ಸಣ್ಣ ಉದ್ಯಮಗಳು ಶುರುವಾಗಿವೆ, ಆದರೆ….
Team Udayavani, May 9, 2020, 6:53 AM IST
ಸಾಂದರ್ಭಿಕ ಚಿತ್ರ
ದೇಶದಲ್ಲಿ ಒಂದೊಂದೇ ಅತಿಸಣ್ಣ, ಸಣ್ಣ, ಮಧ್ಯಮ ಮಟ್ಟದ ಉದ್ಯಮಗಳು ಪುನಾರಂಭಗೊಳ್ಳುತ್ತಿವೆ. ಆದರೆ… ಪರಿಸ್ಥಿತಿ ಇನ್ನೂ ಸುಗಮವಾಗಿಲ್ಲ. ಉದ್ಯಮಿಗಳ ಮುಂದೆ ಸವಾಲುಗಳ ಸರಮಾಲೆಯೇ ಇದೆ. ಅದರ ಕಿರುನೋಟ ಇಲ್ಲಿದೆ.
ಕಾರ್ಮಿಕರೇ ಇಲ್ಲ
ಕೋವಿಡ್ ದಿಂದ ಭಯಭೀತರಾಗಿ ಕಾರ್ಮಿಕರೆಲ್ಲ ವಾಪಸ್ ತಮ್ಮ ಹಳ್ಳಿಗಳಿಗೆ ಹಿಂತಿರುಗಿದ್ದಾರೆ. ಬಹುತೇಕರು ಯಾವುಯಾವುದೋ ರಾಜ್ಯಗಳಿಂದ ಬಂದವರು. ಅವರೆಲ್ಲ
ಸದ್ಯಕ್ಕಂತೂ ಹಿಂತಿರುಗಿ ಬರುವ ಲಕ್ಷಣವಿಲ್ಲ. ಕಾರಣ, ಸದ್ಯ ರಾಜ್ಯಸರ್ಕಾರಗಳು ಬಡವರ, ಕಾರ್ಮಿಕರ ನೆರವಿಗೆ ನಿಂತಿವೆ. ಆದ್ದರಿಂದ ಅವರಿಗೆ ಜೀವನ ತೀರಾ ಕಷ್ಟವೇನಲ್ಲ.
ಅವರನ್ನು ಮತ್ತೆ ಇತ್ತ ಸೆಳೆಯುವುದು ಕಷ್ಟ
ವಿಪರೀತ ಹಣ ಖರ್ಚು
ಈಗ ತರಬೇತಾದ ಕಾರ್ಮಿಕರನ್ನು ಉಳಿಸಿಕೊಳ್ಳಬೇಕಾದರೆ ಹೆಚ್ಚುಹೆಚ್ಚು ಹಣ ಕೊಡಲೇಬೇಕು. ಇದು ಸಣ್ಣ ಉದ್ಯಮಗಳಿಗೆ ಆರ್ಥಿಕ ಹೊಡೆತ ನೀಡುತ್ತಿದೆ. ಇದರಿಂದ ಸಮಯದ ಮಿತಿಯಲ್ಲಿ ಕೆಲಸಗಳನ್ನು ಮುಗಿಸಲು ಆಗುತ್ತಿಲ್ಲ. ಆದ್ದರಿಂದ ಸ್ಥಳೀಯವಾಗಿಯೇ ಕಾರ್ಮಿಕರನ್ನು ಹುಡುಕಿಕೊಳ್ಳುವ ಅನಿವಾರ್ಯತೆಯಲ್ಲಿ ಉದ್ಯಮಿಗಳಿದ್ದಾರೆ.
ಸಾಗಾಟ ಇನ್ನೊಂದು ತಾಪತ್ರಯ
ಅತಿಸಣ್ಣ, ಸಣ್ಣ, ಮಧ್ಯಮ ಗಾತ್ರದ ಉದ್ಯಮಿಗಳಿಗೆ ಉತ್ಪಾದನೆ ಪುನಾರಂಭಿಸಲು ಶುರು ಮಾಡಿದ್ದರೂ, ವಸ್ತುಗಳ ಸಾಗಾಟ ಸಮಸ್ಯೆಯಾಗಿದೆ. ಮೊದಲನೆಯದಾಗಿ ವಾಹನಗಳ ಸಂಚಾರಕ್ಕೆ ನಿಬಂಧನೆಯಿದೆ. ಇನ್ನೊಂದು ಹಲವು ಕಡೆ ಪರಿಶೀಲನೆಯಿರುವುದರಿಂದ ಯಾವುದೋ ತಪ್ಪಿನ ಕಾರಣ ಹೇಳಿ, ಕಂಪನಿಯನ್ನು ತತ್ಕಾಲಕ್ಕೆ ಮುಚ್ಚಲು ಹೇಳಿದರೆ? ಈ ತಾಪತ್ರಯಗಳಿಗೆ ಅಂಜುತ್ತಿದ್ದಾರೆ.
ಜಾಮ್, ಸಾಸ್ಗೂ ಕೊರತೆ
ದಿನನಿತ್ಯ ಜನ ಬಳಸುವ ಜಾಮ್, ಸಾಸ್, ವಿವಿಧ ಹಣ್ಣಿನ ರಸಗಳು, ಪೂರಿಗಳನ್ನೂ ಪೂರೈಸಲು ಸಾಧ್ಯವಾಗುತ್ತಿಲ್ಲ. ಇವನ್ನು ತಯಾರಿಸಲು ಬೇಕಾದ ಕೆಲಸಗಾರರು, ವಸ್ತುಗಳು ಸಿಗುತ್ತಿಲ್ಲ. ಜೊತೆಗೆ ಅಗತ್ಯ ಹಣವೂ ಇಲ್ಲ. ಮುಂದಿನ ದಿನಗಳಲ್ಲಿ ಈ ಉತ್ಪನ್ನಗಳಿಗೆ ಬೇಡಿಕೆಯಾದರೂ, ಪೂರೈಕೆ ಕಡಿಮೆಯಾಗಬಹುದು ಎಂದು ಊಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್