ನು ಘೋಷಿಸಿದೆ.
ಡಿಸೆಂಬರ್ 6ರಿಂದ ಅನ್ವಯವಾಗುವಂತೆ ರಿಲಯನ್ಸ್ ಜಿಯೋದ ನೂತನ ಪ್ಲ್ಯಾನ್ 129 ರೂಪಾಯಿಯಿಂದ ಆರಂಭಗೊಳ್ಳಲಿದೆ ಇದರ ಕಾಲಾವಧಿ 28 ದಿನಗಳು. 2,199 ರೂಪಾಯಿ ಪ್ಯಾಕೇಜ್ ಹಾಕಿಸಿದ್ರೆ 365 ದಿನಗಳ ಕಾಲಾವಧಿ. ಜಿಯೋ ಪ್ಲ್ಯಾನ್ ಗಳು ಗ್ರಾಹಕರಿಗೆ ಶೇ.300ರಷ್ಟು ಲಾಭವಾಗಲಿದೆ ಎಂದು ತಿಳಿಸಿದೆ.
ಬಹುತೇಕ ಹಳೇ ಪ್ಲ್ಯಾನ್ ಜತೆ ವಿಲೀನ ಮಾಡಿ ಹೊಸ ಪ್ಲ್ಯಾನ್ ಅನ್ನು ಜಿಯೋ ದರವನ್ನು ಪ್ರಕಟಿಸಿದೆ. ಹಿಂದಿನ 98 ರೂಪಾಯಿ ಪ್ಲ್ಯಾನ್ ಅನ್ನು 129 ರೂಪಾಯಿಗೆ ಏರಿಕೆ ಮಾಡಿದೆ. 28 ದಿನಗಳ ವ್ಯಾಲಿಡಿಟಿ, ಗ್ರಾಹಕರಿಗೆ ಪ್ರತಿದಿನ 2ಜಿಬಿ ಡಾಟಾ ಬಳಕೆ ಮಾಡಬಹುದು.
ಹಿಂದಿನ 153 ರೂಪಾಯಿ ಪ್ಯಾಕೇಜ್ ಅನ್ನು 199 ರೂಪಾಯಿಗೆ ಏರಿಕೆ ಮಾಡಿದ್ದು, ಬಳಕೆದಾರರು ಒಂದು ಸಾವಿರ ನಿಮಿಷಗಳ ಕಾಲಾವಧಿ ಲಭ್ಯವಾಗಲಿದೆ. 28 ದಿನಗಳ ವ್ಯಾಲಿಡಿಟಿ, ಜಿಯೋ ಟು ಜಿಯೋ ಅನಿಯಮಿತ ಕರೆ ಮಾಡಬಹುದಾಗಿದೆ. ದಿನಂಪ್ರತಿ 1.5 ಜಿಬಿ ಡಾಟಾ ಬಳಕೆ ಮಾಡಬಹುದಾಗಿದೆ.
198 ರೂಪಾಯಿ ಪ್ಲ್ಯಾನ್ ನ ಪರಿಷ್ಕೃತ ದರ 249 ರೂಪಾಯಿಗೆ ಏರಿಕೆ ಮಾಡಲಾಗಿದೆ. 28 ದಿನಗಳ ವ್ಯಾಲಿಡಿಟಿ. ದಿನಕ್ಕೆ 2ಜಿಬಿ ಡಾಟಾ ಬಳಕೆ ಮಾಡಬಹುದಾಗಿದೆ.
ಜಿಯೋದ ನೂತನ ಪ್ಲ್ಯಾನ್ ನ 329 ರೂಪಾಯಿ ಪ್ಯಾಕೇಜ್ ನಲ್ಲಿ 6 ಜಿಬಿ ಮೊಬೈಲ್ ಡಾಟಾ, 84 ದಿನಗಳ ವ್ಯಾಲಿಡಿಟಿ. ಹಿಂದಿನ 299 ರೂಪಾಯಿ ಪ್ಲ್ಯಾನ್ ಅನ್ನು 349 ರೂಪಾಯಿಗೆ ಏರಿಕೆ ಮಾಡಲಾಗಿದೆ. 28 ದಿನಗಳ ವ್ಯಾಲಿಡಿಟಿ, ದಿನಂಪ್ರತಿ 3ಜಿಬಿ ಡಾಟಾ ಬಳಕೆ ಮಾಡಬಹುದಾಗಿದೆ. ಈ ಪ್ಲ್ಯಾನ್ ನಲ್ಲಿ ಬಳಕೆದಾರರು ಒಟ್ಟು 84ಜಿಬಿ ಡಾಟಾ ಪಡೆಯಲಿದ್ದಾರೆ.
399 ರೂಪಾಯಿ ಹೊಸ ಪ್ಲ್ಯಾನ್ ನಲ್ಲಿ ಗ್ರಾಹಕರು ದಿನಂಪ್ರತಿ 1.5 ಜಿಬಿ ಡಾಟಾ ಬಳಸಬಹುದಾಗಿದ್ದು, 56 ದಿನಗಳ ವ್ಯಾಲಿಡಿಟಿ ಇರಲಿದೆ. 444 ರೂಪಾಯಿ ಪ್ಲ್ಯಾನ್ ನಲ್ಲಿ 56 ದಿನಗಳ ವ್ಯಾಲಿಡಿಟಿ.
ಹಿಂದಿನ 594 ರೂಪಾಯಿ ಪ್ಲ್ಯಾನ್ ಅನ್ನು 599 ರೂಪಾಯಿಗೆ ಏರಿಕೆ ಮಾಡಲಾಗಿದೆ. 84 ದಿನಗಳ ವ್ಯಾಲಿಡಿಟಿ, ದಿನಂಪ್ರತಿ 2ಜಿಬಿ ಡಾಟಾ ಬಳಕೆ ಮಾಡಬಹುದಾಗಿದೆ. ಒಟ್ಟು 168 ಜಿಬಿ ಡಾಟಾ ಸಿಗಲಿದೆ.
1299 ರೂಪಾಯಿ ಪ್ಲ್ಯಾನ್ ನಲ್ಲಿ ಒಂದು ವರ್ಷದ ವ್ಯಾಲಿಡಿಟಿ, 24 ಜಿಬಿ ಡಾಟಾ ಬಳಕೆ ಮಾಡಬಹುದಾಗಿದೆ. ಹಿಂದಿನ 1,699 ರೂಪಾಯಿ ಪ್ಲ್ಯಾನ್ ನ ಪರಿಷ್ಕೃತ ದರ 2,199 ರೂಪಾಯಿ. 365 ದಿನಗಳ ವ್ಯಾಲಿಡಿಟಿ, ಒಟ್ಟು 547 ಜಿಬಿ ಡಾಟಾ ಲಭ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ